ಕಲಬುರಗಿ; ಕೆ.ಇ.ಬಿ. ಇಂಜೀನಿಯರಿಂಗ್ ಅಸೋಸಿಯೇಷನ್, ಜೆಸ್ಕಾಂ ಫಂಕ್ಷನ್ ಹಾಲ್ನಲ್ಲಿ ಕರ್ನಾಟಕ ರಾಜ್ಯ ರೆಡ್ಡಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಿಲ್ಲಾ ರೆಡ್ಡಿ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ, ಮಹಾಯೋಗಿ ವೇಮನ ಜಯಂತಿ ಹಾಗೂ ಮಾಜಿ ರಾಷ್ಟ್ರಪತಿ ನೀಲಂಸಂಜೀವರೆಡ್ಡಿಯವರ ರಾಜಕೀಯ ಜೀವನ ಕುರಿತು ಡಾ. ಹನುಮಂತ ರೆಡ್ಡಿ ಬಿ. ಶೇರಿಕಾರ ಮಂಡಿಸಿರುವ ಪ್ರಭಂದಕ್ಕೆ ಬುದ್ಧ ಗಯಾ ಪಾಟ್ನಾ ಬಿಹಾರ ವಿಶ್ವವಿದ್ಯಾಲಯ ಡಾಕ್ಟರೆಟ್ ಪದವಿ ನೀಡಿರುವದರಿಂದ ಅವರ ಪುಸ್ತಕ ಬಿಡುಗಡೆ ಮತ್ತು ಸನ್ಮಾನ ಹಾಗೂ ನಿವೃತ್ತಿ ಹೊಂದಿದ ರೆಡ್ಡಿ ನೌಕರರಿಗೆ ಸನ್ಮಾನ ಕಾರ್ಯಕ್ರಮವನ್ನು ಜಿಲ್ಲಾರೆಡ್ಡಿ ಸಮಾಜದ ಅಧ್ಯಕ್ಷ ಚೆನ್ನಾರೆಡ್ಡಿ ಪಾಟೀಲ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾಯಕ ಫೌಂಡೇಶನ್ ಅಧ್ಯಕ್ಷ ಶಿವರಾಜ್ ಪಾಟೀಲ, ಕರ್ನಾಟಕ ರಾಜ್ಯ ರೆಡ್ಡಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜಾಧ್ಯಕ್ಷರಾದ ಎಸ್.ಬಿ.ಮಾಚಾ, ಕರ್ನಾಟಕ ರಾಜ್ಯರೆಡ್ಡಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಿರ್ದೆಶಕರು ಹಾಗೂ ಕಲಬುರಗಿ ಜಿಲ್ಲಾ ರೆಡ್ಡಿ ನೌಕರರ ಸಂಘ ಅಧ್ಯಕ್ಷ ಡಾ.ಹಣಮಂತರೆಡ್ಡಿ ಬಿ. ಶೇರಿಕಾರ, ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಡಾ; ವಿಶಾಲಾಕ್ಷಿ ವಿ. ಕರೆಡ್ಡಿ, ನಿವೃತ್ತ ಎ.ಇ.ಇ. ಜಿಲ್ಲಾ ರೆಡ್ಡಿ ನೌಕರರ ಸಂಘದ ಗೌರವಾಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ಪಲ್ಲಾ, ಕಾಂಗ್ರೆಸ್ ಮುಖಂಡ ಅಭಿಷೇಕ ಪಾಟೀಲ, ಮಾಜಿ ಉಪಮಹಾಪೌರ ಮಹೇಶ ಹೊಸೂರಕರ್, ಸೋಮನಾಥರೆಡ್ಡಿ ಪುರಾಮ, ಡಾ.ಎಸ್.ಎಲ್. ಪಾಟೀಲ, ಡಾ.ಅಶೋಕ ರೆಡ್ಡಿ, ಡಾ.ಸೋಮನಾಥ ಕರೆಡ್ಡಿ, ಡಾ.ಶರಣ ಬಸಪ್ಪ ಮಾಲಿಪಾಟೀಲ, ಗೋವಿಂದ ರೆಡ್ಡಿ, ಅರುಣಾ ರೆಡ್ಡಿ ಇದ್ದರು.
ಈ ಕಾರ್ಯಕ್ರಮದಲ್ಲಿ ಡಾ ಹನುಮಂತರೆಡ್ಡಿ ಬಿ ಶೇರಿಕಾರ ರವರು ಬುದ್ಧ ಗಯಾ ವಿಶ್ವ ವಿದ್ಯಾಲಯ ದಲ್ಲಿ ನೀಲಂ ಸಂಜೀವ ರೆಡ್ಡಿ ರವರ ರಾಜಕೀಯ ಜೀವನ ಕುರಿತು ಮಂಡಿಸಿರುವ ಪ್ರಬಂಧ ಕ್ಕೆ ಡಾಕ್ಟರೇಟ್ ನೀಡಿರುತ್ತಾರೆ ಮಾಜಿ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ರವರ ರಾಜಕೀಯ ಜೀವನ ಪುಸ್ತಕ ಬಿಡುಗಡೆ ಮಾಡಲಾಯಿತು. ಸ್ವಾಗತ ಸಿದಲಿಂಗರೆಡ್ಡಿ ಮಾಡಿದರು ಕಾಯ9ಕ್ರಮವನ್ನು ವಿಶ್ವ ಕಾಮ ರೆಡ್ಡಿ, ಶ್ರೀಧರ್ ರೆಡ್ಡಿ ನಿರೂಪಿಸಿದರು, ಪುಸ್ತಕ ಪರಿಚಯ ಶಿವರಾಜ್ ಪಾಟೀಲ್ ಮಾಡಿದರು. ಭೀಮರೆಡ್ಡಿ ಮೊಕಾಶಿ ವಂದನಾರ್ಪಣೆ ಮಾಡಿದರು.
ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…
ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…
ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…
ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…
ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…