ಅಮೀನ ರೆಡ್ಡಿ ಹಠಾವೋ ಬಿಜೆಪಿ ಬಾಚಾವೋ: ಸುಬೇದಾರ

0
78

ಶಹಾಪೂರ: ಯಾದಗೀರಿ ಬಿಜೆಪಿ ಜಿಲ್ಲಾ ಅದ್ಯಕ್ಷರಾದ ಆಮೀನ್ ರೆಡ್ಡಿ ಅವರನ್ನು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಮೂಲಕ ಬಿಜೆಪಿ ಪಕ್ಷವನ್ನು ಉಳಿಸಿಕೊಳ್ಳಬೇಕು ಎಂದು ಶಹಾಪೂರ ಮತಕ್ಷೇತ್ರದ ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಆಗ್ರಹಿಸಿದರು‌.

ಈ‌ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ರಾಯಚೂರು ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸೋಲಲು ಯಾದಗಿರಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಮಾಡುವಲ್ಲಿ ವಿಫಲರಾಗಿ, ಕೇವಲ ಮೋದಿಯವರ ಹೆಸರಿನಲ್ಲಿ ಮತ ದೊರೆಯಲಿದೆ ಎನ್ನುವ ದುಸಾಹಸ ದಿಂದ ಸ್ಥಳೀಯ ನಾಯಕರನ್ನು ಒಗ್ಗೂಡಿಸುವಲ್ಲಿ ಆದ ಕೊರತೆಯಿಂದಾಗಿ ಹಾಗೂ ಸ್ಥಳೀಯ ನಾಯಕರ ಕಡೆಗಣನೆ ಮತ್ತು ವಿಶೇಷವಾಗಿ ಮೈತ್ರಿ ಪಕ್ಷದ ಮಾಜಿ ಶಾಸಕರಾದ ಗುರು ಪಾಟೀಲ ಅವರನ್ನು ಚುನಾವಣಾ ಕಣದಲ್ಲಿ ಸಕ್ರಿಯಗೊಳಿಸುವಲ್ಲಿ ವಿಫಲವಾಗಿರುವ ಯಾದಗೀರಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮೀನರಡ್ಡಿ ಯಾಳಗಿ ಅವರೇ ನೇರ ಕಾರಣೀಭೂತರು, ಇದಕ್ಕೆ ಪೂರಕವೆಂಬಂತೆ ಕಳೆದ ಬಾರಿ ರಾಯಚೂರು ಲೋಕಸಭಾ ಚುನಾವಣೆಯಲ್ಲಿ ಶಹಾಪೂರ ಮತಕ್ಷೇತ್ರದಿಂದ 19000 ಸಾವಿರ ಅಧಿಕ ಮತಗಳ ಅಂತರದಿಂದ ವೋಟ್ ನೀಡುವ ಮುಖಂತಾರ ಬಿಜೆಪಿ ಗೆಲುವಿಗೆ ಪಾತ್ರವಾಗಿತ್ತು, ಪ್ರಸ್ತುತ ಸಂಘಟನೆ ಇಲ್ಲದ ಕಾರಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು‌.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here