ಅಖಂಡ ವಚನ ಪಾರಾಯಣ ಪ್ರಾರಂಭ

0
37

ಭಾಲ್ಕಿ: ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ೧೩೧ನೇ ಜಯಂತ್ಯೋತ್ಸವ ನಿಮಿತ್ಯ ಇಂದಿನಿಂದ ಅಖಂಡ ವಚನ ಪಾರಾಯಣ ಡಿಸೆಂಬರ್ ೨೧ ರವರೆಗೆ ನಡೆಸಲು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸನ್ನಿಧಾನದಲ್ಲಿ ಆರಂಭಿಸಲಾಯಿತು. ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು, ಪೂಜ್ಯ ಬಸವಲಿಂಗ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ಪಾರಾಯಣ ಸಮಿತಿ ರಚನೆ ಮಾಡಿ ಗೌರವಾಧ್ಯಕ್ಷರಾಗಿ ವಿಶ್ವನಾಥಪ್ಪ ಬಿರಾದಾರ, ಅಧ್ಯಕ್ಷರಾಗಿ ಶಿವಕುಮಾರ ಬೊಳೆಗಾಂವ, ಕಾರ್ಯದರ್ಶಿಯಾಗಿ ಗಂಗಮ್ಮ ಶಂಕರೆಡ್ಡಿ ಎದಲೆ ಅವರಿಗೆ ಆಯ್ಕೆ ಮಾಡಲಾಯಿತು. ಪ್ರಾರಂಭದ ನಿಮಿತ್ಯ ಪೂಜ್ಯ ಶ್ರೀಗಳು ಹನ್ನೊಂದು ವಚನಗಳು ಪಾರಾಯಣ ಮಾಡಿ ಚಾಲನೆ ಕೊಟ್ಟರು.

Contact Your\'s Advertisement; 9902492681

ಈ ಸಮಾರಂಭದಲ್ಲಿ ಸತೀಶ ಅಷ್ಟೂರೆ, ಶರಣಪ್ಪ ಬಿರಾದಾರ, ಧನರಾಜ ಬಂಬುಳಗೆ, ಅಕ್ಕನಬಳಗದ ಶರಣೆಯರು ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ನಿರೂಪಿಸಿದರು. ಪ್ರತಿದಿನ ಬೆಳಿಗ್ಗೆ ೭-೦೦ ಗಂಟೆಗೆ ಆರಂಭಿಸಿ ಸಾಯಂಕಾಲ ೬-೦೦ ಗಂಟೆಗೆವರೆಗೆ ಸರಣಿ ಪ್ರಕಾರ ವಚನ ಓದಲು ಎಲ್ಲರಿಗೂ ಅವಕಾಶವಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here