ಕಲಬುರಗಿ: ಜೇವರ್ಗಿ ಮತಕ್ಷೇತ್ರದಡಿ ಬರುವ ಭೀಮಾನದಿ ತೀರದಲ್ಲಿ ಸಾಗಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಯಾವುದೇ ಮುಲಾಜಿಲ್ಲದೆ ಹಾಗೂ ನಿರ್ದಾಕ್ಷಿಣ್ಯವಾಗಿ ತಾವುಗಳೆಲ್ಲರೂ ಸೇರಿಕೊಂಡು ತಂಡ ಮಾಡಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕೂರ ಆಗಿರುವ ಡಾ. ಅಜಯ್ ಸಿಂಗ್ ಕಲಬುರಗಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಜೇವರ್ಗಿಯಲ್ಲಿ ಮರಳು ಮಾಫಿಯಾ ಅವ್ಯಾಹತವಾಗಿ ಸಾಗುತ್ತಿದೆ ಎಂಬ ಆರೋಪಗಳು ಈಚೆಗೆ ತುಂಬ ಕೇಳಿ ಬರುತ್ತಿವೆ. ನೀವೆಲ್ಲರೂ ಯಾಕೆ ಇಂತಹ ಆರೋಪಗಳಿಗೆ ಅವಕಾಶ ನೀಉತ್ತಿದದೀರಿ? ಕಾನೂನು ರೀತ್ಯಾ ಹಾಗೂ ರಾಜ್ಯ ಸರಕಾರದ ಪ್ರಸ್ತುತ ಚಾಲ್ತಿಯಲ್ಲಿರುವ ಮರಳು ನೀತಿಯಂತೆ ಯಾರೂ ಪರವಾನಿಗೆ ಪಡೆದಿದ್ದಾರೋ ಅವರು ಮಾತ್ರ ಪರವಾನಿಗಿಯ ಸ್ಥಳದಲ್ಲಿ ಮರಳಿಗಾರಿಕೆ ಮಾಡಲಿ, ಇನ್ನುಳಿದಂತ ಅಕ್ರಮ ಮಾಡುವವರನ್ನು ಬೆಂಡೆತ್ತಿರಿ ಎಂದು ಡಾ. ಅಜಯ್ ಸಿಂಗ್ ಮಂಗಳವಾರ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ, ಜಿಲ್ಲಾ ಪೆಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಜೇವರ್ಗಿ ತಹಶೀಲ್ದಾರ್ ವಿನೋದ ಪಾಟೀಲ್ ಇವರೊಂದಿಗೆ ದೂರವಾಣಿಯಲ್ಲಿ ಮತುಕತೆ ನಡೆಸಿ ಖಡಕ್ಕಾಗಿ ತಾಕೀತು ಮಾಡಿದ್ದಾರೆ.
ತಹಶೀಲ್ ಕಚೇರಿ ಮುಂದೆ ಹುಲ್ಲೂರ ಅಕ್ರಮ ಮರಳುಗಾರಿಕೆ ವಿಚಾರ ಇಟ್ಟುಕೊಂಡು ಧರಣಿ ಸಾಗಿದೆ. ಇದರಂತೆಯೇ ಭೀಮಾ ತೀರದ ಅನೇಕ ಊರುಗಳಲ್ಲಿ ಮರಳು ಕಳವು ಸಾಗಿದೆ, ರಾಜಧನ (ರಾಯಲ್ಟಿ) ಭರಿಸದೆಯೇ, ಪರವಾನಿಗೆ ಇಲ್ಲದೆಯೇ ಮರಳು ಕದ್ದೊಯ್ಯುತ್ತಿದ್ದಾರೆÀಂಬ ದೂರುಗಳಿವೆ. ಪತ್ರಿಕೆಗಳಲ್ಲಿಯೂ ಸಾಕಷ್ಟು ವರದಿಗಳು ಜೇವರ್ಗಿ ಮರಳು ಮಾಫಿಯಾಕ್ಕೆ ಸಂಬಂಧಿಸಿದಂತೆ ಬರುತ್ತಿವೆ. ಇವುಗಳಿಗೆಲ್ಲ ಇತಿಶ್ರೀ ಹೇಳಬೇಕಾದಲ್ಲಿ ಕಂದಾಯ, ಗಣಿ, ಪೆÇಲೀಸ್ ಇಲಾಖೆಯವರು ಒಂದಾಗಿ ತಕ್ಷಣ ತಂಡ ರಚಿಸಿಕೊಂಡು ವಿಶೇಷವಾಗಿ ಅಕ್ರಮದ ವಿರುದ್ಧ ಕಾರ್ಯಾಚರಣೆ ನಡೆಸಿರಿ ಎಂದೂ ಡಾ. ಅಜಯ್ ಸಿಂಗ್ ಆಡಳಿತಕ್ಕೆ ಸಲಹೆ ನೀಡಿದ್ದಾರೆ.
ಭೀಮಾ ನದಿಯಲ್ಲಿನ ಅವೈe್ಞÁನಿಕ ಮರಳುಗಾರಿಕೆಯಿಂದ ನದಿ ಪರಿಸರಕ್ಕೆ ಭಾರಿ ಪೆಟ್ಟು ಬೀಳುತ್ತಿದೆ. ಇದರಿಂದಾಗಿ ನದಿ ತೀರದಲ್ಲಿರುವ ಜಲಚರಗಳು ಸಾವನ್ನಪ್ಪುತ್ತಿವೆ. ನದಿಗಳಲ್ಲಿ ಬೃಹದಾಕಾರದ ತಗ್ಗುಗಳು ಸೃಷ್ಟಿಯಾಗಿ ರೈತರು, ಜನ, ಜಾನುವಾರುಗಳ ಬವಣೆ ಹೇಳತೀರದಾಗಿದೆ. ನದಿಗೆ ಇಳಿಯುವವರು ಮರಳು ಮಾಫಿಯಾದರು ಬಗೆದ ತಗ್ಗಿಗೇ ಬಿದ್ದು ಅಪಾಯ ಆಹ್ವಾನಿಸುವಂತಾಗಿದೆ ಎಂದು ಡಾ. ಅಜಯ್ ಸಿಂಗ್ ಕಳವಳ ಹೊರಹಾಕಿದ್ದಾರೆ.
ಇಂತಹ ಎಲ್ಲಾ ತೊಂದರೆಗಳಿಗೆ ಪರಿಹಾರ ಸಿಗಬೇಕಾದಲ್ಲಿ ಮೊದಲು ಅಕ್ರಮ ಮರಳುಗಾರಿಕೆ ನಿಲ್ಲಬೇಕು. ಈ ವಿಚಾರದಲ್ಲಿ ಆದಷ್ಟು ಬೇಗ ಖಡಕ್ ಕ್ರಮಗಳನ್ನು ಜೇವರ್ಗಿ ಭೀಮಾ ತೀರದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ, ಪೆಲೀಸರು ಸೇರಿಕೊಂಡು ಕೈಗೊಳ್ಳುವಂತಾಗಲಿ, ಇದಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿಯವರು ಇಬ್ಬರೂ ಸೇರಿಕೊಂಡು ಉಸ್ತುವಾರಿ ವಹಿಸಲಿ ಎಂದೂ ಡಾ. ಅಜಯ್ ಸಿಂಗ್ ತಾವು ನಡೆಸಿದ ಚರ್ಚೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…