ಬಿಸಿ ಬಿಸಿ ಸುದ್ದಿ

ಬಾದ್ಯಾಪುರ ಗ್ರಾಮದಲ್ಲಿ ಸರಕಾರಿ ಆಸ್ಪತ್ರೆ ನಿರ್ಮಿಸಲು ವಿನಂತಿ: ಧರ್ಮರಾಜ ಬಡಿಗೇರ

ಸುರಪುರ: ಬಾದ್ಯಾಪುರ ಗ್ರಾಮವು ತಾಲೂಕು ಕೇಂದ್ರದಿಂದ ಸುಮಾರು ಹನ್ನೆರಡು ಕಿಲೋ ಮೀಟರ್ ದೂರದಲ್ಲಿದ್ದು ಗ್ರಾಮದ ಜನರು ಸರಕಾರಿ ಆಸ್ಪತ್ರೆಗಾಗಿ ಸುರಪುರ ನಗರಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ,ಆದ್ದರಿಂದ ಬಾದ್ಯಾಪುರ ಗ್ರಾಮದಲ್ಲಿ ಸರಕಾರಿ ಆರೋಗ್ಯ ಕೇಂದ್ರ ನಿರ್ಮಿಸಲು ಬಾದ್ಯಾಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಧರ್ಮರಾಜ ಬಡಿಗೇರ ಒತ್ತಾಯಿಸಿದ್ದಾರೆ.

ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಹಾಗು ಶಾಸಕ ನರಸಿಂಹ ನಾಯಕ (ರಾಜುಗೌಡ) ಅವರಿಗೆ ಪತ್ರ ಬರೆದು ವಿನಂತಿಸಿರುವ ಅವರು,ಬಾದ್ಯಾಪುರ ಗ್ರಾಮ ಪಂಚಾಯತಿಗೆ ನಾಲ್ಕು ಹಳ್ಳಿಗಳಿದ್ದು ಸುಮಾರು ಹತ್ತು ಸಾವಿರ ಜನರು ಈ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ.ಆದರೆ ಇಲ್ಲಿಯ ಎಲ್ಲಾ ಗ್ರಾಮದ ಜನರಿಗೆ ತ್ವರಿತ ಚಿಕಿತ್ಸೆ ಬೇಕಾದರೆ ೧೨ ಕಿ.ಮೀ ದೂರದ ಸುರಪುರ ನಗರಕ್ಕೆ ಹೋಗಬೇಕಾಗಿದೆ.

ಅಲ್ಲದೆ ಯಾವುದೇ ಕಾಯಿಲೆ ಬಂದರು ಜನರು ಖಾಸಗಿ ವೈದ್ಯರ ಬಳಿಗೆ ಹೋಗಿ ದೊಡ್ಡ ಮೊತ್ತದ ಹಣ ಸುರಿಯಬೇಕಿದೆ.ಬಡ ಜನರು ಅನೇಕ ಬಾರಿ ಹಣವಿಲ್ಲದೆ ಚಿಕಿತ್ಸೆಗಾಗಿ ಪರದಾಡಿದ ಘಟನೆಗಳು ನಡೆದಿವೆ.ಆದ್ದರಿಂದ ನಮ್ಮ ಬಾದ್ಯಾಪುರ ಗ್ರಾಮಕ್ಕೆ ಸರಕಾರಿ ಆಸ್ಪತ್ರೆ ಮಂಜೂರು ಮಾಡುವ ಮೂಲಕ ಜನರ ಆರೋಗ್ಯ ರಕ್ಷಣೆಗೆ ಸರಕಾರ ನೆರವಾಗಬೇಕೆಂದು ಅವರು ವಿನಂತಿಸಿದ್ದಾರೆ.

emedialine

Recent Posts

ದೇಶದಲ್ಲಿ ತಂತ್ರಜ್ಞಾನ ಕ್ರಾಂತಿ ಮಾಡಿದ್ದೇ ರಾಜೀವ್ ಗಾಂಧಿ; ಡಿಸಿಎಂ ಡಿ.ಕೆ.ಶಿವಕುಮಾರ.

ಕಲಬುರಗಿ; ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಈ ದೇಶದಲ್ಲಿ ತಂತ್ರಜ್ಞಾನ ದಲ್ಲಿ ಕ್ರಾಂತಿ ಮಾಡಿದ ಮಹಾನ್ ನಾಯಕರಾಗಿದ್ದಾರೆ. ಅವರ…

15 mins ago

ದೇವರಾಜ ಅರಸು ಸಾಮಾಜಿಕ ನ್ಯಾಯದ ಹರಿಕಾರ

ಕಲಬುರಗಿ; ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಕಂಡ ಅಪರೂಪದ ರಾಜಕಾರಣಿ,ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಕಲ್ಪಸಿದ ಸಾಮಾಜಿಕ ಹರಿಕಾರರು ದಿವಂಗತ ಡಿ…

17 mins ago

ಚಿತ್ತಾಪುರ; ಕಚೇರಿಯಲ್ಲಿ ನಾರಾಯಣಗುರು ಡಿ.ದೇವರಾಜ ಅರಸು ಜಯಂತಿ ಆಚರಣೆ

ಚಿತ್ತಾಪುರ; ಪಟ್ಟಣದ ತಹಶೀಲ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ…

21 mins ago

ಗೃಹಲಕ್ಷ್ಮೀ ಯೋಜನೆ ಮತ್ತು ಗ್ಯಾರಂಟಿ ಯೋಜನೆಯ ಪೂರ್ಣ ಮಾಹಿತಿ ಪಡೆಯಿರಿ; ಪಾಶಾ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಗೃಹಲಕ್ಷ್ಮಿ ಯೋಜನೆ ಮತ್ತು ಗ್ಯಾರಂಟಿ ಯೋಜನೆ ಕುರಿತು ಪೂರ್ಣ ಮಾಹಿತಿ ಪಡೆಯಬೇಕು ಎಂದು ತಾಪಂ…

23 mins ago

ಸಮಾಜ ಸುಧಾರಣೆಗೆ ಬದುಕು ಸಮರ್ಪಿಸಿದ ನಾರಾಯಣ ಗುರೂಜಿ : ಸಿದ್ದಲಿಂಗ ಶ್ರೀ

ರಾವೂರ: ಕೇರಳ ರಾಜ್ಯದಲ್ಲಿ ತಲೆತ್ತಿದ್ದ ಜಾತೀಯತೆ, ಅಸ್ಪೃಶ್ಯತೆ, ಸ್ತ್ರೀ ಅಸಮಾನತೆ, ತಾರತಮ್ಯಗಳ ವಿರುದ್ಧ ಹಿಂದುಳಿದ ಕುಲದಲ್ಲಿ ಜನಿಸಿದ ನಾರಾಯಣ ಗುರುಗಳು…

28 mins ago

ದಸ್ತಿ ಅವರಿಗೆ ದಶಕಗಳ ಹೋರಾಟಕ್ಕೆ ಸಂದ ಡಾಕ್ಟರೇಟ್ ಗೌರವ

ಕಲಬುರಗಿ: ಕಲ್ಯಾಣ ನಾಡಿನ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಅವರ ದಶಕಗಳ ಹೋರಾಟವನ್ನು ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್…

32 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420