ಶಹಾಬಾದ: ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಡಾ.ಬಾಬು ಜಗಜೀವನರಾಮ ವೃತ್ತದ ನಾಮಫಲಕದಲ್ಲಿನ ಭಾಚಿತ್ರವನ್ನು ಹರಿದು ಹಾಕಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಆಗ್ರಹಿಸಿ ಬುಧವಾರ ಭಾರತೀಯ ಜನತಾ ಪಾರ್ಟಿ ಎಸ್.ಸಿ.ಮೊರ್ಚಾ ವತಿಯಿಂದ ನಗರ ಪೊಲೀಸ್ ಠಾಣೆಯ ಪಿಐ ಸಂತೋಷ ಹಳ್ಳೂರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪದೇ ಪದೇ ಡಾ.ಬಾಬು ಜಗಜೀವನರಾಮ ನಾಮಫಲಕದ ಬೋರ್ಡ್ ಬ್ಯಾನರ್ ಹರಿದು ಹಾಕಿ ಅವಮಾನ ಮಾಡುತ್ತಿದ್ದಾರೆ. ಬೇಗನೆ ದು?ರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನಾಮಫಲಕದ ಸ್ಥಳದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಬೇಕೆಂದು ಎಸ್.ಸಿ.ಮೊರ್ಚಾ ವತಿಯಿಂದ ಭಾರತೀಯ ಜನತಾ ಪಾರ್ಟಿ ಎಸ್.ಸಿ.ಮೊರ್ಚಾ ವತಿಯಿಂದ ಮನವಿಪತ್ರ ಸಲ್ಲಿಸಲಾಯಿತು.
ಬಿಜೆಪಿ ಎಸ್.ಸಿ.ಮೊರ್ಚಾ ಅಧ್ಯಕ್ಷ ಸಂಜಯ ವಿಠಕರ್, ಯುವ ಮೋರ್ಚಾದ ಅಧ್ಯಕ ದೀನೆಶ ಗೌಳಿ, ಎಸ್.ಸಿ.ಮೊರ್ಚಾ ಪ್ರಧಾನ ಕಾರ್ಯದರ್ಶಿ ಅಮರ ಕೊರೆ, ಉಪಾಧ್ಯಕ್ಷರಾದ ಉಮೇಶ ಪೊಚೆಟ್ಟಿ, ಸಂತೋ? ಹುಲಿ, ಪ್ರಮುಖರಾದ ನಾರಾಯಣ ಕಂದಕೂರ, ಮನೋಹರ ಮೇತ್ರೆ, ರೇವಣಸಿದ್ದಪ್ಪ ಪೊತರಾಜ, ಅಜೇಯ ಯಲ್ಲಪ್ಪ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.