ಬಿಸಿ ಬಿಸಿ ಸುದ್ದಿ

ನವ ದುರ್ಗೆಯರ ನವ ಲೀಲೆಗಳು ದೇವಿಯ ಒಂಭತ್ತು ದಿನದ ಪುಸ್ತಕ ಬಿಡುಗಡೆ

ಕಲಬುರಗಿ: ನಗರದ ಲಾಲಗೇರಿ ಕ್ರಾಸ್ ಹತ್ತಿರ ಇರುವ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನವ ದುರ್ಗೆಯರ ನವ ಲೀಲೆಗಳ ಕುರಿತು ದೇವಿಯ ಒಂಭತ್ತು ಅವತಾರಗಳ ಸಂಕ್ಷೀಪ್ತ ವಿವರಣೆ ಹೋಂದಿರುವ ಪುಸ್ತಕವನ್ನು ಚವದಾಪುರಿ ಹಿರೇಮಠದ ಡಾ.ರಾಜಶೇಖರ ಶಿವಾಚಾರ್ಯರು ಬಿಡುಗಡೆಗೋಳಿಸಿ ಮಾತನಾಡುತ್ತಾ ನವರಾತ್ರಿಯ ಆಚರಣೆಯು ತನ್ನದೆ ಆದ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ನವ ಎಂದರೆ ಒಂಭತ್ತು ಮಹಿಷಾಸುರನ ನಾಶಕ್ಕಾಗಿ ಅವತಾರ ತಾಳಿದ ಶ್ರೀ ದೇವಿಯು ಪಾಡ್ಯದಿಂದ ನವಮಿಯವರೆಗೆ ಒಂಭತ್ತು ದಿನಗಳ ಕಾಲ ಯುದ್ಧವನ್ನು ಮಾಡಿ ನವಮಿಯ ರಾತ್ರಿ ಅವನನ್ನು ಕೊಂದಳು ಅಂತಹ ಅಸುರೀ ಮತ್ತು ಕ್ರೂರ ರಾಕ್ಷಸನನ್ನು ವಧಿಸಿದ ಶಕ್ತಿ ಮಾತೆಯ ಆರಾಧನೆ ದೇಶದ್ಯಾಂತ ವಿಶೇಷವಾಗಿ ಆಚರಿಸಲಾಗುತ್ತದೆ.

೯ ದಿನಗಳ ದುರ್ಗೋತ್ಸವದ ಪರ್ವವನ್ನು ಪುಸ್ತಕದ ಮೂಲಕ ಹೊರತರುತ್ತಿರುವುದು ಅತಿ ಸಂತಸದ ವಿಷಯ. ಈ ಭಾಗದ ಅತ್ಯಂತ ಪುರಾತನ ದೇವಸ್ಥಾನ ದೇವರಗುಡಿ ಮನೆತನದ ಭವಾನಿ ಮಂದಿರ ಸ್ಥಾಪನೆಯಾಗಿನಿಂದಲ್ಲೂ ಈ ಮನೆತನವು ದೇವಿಯ ಆರಾಧನೆಯನ್ನು ಪ್ರತಿವರ್ಷ ದಸರಾ ನಿಮಿತ್ಯವಾಗಿ ಅತ್ಯಂತ ವೈಭವಯುತವಾಗಿ ಆಚರಿಸುತ್ತಾ ಬಂದಿದ್ದಾರೆ ಸದ್ಯದ ಶ್ರೀ ಸುಭಾಷ ದೇವರಗುಡಿ ಕುಟುಂಬದವರು ಆ ವೈಭವವನ್ನು ಇಮ್ಮುಡಿಗೊಳಿಸಿದ್ದಾರೆ.

ಇಂತಹ ಕುಟುಂಬ ವರ್ಗವು ನಮ್ಮ ಚವದಾಪೂರಿ ಹಿರೇಮಠದ ಶಿಷ್ಯ ಪರಂಪರೆಯಲ್ಲಿ ಬಂದಿರುವುದು ನಮಗೆ ಅತಿ ಸಂತೋಷವನ್ನುಂಟು ಮಾಡಿದೆ. ಅಂತೆಯೇ ಶ್ರೀ ಮಠದ ಪ್ರತಿಯೊಂದು ಕಾರ್ಯಕ್ರಮಕ್ಕೆ ಮೆರಗು ತಂದು ಕೊಡುತ್ತಾರೆ ಇಂತಹ ದೇವರಗುಡಿ ಕುಟುಂಬಕ್ಕೆ ಶಾಂಭವಿಮಾತೆ ಶ್ರೀ ಶರಣಬಸವೇಶ್ವರರು ಮತ್ತು ಶ್ರೀ ಶಾಂತವೀರ ಶಿವಾಚಾರ್ಯರು ಆಯುರಾರೋಗ್ಯ ಕೊಟ್ಟು ಆಶೀರ್ವದಿಸಲಿ ಎಂದು ಶಿವಾಚಾರ್ಯರು ನುಡಿದರು.

ಕಾರ್ಯಕ್ರಮ ಸಂಯೋಜಕ ಸುಭಾಷ ದೇವರಗುಡಿ ಹಾಗೂ ಕುಟುಂಬದವರು ಮತ್ತು ಭಕ್ತಾಧಿಗಳು ಇದ್ದರು.

emedialine

Recent Posts

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಝೈನ್ ಗ್ಲೋಬಲ್ (UK) ಲಿಮಿಟೆಡ್ ಜೊತೆಗೆ ಒಪ್ಪಂದ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂ ಝೈನ್ ಗ್ಲೋಬಲ್ UK ಸಂಸ್ಥೆಗಳ ನಡುವೆ ಇಂದು ಸಂಸ್ಥೆಯ ಮುಖ್ಯ ಕಚೇರಿಯಲ್ಲಿ…

6 hours ago

ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ 27ರಂದು ರಾಜ್ಯ ಭವನ ಚಲೋ

ಕಲಬುರಗಿ: ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ 27ರಂದು ರಾಜ್ಯ ಭವನ ಚಲೋ ಹಮ್ಮಿಕೊಳ್ಳಾಗಿದೆ ಎಂದು ಕರ್ನಾಟಕ ರಾಜ್ಯ ಶೋಷಿತ…

7 hours ago

ಸೇಡಂನಲ್ಲಿ ಸಮಗ್ರ ಕೃಷಿ ಪದ್ಧತಿಯ ಉತ್ಕೃಷ್ಟ ಕೇಂದ್ರ ಉದ್ಘಾಟನೆ

ಸೋಮವಾರದಿಂದ ಹೆಸರು ಖರೀದಿ ಕೇಂದ್ರ ಆರಂಭ: ಡಾ.ಶರಣಪ್ರಕಾಶ ಪಾಟೀಲ ಕಲಬುರಗಿ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು ಖರೀದಿಸಲು ಸರ್ಕಾರ…

9 hours ago

ಬುಡಕಟ್ಟು ಜನರು ಮೂಲ ಜಾನಪದ ಕಲಾವಿದರು

ಕಲಬುರಗಿ ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ಕಲಬುರಗಿ ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಜಾಫರಬಾದ ವತಿಯಿಂದ “ವಿಶ್ವ…

10 hours ago

ಕಲಬುರಗಿ: ಫರಸಿ ತುಂಬಿದ ಲಾರಿ ಪಲ್ಟಿ: ಹಲವರಿಗೆ ಗಾಯ

ಕಲಬುರಗಿ: 11ಕ್ಕೂ ಹೆಚ್ಚು ಜನ ಕಾರ್ಮಿಕರು ಮತ್ತು ಪರಸಿ ತುಂಬಿದ ಲಾರಿಯೊಂದು ಉರುಳಿಬಿದ್ದು ಹಲವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಚಿಂಚೋಳಿ…

10 hours ago

ವಾಡಿ: ಶ್ರಾವಣ ಶನಿವಾರದ ಪ್ರಯುಕ್ತ ಪ್ರಸಾದ ಸಂತರ್ಪಣೆ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವಿರುವ ಶಕ್ತಿ ಆಂಜನೇಯ ದೇವಸ್ಥಾನ ದಲ್ಲಿ ಮೂರನೇ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ವಡೆ…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420