ತಾಂಡಾದಲ್ಲಿ ಶಾಸಕ ಡಾ. ಅಜಯ್ ಸಿಂಗ್ ಗ್ರಾಮ ವಾಸ್ತವ್ಯ: ಜನರ ಅಹವಾಲು ಸ್ವೀಕಾರ

ಕಲಬುರಗಿ: ಕೋವಿಡ್ ಕಾರಣದಿಂದಾಗಿ ಕೆಲ ತಿಂಗಳ ಕಾಲ ಮುಮಂದೂಡಿದ್ದ ತಮ್ಮ ಗ್ರಾಮ ವಾಸ್ತವ್ಯ ಹಾಗೂ ಜನರ ಅಹವಾಲು ಆಲಿಕೆ, ಸಂವಾದ ಸಭೆಯನ್ನು ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಸೆಪ್ಟೆಂಬರ್ ತಿಂಗಳಲ್ಲಿ ಪುನಾರಂಭಿಸಿದ್ದು ಅವರ ಈ ಜನಮುಕಿ ಕೆಲಸಕ್ಕೆ ಹಳ್ಳಿ ಜನರಿಂದ ಮೆಚ್ಚುಗೆಯ ಮಹಾಪುರವೇ ಹರಿದು ಬಂದಿದೆ.

ತಾಲೂಕಿನ ಶಾಸಕರು ಹಾಗೂ ರಾಜ್ಯ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಡಾ. ಅಜಯ್ ಸಿಂಗ್ ತಮ್ಮೂರಿಗೆ ಬಂದು ಸುಖ- ದುಃಖ ಆಲಿಸುವುದು ಜನತೆ ಮೆಚ್ಚಿಕೊಂಡಿದ್ದಾರೆ. ಗಂವ್ಹಾರ್ ತಾಂಡಾದಲ್ಲಿ ಗುರುವಾರ ವಾಸ್ತವ್ಯಕ್ಕಾಗಿ ಆಗಮಿಸಿದ ಡಾ. ಅಜಯ್ ಸಿಂಗ್ ಇವರಿಗೆ ಅಲ್ಲಿನ ಜನರಿಂದ ಅಭೂತಪೂರ್ವ ಸ್ವಾಗತ ಕೊರಲಾಯ್ತು.

ಸಂಜ ಹೊತ್ತು ಗ3ಆಮಕ್ಕೆ ಆಮಿಸಿದ ಡಾ. ಅಜಯ್ ಸಿಂಗ್ ಅಲ್ಲಿನ ದರ್ಗಾ, ಗುಂಡಿ- ಉಗಂಡಾರಗಳನ್ನೆಲ್ಲ ಸುತ್ತಿ ದೇವರ ದರುಶನ ಪಡೆದು, ಊರಿನ ಹಿರಿಯರಿಗೆ ನಮಿಸುವ ಮೂಲಕ ದರ್ಗಾ ಅಂಗಳದಲ್ಲಿ ಹಾಕಲಾಗಿದ್ದ ಸಂವಾದ ಹಾಗೂ ಗ್ರಾಮ ಸಭೆಯ ವೇದಿಕೆಗೆ ಬಂದರು.

ಅಲ್ಲಿ ಕೋವಿಡ್ ವಿರುದ್ಧ ಇರುವ ಲಸಿಕಾಕರಣ ಸಂದೇಶ ಜನಮನದಲ್ಲಿ ಸಾರಲು ತಾವೇ ಖುದ್ದು ಗ್ರಾಮಸ್ಥರಿಗೆ ವೇದಿಕೆಯಲ್ಲೇ ಲಸಿಕೆ ಹಾಕುವ ಮೂಲಕ ಗಮನ ಸೆಳೆದರು. ಸೋಂಕಿನಿಂದ ದೂರ ಇರಬೇಕಾದಲ್ಲಿ ಊರವರೆಲ್ಲರೂ ಲಸಿಕೆ ಹಾಕಿಕೊಳ್ಳಬೇಕು, ಸುತ್ತಲಿನ ಜನರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಎಲ್ಲರೂ ಪ್ರೇರೇಪಿಸಿರಿ ಎಂದು ಮನವಿ ಮಾಡಿದರು.

ಅಹವಾಲು ಆಲಿಕೆ ಸಭೆಯಲ್ಲಿ ತಮ್ಮ ಅಳಲಿನ ಅರ್ಜಿಯೊಂದಿಗೆ ಬಂದ ವಿಕಲ ಚೇತನರು, ಊರಿನ ಕಡು ಬಡವರು, ವೃದ್ಧರಿಗೆ ಆದ್ಯತೆ ನೀಡಿ ತಾವೇ ಅವರನ್ನು ಖುದ್ದು ಅವರಿದ್ದಲ್ಲಿಗೇ ಹೋಗಿ ಮೈ ಕೈ ತಡವುತ್ತ, ಅಪ್ಯಾಯಮಾನರಾಗಿ ಅವರ ಬಳಿ ಕುಳಿತು ಅವರಿಂದ ಅಹವಾಲು ಆಲಿಸಿದರು.

ವಿಕಲಚೇತನನೋರ್ವ ತನಗೆ ಇರಲು ಸೂರಿಲ್ಲವೆಂದು ಗೋಳಾಡಿದಾಗ ತಕ್ಷಣವೇ ತಾಪಂ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಇವರಿಗೆ ವಸತಿ ಯೋಜನೆಯಲ್ಲಿ ಆದ್ಯತೆಯಲ್ಲಿ ಮನೆ ಹಾಕಿಸಿಕೊಡುವಂತೆ ಸೂಚಿಸಿದರು. ಇದಲ್ಲದೆ ಅನೇಕರು ಊರಿನ ರಸ್ತೆ, ಚರಂಡಿ, ತಿಪ್ಪ ಸಮಸ್ಯೆಗಳನ್ನು ಗಮನಕ್ಕೆ ತಂದಾಗ ಸಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತ ಇವೆಲ್ಲದರ ಪರಿಹಾರಕ್ಕೆ ಖಡಕ್ ತಾಕೀತು ಮಾಡಿದರು.

ಇದೇ ಸಂದರ್ಭದಲ್ಲಿ ಮನೆ ಮನೆಗೂ ನಲ್ಲಿ ನೀರು ಪೂರೈಸುವ ಜಲ ಜೀವನ ಮಿಷನ್ ಯೋಜನೆಗೂ ಡಾ. ಅಜಯ್ ಸಿಂಗ್ ಶಿಲಾನ್ಯಾಸ ನೆರವೇರಿಸಿದರು. ಈ ಊರಲ್ಲಿ ಮನೆ ಮನೆಗೂ ಈ ಯೋಜನೆಯಡಿ ನಲ್ಲಿಯಿಂದ ಶುದ್ಧ ನೀರಿನ ಸಂಪರ್ಕ ಕಲ್ಪಿಸುವ ಯೋಜನೆ ಅದಾಗಲೇ ರೂಪ ತಾಳಿದ್ದು ಶಾಸಕರ ಚಾಲನೆಯಿಂದಾಗಿ ಸದರಿ ಯೋಜನೆ ಈಗ ಕಾರ್ಯಾರಂಭಿಸಲಿದೆ.

ಶಾಸಕರು ಗುರುವಾರ ಊರಿನ ಬಡ ಕೃಷಿ ಕೂಲಿ ಕಾರ್ಮಿಕ ರಾಮು ಜಾಧವ್ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಶುಕ್ರವಾರ ಶಾಸಕರು ಇದೇ ಊರಿನ ದಲಿತ ಸಮುದಾಯದ ಸದಸ್ಯರೊಬ್ಬರ ಮನೆಗೆ ಭೇಟಿ ನೀಡಿ ಉಪಹಾರ ಸೇವನೆ ಮಾಡಿ ಅವರ ಕುಟುಂಬದ ಸುಖಃ ದುಃಖ ಆಲಿಸಲಿದ್ದಾರೆ.

ಕೋವಿಡ್ ಪೂರ್ವದಲ್ಲಿ ಶಾಸಕರು ಜೇರಟಗಿ, ವಡಗೇರಾ, ಕೋನ ಹಿಪ್ಪರಗಾ ಊರಲ್ಲಿ ವಾಸ್ತವ್ಯ ಹೂಡುವ ಮೂಲಕ ಜನರ ನೂರಾರು ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದರು. ಇದೀಗ ಗಂವ್ಹಾರ್‍ನಲ್ಲಿ ತಮ್ಮ ಕೋವಿಡ್ ನಂತರದ 4 ನೇ ಗ್ರಾಮ ವಾಸ್ತವ್ಯ ಹೂಡುವ ಮೂಲಕ ಮತ್ತೊಮ್ಮೆ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಜನತೆಗೆ ಇನ್ನೂ ಹತ್ತಿರವಾಗುವತ್ತ, ಹೆಚ್ಚು ಹೆಚ್ಚು ಜನರ ಸಮಸ್ಯಗಳನ್ನು ಆಲಿಸಿ ಪರಿಹಾರ ಹುಡುಕುವತ್ತ ಹೊಸ ಹೆಜ್ಜೆ  ಇಡುತ್ತ ತಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರಿಸಿದ್ದಾರೆ.

ಶಾಸಕರ ಗ್ರಾಮ ವಾಸ್ತವ್ಯದ ಸಾರ್ವಜನಿಕ ಸಭೆಯಲ್ಲಿ ತಾಲೂಕಾ ದಂಡಾಧಿಕಾರಿ, ತಹಶೀಲ್ದಾರ್ ವಿನಯ ಪಾಟೀಲ್, ತಾಪಂ ಮುಖ್ಯಾಧಿಕಾರಿ ವಿಲಾಸರಾಜ್, ಜೆಸ್ಕಾಂ ಎಇಇ ಅನೀಲ ಕುಮಾರ್, ಅಬಕಾರಿ ಸಿಪಿಐ ವನಿತಾ ಸಿತಾಳೆ, ಸುಷ್ಮಾ ಪಾಟೀಲ್, ತಾಲೂಕಾ ಆರೋಗ್ಯಾಧಿಕಾರಿ ಸಿದ್ದು ಪಾಟೀಲ್, ಬಿಇಓ ವೆಂಕÀಯ್ಯ ಇನಾಮದಾರ್, ಸಮಾಜ ಕಲ್ಯಾಣಾಧಿಕಾರಿ ಅಶೋಕ ನಾಯಕ, ಸಿಡಿಪಿಓ ಸಂಗನಗೌಡ ಪಾಟೀಲ್, ಎಇಇ ಮಲ್ಲೀನಾಥ ಕಾರಬಾರಿ, ಮೊಹ್ಮದ್ ಖಾಸೀಂ, ಗ್ರಾಪಂ ಅಧ್ಯಕ್ಷೆ ಶಿವಕಲಾ ಮಾಲೀಪಾಟೀಲ್, ರುಕುಂ ಪಟೇಲ್, ಶೋಯೇಬ್ ಅನ್ಸಾರಿ, ಸಾರಿಗೆ ಸಂಸ್ಥೆಯ ಅಂಬರೀಷ ಅರಣ್ಯ ಇಲಾಖೆಯ ಬುರಾನುದ್ದೀನ್ ಸೇರಿದಂತೆ ಅನೇಕರು ವೇದಿಕೆಯಲ್ಲಿದ್ದು ಜನರ ಅಹವಾಲುಗಳನ್ನು ಶಾಸಕರ ಮುಖಾಂತರ ಪಡೆದು ಪರಿಹಾರಕ್ಕೆ ಸಹಕರಿಸಿದರು.

ಪ್ರತಿ ವಾಸ್ತವ್ಯದಲ್ಲಿ ಪತ್ರಕರ್ತರೊಬ್ಬರನ್ನು ಅತಿಥಿಯಾಗಿ ಆಹ್ವಾನಿಸುತ್ತಿರುವ ಡಾ. ಅಜಯ್ ಸಿಂಗ್ ಈ ಬಾರಿ ಪತ್ರಕರ್ತ ಹಣಮಂತರಾವ ಬೈರಾಮಡಗಿ ಅವರನ್ನು ಆಹ್ವಾನಿಸಿ ವೇದಿಕೆಯಲ್ಲಿ ಗೌರವಿಸಿದರು. ಲಂಬಾಣಿ ತಾಂಡಾದಲ್ಲಿರುವ ಮಹಿಳೆಯರು ತಮ್ಮ ಸಾಂಸ್ಕøತಿಕ ಉಡುಪಿನಲ್ಲಿ ಬಂದು ಆರತಿ ಬೆಳಗಿ ಡಾ. ಅಜಯ್ ಸಿಂಗ್ ಅವರಿಗೆ ಭವ್ಯ ಸ್ವಾಗತ ಕೋರಿ ಗಮನ ಸಳೆದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

8 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

11 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

16 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

16 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

18 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420