ಬಿಸಿ ಬಿಸಿ ಸುದ್ದಿ

ಶ್ರೀಶೈಲಂನಲ್ಲಿ ಏಪ್ರಿಲ್ 6 ರಿಂದ ಯುಗಾದಿ ಮಹೋತ್ಸವ ಹಿನ್ನೆಲೆ

ಶ್ರೀಶೈಲ್ ಮಲ್ಲಿಕಾರ್ಜುನ ಸ್ಪರ್ಶ ದರ್ಶನ ಇಲ್ಲ,ಅಲಂಕಾರಿಕ ದರ್ಶನ ಭಾಗ್ಯ ಮಾತ್ರ

ಕಲಬುರಗಿ: ಆಂಧ್ರಪ್ರದೇಶದ ನಂದ್ಯಾಳ ಜಿಲ್ಲೆಯ ಶ್ರೀಶೈಲಂನ ಶ್ರೀಶೈಲ್ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬರುವ ಏಪ್ರಿಲ್ 6 ರಿಂದ 10ರ ವರೆಗೆ ಯುಗಾದಿ ಮಹೋತ್ಸವ ಜರುಗುತ್ತಿದ್ದು, ಈ ಅವಧಿಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸ್ವಾಮಿಗಳ ಸ್ಪರ್ಶ ದರ್ಶನ‌ ಬದಲಾಗಿ ಅಲಂಕಾರಿಕ ದರ್ಶನದ (ಲಘು ದರ್ಶನ) ವ್ಯವಸ್ಥೆ ಮಾಡಲಾಗಿದೆ.

ಯುಗಾದಿ ಮಹೋತ್ಸವ ಸಂದರ್ಭದಲ್ಲಿ ಸುಮಾರು 6 ಲಕ್ಷ ಭಕ್ತಾಧಿಗಳು ಈ ಮಹಾಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ವಿಶೇಷವಾಗಿ ಕರ್ನಾಟಕದ ಉತ್ತರ ಕರ್ನಾಟಕ ಪ್ರಾಂತ್ಯದಿಂದ, ಮಹಾರಾಷ್ಟ್ರದ ಸೋಲಾಪೂರ,‌ ಸಾಂಗ್ಲಿಯಿಂದ ಬರುವರು. ಕೆಲವರು ಪಾದಯಾತ್ರೆ ಮೂಲಕ ಸಹ ಆಗಮಿಸುವರು. ಸರ್ವ ಭಕ್ತರಿಗೆ ಸ್ವಾಮಿಗಳ ದರ್ಶನ ಭಾಗ್ಯ ಸಿಗಲೆಂದು ಈ ವ್ಯವಸ್ಥೆ ಮಾಡಿದ್ದು, ಭಕ್ತಾದಿಗಳು ಸಹಕರಿಸಬೇಕೆಂದು ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಡೆಪ್ಯೂಟಿ ಕಲೆಕ್ಟರ್ ಡಿ.ಪೆದ್ದಿರಾಜು ಮನವಿ ಮಾಡಿದ್ದಾರೆ.

ಉತ್ಸವದ ಮುನ್ನ ಮಾರ್ಚ್ 27 ರಿಂದ‌ ಏಪ್ರಿಲ್ 5ರ ವರೆಗೆ ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ 1500 ಜನರಂತೆ 4 ಹಂತಗಳಲ್ಲಿ ಮಾತ್ರ ಭಕ್ತಾದಿಗಳಿಗೆ ಸ್ವಾಮಿಗಳ ಸ್ಪರ್ಶ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ದೇವಸ್ಥಾನದಲ್ಲಿ ಕರೆಂಟ್ ಬುಕ್ಕಿಂಗ್ ಮೂಲಕ 500 ರೂ. ದರದ ಟಿಕೆಟ್ ಪಡೆದು ಭಕ್ತಾದಿಗಳು ಸ್ವಾಮಿಗಳ ಸ್ಪರ್ಶ ದರ್ಶನ ಪಡೆಯಬಹುದಾಗಿದೆ.

ಇನ್ನೂ ಯುಗಾದಿ ಮಹೋತ್ಸವ ಸಂದರ್ಭದಲ್ಲಿನ ದರ್ಶನ ವ್ಯವಸ್ಥೆಯ ಬದಲಾವಣೆ ಮತ್ತು ಕಲ್ಪಿಸಿರುವ ವ್ಯವಸ್ಥೆ ಕುರಿತಂತೆ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ರಬ್ಕವಿಯಲ್ಲಿ ಕಳೆದ‌ ಮಾ.21 ರಂದು ಕರ್ನಾಟಕ‌ ಮತ್ತು‌ ಮಹಾರಾಷ್ಟ್ರ ಭಕ್ತ ವೃಂದದ ‌ವಿವಿಧ‌ ವೃಂದ‌ ಸಂಘಗಳ ಸಮನ್ವಯ ಸಭೆ ಕರೆದು ಮಾಹಿತಿ ನೀಡಲಾಗಿದೆ‌‌ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಕಲ ವ್ಯವಸ್ಥೆ: ಯುಗಾದಿ ಹಬ್ಬದ ಪ್ರಯುಕ್ತ ಬರುವ ಲಕ್ಷಾಂತರ ಭಕ್ತರಿಗೆ ಸ್ವಾಮಿಗಳ ದರ್ಶನದಿಂದ ಹಿಡಿದು ಅವರ ಅನೂಕೂಲಕ್ಕೆ ಪಾದಚಾರಿ ಮಾರ್ಗ, ವಿಶ್ರಾಂತಿ ಹೊರಾಂಗಣದ ಚಪ್ಪರಗಳು, ಕುಡಿಯುವ ನೀರು, ಅನ್ನಸಂತರ್ಪಣೆ, ಸ್ಥಳೀಯವಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಪ್ರಯಾಣಕ್ಕೆ ಉಚಿತ ಸಾರಿಗೆ ಬಸ್, ಉಚಿತ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ವಾಹನಗಳ ಪಾರ್ಕಿಂಗ್ ವ್ಯಚಸ್ಥೆ ಕಲ್ಪಸಿದೆ. ಇದಲ್ಲದೆ ಸಂಪೂರ್ಣ ಶ್ರೀಶೈಲಂ ಪ್ರದೇಶದಲ್ಲಿ ಸ್ವಚ್ಛತೆ ಮತ್ತು ನೈರ್ಮ್ಯಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

emedialine

Recent Posts

ಮೂವರಿಗೆ ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿರುವ ವಿಡಿಯೋ ಸೇರ್ ಮಾಡಿದರೆ ಕ್ರಮ: ಪೊಲೀಸ್ ಕಮಿಷನರ್

ಕಲಬುರಗಿ: ಇತ್ತಿಚಿಗೆ ನಗರದ ಹಾಗರಗಾ ಪ್ರದೇಶದಲ್ಲಿ ಮೂವರು ಯುವ ಕಾರು ಚಾಲಕರನ್ನು ನಗ್ನಗೊಳಿಸಿ ಹಿಂಸೆ ನೀಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ…

2 hours ago

ಕಲಬುರಗಿ: 2.63 ಲಕ್ಷ ರೈತರಿಗೆ 274.51 ಕೋಟಿ ರೂ. ಬೆಳೆ ಪರಿಹಾರ ನೀಡಲು ಜಿಲ್ಲಾಧಿಕಾರಿ ಅನುಮೋದನೆ

ಕಲಬುರಗಿ: ಕಳೆದ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟ ಕಾರಣ ಜಿಲ್ಲೆಯ ಎಲ್ಲಾ 11 ತಾಲ್ಲೂಕುಗಳನ್ನು ತೀವ್ರ ಬರಪೀಡಿತ…

3 hours ago

ಬಸವಣ್ಣ ವರ್ತಮಾನಕ್ಕೂ ಪ್ರಸ್ತುತ: ಡಾ. ಬಸವರಾಜ ಸಾದರ

ಕಲಬುರಗಿ: ಯುವ ಪೀಳಿಗೆಗೆ ಬಸವಾದಿ ಶರಣರ ವಿಚಾರ, ಸಂದೇಶಗಳನ್ನು ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಎಚ್ಕೆಇ ಸಂಸ್ಥೆಯ ನಿಕಟ…

3 hours ago

ಅಸಮಾನತೆಯ ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಸಂವಿಧಾನವೇ ಹಾದಿ: ಪ್ರೋ.ಸೋಮಶೇಖರ

ಶಹಾಬಾದ:ಅಸಮಾನತೆಯ ಸಮಾಜದಲ್ಲಿ ಸಮಾನತೆ ಸ್ಥಾಪಿಸುವುದು ಬಹಳ ಸುಲಭದÀ ಕೆಲಸವಲ್ಲ ಎಂಬುದನ್ನು ಮನಗಂಡು ಬಾಬಾ ಸಾಹೇಬರು ಸಂವಿಧಾನದ ಮೂಲಕ ಹಾದಿಯನ್ನು ಸೃಷ್ಠಿ…

4 hours ago

ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ; ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ 29 ನೇ ಪೀಠಾರೋಹಣ ಮಹೋತ್ಸವದಂದು ಶ್ರೀರಾಮ…

5 hours ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ಸುಶ್ರೂಷೆಯರ ದಿನಾಚರಣೆ

ಕಲಬುರಗಿ: ಸ್ಥಳೀಯ ಸುಪ್ರಸಿದ್ಧ ಕೆಬಿನ್ ವಿಶ್ವ ವಿದ್ಯಾಲಯದ ಕೆಬಿಎನ್ ಆಸ್ಪತ್ರೆಯ ನರ್ಸಿಂಗ ವಿಭಾಗದಿಂದ ಸೋಮವಾರ ಸುಶ್ರೂಷೆಯರ ದಿನಾಚರಣೆಯನ್ನು ಆಚರಿಸಲಾಯಿತು. ಈ…

5 hours ago