ವಾಡಿ; ಪಟ್ಟಣದಲ್ಲಿ ದಸರಾ ಹಬ್ಬ ವಿಜೃಂಭಣೆಯಿಂದ ಜರುಗಿತು.ಪ್ರಮುಖ ಮಂದಿರಗಳಲ್ಲಿ ಬನ್ನಿ ಪೂಜೆ ಮಾಡಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಕೊರಿದರು.
ರೈಲ್ವೆ ಕಾಲೋನಿಯಲ್ಲಿ ಪ್ರತಿಷ್ಠಾಪಿಸಿದ ಭವಾನಿ ದೇವಿಯಗೆ ಪಟ್ಟಣದ ಸಾವಿರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಬೃಹತ್ ಗಾತ್ರದ ಸುಮಾರು 50 ಅಡಿ ಎತ್ತರದ ರಾವಣ ದಹನವನ್ನು ಕಣ್ತುಂಬಿಕೊಂಡರು.
ರಾವಣ ದಹನ ಕಾರ್ಯಕ್ರಮದಲ್ಲಿ ಲೋಕಸಭಾ ಸದಸ್ಯ ಡಾ ಉಮೇಶ್ ಜಾಧವ್ ಮಾತನಾಡಿ ಇಂತಹ ಶಕ್ತಿ ಮಾತೆಯ ಆರಾಧನೆ ಯಲ್ಲಿ ಪಾಲ್ಗೊಂಡ ಈ ಭಕ್ತ ಸಮೂಹ ನಮ್ಮ ಸನಾತನ ಶಕ್ತಿಯ ಸಂಕೇತವಾಗಿದೆ, ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಈ ಜನ ಸಾಗರ ಒಂದು ಎಚ್ಚರಿಕೆಯ ಗಂಟೆಯಾಗಿದೆ,ನಾವು ಭಾರತೀಯರು ಭಾರತ್ ಮಾತಾ ಕೀ ಜೈ ಅಂದು ಬದುಕುವರು ಎಂದರು.
ದುಷ್ಟ ಶಕ್ತಿಯನ್ನು ಸಂಹರಿಸಿ ಸನಾತನ ಧರ್ಮವನ್ನು ಎತ್ತಿ ಹಿಡಿದ ದೇವಿ, ರಾಮನ ಆರಾಧನೆಯೇ ಈ ಪವಿತ್ರ ದಸರಾ, ಇದು ನಮಗೆಲ್ಲಾ ಹೆಮ್ಮೆಯ ಹಬ್ಬ ವಾಗಿದೆ ಎಂದರು.
ರೈಲ್ವೆ ನಿಲ್ದಾಣದ ಪ್ರಭಂದಕ ಜೆ ಎನ್ ಪರೇಡಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮೂದ್ ಸಾಹೇಬ್,ಉತ್ಸವ ಸಮಿತಿ ಅಧ್ಯಕ್ಷ ಭಗವತ್ ಸುಳೆ,ಬಿಜೆಪಿ ಯುವ ಮುಖಂಡ ವಿಠಲ ನಾಯಕ,ಪಿಎಸ್ ಐ ತಿರುಮಲೇಶ್ ಕುಂಬಾರ,ಮುಖಂಡರಾದ ಬಸವರಾಜ ಪಂಚಾಳ, ವೀರಣ್ಣ ಯಾರಿ, ಹರಿ ಗಲಾಂಡೆ, ಭೀಮಶಾ ಜೀರೋಳ್ಳಿ,ಬಸವರಾಜ ಕೊಲಿ,ರಾಮಚಂದ್ರ ರಡ್ಡಿ,ಸಾಲೋಮಣ್ಣ ರಾಜಣ್ಣ,ಮಹೇಂದ್ರ ಕುಮಾರ ಪುಜಾರಿ,ನಾಗೇಂದ್ರ ಜೈಗಂಗಾ ಇತರರು ಇದ್ದರು.
ಸುರಪುರ: ರಾಜ್ಯದಲ್ಲಿಯೇ ಅತ್ಯುತ್ತಮವಾದ ಕನ್ನಡ ಸಾಹಿತ್ಯ ಸಂಘ ಎಂದು ಸರಕಾರ ಗುರುತಿಸಿ ಕಳೆದ ವರ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ,ಇದಕ್ಕೆ ಅನೇಕ…
ಕಲಬುರಗಿ: ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಸಿ.ಎಂ ಕಪ್ ಕ್ರೀಡಾಕೂಟಕ್ಕೆ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಚಾಲನೆ…
ಕಲಬುರಗಿ: ಸದಾ ಕನ್ನಡಪರ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣಗೊಂಡಿರುವ ಸಾಹಿತ್ಯ ಮಂಟಪಕ್ಕೆ ಅಗತ್ಯವಿರುವ ಸಲಕರಣೆಗಳ ಖರೀದಿಗೆ…
ಬೆಂಗಳೂರು: ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ರವಿವಾರ ತಳವಾರ ಸಮುದಾಯದ ಸರಕಾರಿ ನೌಕರರ ಸಿಂಧುತ್ವ…
ಕಲಬುರಗಿ; ಪ್ರಾಚೀನ ಭಾರತೀಯ ಜ್ಞಾನ ವ್ಯವಸ್ಥೆಯು ಜೀವನದಲ್ಲಿ ಸವಾರ್ಂಗೀಣ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಸಾಧಿಸಲು ಎಲ್ಲಾ ಸಮಸ್ಯೆಗಳಿಗೆ ಉತ್ತರ ಮತ್ತು…
ಕಲಬುರಗಿ: 'ಕಾವ್ಯ ದೊಂಬರಾಟವಲ್ಲ. ನಿಜವಾದ ಹಸಿವು ಗುರುತಿಸುವುದು ಕಾವ್ಯ' ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಅಭಿಪ್ರಾಯ…