ಸುರಪುರ: ನಗರದ ಶೆಟ್ಟಿ ಮೊಹಲ್ಲಾದಲ್ಲಿರುವ ಐತಿಹಾಸಿಕ ಸೂಗುರೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಕಾರ್ತಿಕೋತ್ಸವ ನಿಮಿತ್ತ ಸಂಗೀತ ದರ್ಬಾರ ಅಂಗವಾಗಿ ಅಹೋರಾತ್ರಿ ವಿವಿಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಹುಣ್ಣಿಮೆಯಿಂದ ಪ್ರಾರಂಭಗೊಂಡ ಕಾರ್ತಿಕೋತ್ಸವ ಕಾರ್ಯಕ್ರಮ ಷಷ್ಠಿ ದಿನದಂದು ಕಳಸಾರೋಹಣದೊಂದಿಗೆ ಸಂಪನ್ನಗೊಂಡಿತು, ಕೊನೆಯ ದಿನದಂದು ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು, ಸಂಗೀತ ದರ್ಬಾರ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ದೇವಸ್ಥಾನದ ಹಿರಿಯ ಅರ್ಚಕರಾದ ಕೊಟ್ರಯ್ಯಸ್ವಾಮಿ ಬಳ್ಳುಂಡಗಿಮಠ ಈ ಸಂದರ್ಭದಲ್ಲಿ ಮಾತನಾಡಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುರಪುರ ಸಂಸ್ಥಾನದ ವತನದಾರರಾದ ಸರಪಟ್ಟಣಶೆಟ್ಟಿ ಮನೆತನದವರಿಂದ ಪ್ರತಿಷ್ಠಾಪಿಸಲ್ಪಟ್ಟ ಸೂಗುರೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಅಂಗವಾಗಿ ಪ್ರತಿ ವರ್ಷ ವಿವಿಧ ಧಾರ್ಮಿಕ ಹಾಗೂ ನಾಡಿನ ಅನೇಕ ಜನ ಸಂಗೀತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ ಎಂದು ಹೇಳಿದರು.
ಪುರಾಣ, ಪ್ರವಚನ ಹಾಗೂ ಸಂಗೀತ ಕಾರ್ಯಕ್ರಮಗಳು ದೇವರಿಗೆ ಭಕ್ತಿಯನ್ನು ಸಮರ್ಪಿಸಿ ದೇವರನ್ನು ಒಲಿಸಿಕೊಂಡು ಸಾಕ್ಷಾತ್ಕಾರಿಸಿಕೊಳ್ಳಲು ಇರುವ ಮಾರ್ಗ ಆ ಮೂಲಕ ಭಗವಂತನ ಮಹಿಮೆಯನ್ನು ನಾವೆಲ್ಲರೂ ತಿಳಿದುಕೊಂಡು ಸರಿಯಾದ ಮಾರ್ಗದಲ್ಲಿ ನಡೆದು ನಮ್ಮ ಜೀವನವನ್ನು ಪಾವನಗೊಳಿಸಿಕೊಳ್ಳೋಣ ಎಂದು ಹೇಳಿದರು.
ಸುರಪುರ ಸಂಸ್ಥಾನದ ಕಾಲದಿಂದಲೂ ಇಲ್ಲಿನ ಸಂಸ್ಕೃತಿ,ಪರಂಪರೆಗಳನ್ನು ಉಳಿಸಿಕೊಂಡುಬರುವ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದು ಅನೇಕ ಕಲಾವಿದರಿಗೆ,ಪಂಡಿತರಿಗೆ,ಶರಣರಿಗೆ ರಾಜಾಶ್ರಯ ನೀಡಲಾಗಿತ್ತು ಈ ಪರಂಪರೆಯನ್ನು ಇವತ್ತಿಗೂ ಮುಂದುವರೆಸಿಕೊಂಡು ಹೋಗಲಾತ್ತಿದ್ದು ಪ್ರತಿವರ್ಷ ವಿವಿಧ ಕಡೆಗಳಿಂದ ಸಂಗೀತ ಕಲಾವಿದರನ್ನು ಆಮಂತ್ರಿಸಿ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಾ ಬಂದಿದೆ ಎಂದು ಹೇಳಿದರು.
ಪ್ರಮುಖರಾದ ಸುನೀಲ್ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶರಣುಕುಮಾರ ಕೊಪ್ಪಳ,ಶಿವಶರಣಯ್ಯ ಬಳ್ಳುಂಡಗಿಮಠ,ಮೋಹನರಾವ ಮಾಳದಕರ ಆಗಮಿಸಿದ್ದರು, ಸಿದ್ದಲಿಂಗಯ್ಯ ಕಡ್ಲಪ್ಪನವರ ಮಠ, ಚಂದ್ರಶೇಖರ ಅಜಾದ ಪಾಣಿ, ಸೂಗುರೇಶ ಮಡ್ಡಿ ಉಪಸ್ಥಿತರಿದ್ದರು.
ಸಂಗೀತ ದರ್ಬಾರ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಶಿವಲಿಂಗಯ್ಯ ಬಳ್ಳುಂಡಗಿಮಠ,ನರಸಿಂಹಾಚಾರ್ಯ ಭಂಡಿ,ಪ್ರಾಣೇಶರಾವ ಕುಲಕರ್ಣಿ,ಶಿವಶಂಕರ ಅಲ್ಲೂರ, ಶರಣು ಮಾಲಗತ್ತಿ,ಸುರೇಶ ಅಂಬೂರೆ,ಉಮೇಶ ಯಾದವ್, ರಮೇಶ ಕುಲಕರ್ಣಿ, ಯಮುನೇಶ ಹೆಗ್ಗನದೊಡ್ಡಿ, ಚಂದ್ರಹಾಸ ಮಿಟ್ಟಾ, ಮಹಾಂತೇಶ ಶಹಾಪುರಕರ, ಗುರುನಾಥರೆಡ್ಡಿ, ತಿಮ್ಮಯ್ಯ ಪೋತಲಕರ, ಪದ್ಮಾಕ್ಷಿ, ವಿಜಯಲಕ್ಷ್ಮೀ ಯಾದವ್ ಇತರರು ಭಾಗವಹಿಸಿದ್ದರು.
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…