ವಾಡಿ; ಪಟ್ಟಣದಲ್ಲಿನ ದೋಷಪೂರಿತ ಮತದಾರರ ಪಟ್ಟಿ ಸರಿಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದರು.
ಪಟ್ಟಣದಲ್ಲಿನ 23 ವಾರ್ಡಗಳ ಮತದಾರರ ಪಟ್ಟಿ ಪರಿಶೀಲಿಸಿದಾಗ ವಾರ್ಡ್ ನಂ 04 ರಲ್ಲಿನ (ಭಾಗ 04 ). ಕ್ರಮ ಸಂಖ್ಯೆ 1574 ರಿಂದ 1663 ವರೆಗೆ ವಾರ್ಡ್ ನಂ 21ರಲ್ಲಿ ವಾಸಿಸುವವರಾಗಿದ್ದಾರೆ. ಅದೇ ರೀತಿ 23ವಾರ್ಡ ನ ಇಂದಿರಾನಗರದಲ್ಲಿ ಬಹುತೇಕ ವಿಜಯನಗರದ ವಾರ್ಡ್ ನಂ 22ರಲ್ಲಿನ ನಿವಾಸಿಗಳು ಸೇರ್ಪಡೆ ಯಾಗಿರುವುದು.
ವಾರ್ಡ್ ನಂ 06,07,08,09,10,13,14 ರಲ್ಲಿ ಬಹಳಷ್ಟು ಮತದಾರರ ಹೆಸರು ಕೈಬಿಟ್ಟು ಒಂದಕ್ಕಿಂತ ಹೆಚ್ಚು ಹೆಸರು ಹೊಂದಿರುವ ಹಾಗೂ ಮರಣ ಹೊಂದಿರಿವವರ ಹೆಸರು ಡೀಲಿಟ್ ಮಾಡದೆ ಇರುವುದು, ವಾರ್ಡ್ ನಂ 20ರಲ್ಲಿನ ಮತದಾರರ ಹೆಸರು ವಾರ್ಡ್ ನಂ 08 ರಲ್ಲಿನವರಾಗಿರುವುದು ಈ ರೀತಿಯ ಅನೇಕ ದೋಷಗಳು ವಾರ್ಡ್ ಗಳ ಮತದಾರರ ಪಟ್ಟಿಯಲ್ಲಿ ಇರುವುದರಿಂದ ಆದಷ್ಟು ಬೇಗ ಇನ್ನೊಮ್ಮೆ ಪರಿಶೀಲಿಸಿ ಸರಿಪಡಿಸಿ ಎಂದು ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ವೀರಣ್ಣ ಯಾರಿ, ಪುರಸಭೆ ಮಾಜಿ ಸದಸ್ಯ ರವಿ ನಾಯಕ ಮುಖ್ಯಾಧಿಕಾರಿ ಫಕ್ರುದ್ದಿನ ಅವರಿಗೆ ಮನವಿ ಸಲ್ಲಿಸಿದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಚಿತ್ತಾಪುರ ತಾಲೂಕಿನ…
ಕಲಬುರಗಿ: ವಿಶ್ವ ಹೃದಯದ ದಿನದ ಅಂಗವಾಗಿ ಸ್ಥಳೀಯ ಖಾಜಾ ಬಂದಾನವಾಜ ವಿವಿಯ ಖಾಜಾ ಬಂದಾನವಾಜ ಆಸ್ಪತ್ರೆಯ ಜನರಲ ಮೆಡಿಸಿನ್ ವಿಭಾಗದಲ್ಲಿ…
ಕಲಬುರಗಿ: ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಅನಿಲ್ ಕಲಾಸ್ಕರ್ ಅವರು "ಸಾಫ್ಟ್ವೇರ್ ಇಂಜಿನಿಯರಿಂಗ್ ಮತ್ತು AI" ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.…
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…