ಬಿಸಿ ಬಿಸಿ ಸುದ್ದಿ

ನೌಕರರಾಗಬೇಡಿ ಉದ್ಯೋಗದಾತರಾಗಿ: ಶ್ರೀ ಚಂದ್ರಗುಂಡ ಶಿವಾಚಾರ್ಯರು

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಶಿಕ್ಷಣ ಟ್ರಸ್ಟ್(ರಿ) ಅಡಿಯಲ್ಲಿ 75ನೇ ಗಣರಾಜ್ಯೋತ್ಸವದ ನಿಮಿತ್ಯ ಪಾವನ ಸಾನಿಧ್ಯವನ್ನು ವಹಿಸಿಕೊಂಡು ಧ್ವಜಾರೋಹಣ ನೆರವೇರಿಸಿದ ಪರಮಪೂಜ್ಯ ಶ್ರೀ ಷ ಬ್ರ ಚಂದ್ರಗುಂಡ ಶಿವಾಚಾರ್ಯರು ಮಕ್ಕಳು ಶಿಕ್ಷಣವನ್ನು ಪಡೆದು ಇನ್ನೊಬ್ಬರಲ್ಲಿ ನೌಕರಿ ಮಾಡುವವರಾಗಬಾರದು ಸಾವಿರಾರು ಜನರಿಗೆ ದ್ಯೋಗದಾತರಾಗಬೇಕು ಎಂದು ಆಶೀರ್ವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ವೇದಿಕೆ ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಿನಾಥ ತುಪ್ಪದ, ಯುವ ಮುಖಂಡರಾದ ಗುರುನಾಥ ಜುಲ್ಪಿ, ಜಗನ್ನಾಥ ಆಲಮೇಲ, ಮಲ್ಲಿನಾಥ ದಯಾಮಣಿ, ಸಿದ್ದರಾಮಪ್ಪ ಆಲಮೇಲ, ರಾಚಯ್ಯ ನಂದಿಕೋಲ, ವೀರೇಶ ತತ್ತಿ ಉಪಸ್ಥಿತರಿದ್ದರು. ಕರಿಬಸವೇಶ್ವರ ವೇದ ಮತ್ತು ಸಂಸ್ಕøತ ಪಾಠಶಾಲೆ ವಿದ್ಯಾರ್ಥಿಗಳು ವೇದಘೋಷ ಮಾಡಿದರು. ಶ್ರೀ ಕರಿಬಸವೇಶ್ವರ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಸಿದ್ದಮಲ್ಲಯ್ಯ ಯಂಕಂಚಿ ಅವರು ಸ್ವಾಗತಿಸಿದರು. ಚಂದ್ರಗುಂಡ ಶಿವಾಚಾರ್ಯರು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಷಣವನ್ನು ಕನ್ನಡ ಇಂಗ್ಲೀಷ ಮತ್ತು ಹಿಂದಿಯಲ್ಲಿ ಮಾಡಿದರು.

ವಿದ್ಯಾರ್ಥಿಗಳಿಂದ ಯೋಗಾಸನ ಮತ್ತು ಪಿರಾಮಿಡ್ ರಚನೆಯ ವೃತ್ತಗಳನ್ನು ಮಾಡಿದರು. ಜಯಶ್ರೀ ಬಿದನೂರ ಹಾಗೂ ಜಗದೇವಿ ಶಿಕ್ಷಕಿಯರು ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಶಿಕ್ಷಕರಾದ ವೀರೇಶಶಾಸ್ತ್ರಿ, ದೇಸಾಯಿಮಠ, ಕಾಶಿನಾಥ ಬೆನಕಹಳ್ಳಿ, ಶಿವಕುಮಾರ ಪಾಟೀಲ್, ಅಂಬರೀಶ್ ಬಂಗಾರಶೆಟ್ಟಿ, ಶ್ರೀಶೈಲ ಯತ್ನಾಳ, ವಿಜಯಕುಮಾರ ಚೌವ್ಹಾಣ್, ಚನ್ನಬಸಪ್ಪ ಹಳ್ಳಿ, ರೇವಣಸಿದ್ದ ಕೋಡ್ಲಿ, ಶರಣಕುಮಾರ ಬಂಡಿ ಶಿಕ್ಷಕರಾದ ಮಹಾನಂದ ಕಾಳ್ನೂರ, ಶಶಿಕಲಾ ವಾಲಿಕಾರ, ಶೋಭಾ ತಾಯಿ, ಲಕ್ಷ್ಮೀದಯಾಮಣಿ, ರೇಖಾ ಕಾಡಾದಿ, ಶಾಂತಲಾ ಆಲಮೇಲ, ರೇವತಿ ಸಂದಿಮನಿ, ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ರಾಜಶೇಖರ ಮಠ, ಅನಿಲಕುಮಾರ ಚಟ್ಟಿ, ವಿನಾಯಕ ತುಪ್ಪದ ಉಪಸ್ಥಿತರಿದ್ದರು. ಶ್ರೀ ಕರಿಬಸವೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶರಣಕುಮಾರ ಗಂಧದಮಠ ಅವರು ವಂದಿಸಿದರು. ಬಸವರಾಜ ಚಟ್ಟಿ ಅವರು ನಿರೂಪಿಸಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

5 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

5 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

5 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

5 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

6 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

7 hours ago