ಬಿಸಿ ಬಿಸಿ ಸುದ್ದಿ

ಮಹಾಂತ ಜೋಳಿಗೆ ವ್ಯಸನ ಮುಕ್ತಿಯ ಆಂದೋಲನ

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಇಳಕಲ್‌ನ ಪೂಜ್ಯ ಶ್ರೀ ಡಾ.ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ವ್ಯಸನಮುಕ್ತ ದಿನಾಚರಣೆಯನ್ನು ಆಚರಿಸಲಾಯಿತು.

ಸಮಾರಂಭದ ಸಾನಿಧ್ಯ ವಹಿಸಿ, ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪೂಜ್ಯ ಇಳಕಲ್‌ನ ಮಹಾಂತ ಅಪ್ಪಗಳು ಮಹಾಂತ ಜೋಳಿಗೆಯ ಮೂಲಕ ನಾಡಿನಲ್ಲಿ ವ್ಯಸನಮುಕ್ತಿಯ ಆಂದೋಲನ ನಡೆಸಿದರು. ತಮ್ಮ ಜೋಳಿಗೆಯಲ್ಲಿ ಜನರ ದುಶ್ಚಟಗಳನ್ನು ಪಡೆದುಕೊಂಡು ಅವರಿಗೆ ಬಸವಮಾರ್ಗ ತೋರಿಸಿದ ಕೀರ್ತಿ ಪೂಜ್ಯ ಮಹಾಂತ ಅಪ್ಪಗಳವರದ್ದು. ನಮ್ಮ ದೇಹ ಪವಿತ್ರವಾಗಿರುವ ಕ್ಷೇತ್ರ. ದೇಹವೆಂಬ ಕ್ಷೇತ್ರದ ಪಾವಿತ್ರ್ಯತೆಯನ್ನು ನಾವು ಕಾಪಾಡಬೇಕಾದರೆ ದುಶ್ಚಟ, ಸುರ್ಗುಣಗಳಿಂದ ದೂರ ಇರಬೇಕು. ಶರಣರ ಈ ದೇಹಕ್ಕೆ ಪ್ರಸಾದ ಕಾಯವೆಂದು ಕರೆದಿದ್ದಾರೆ.

ಪ್ರಸಾದ ಕಾಯ ಕೆಡಿಸಬಾರದೆಂದು ಹೇಳಿದ್ದಾರೆ. ಅದಕ್ಕಾಗಿ ಪವಿತ್ರ ದೇಹ ದೇವಾಲಯದೊಳಗೆ ಶಿವನ ಒಲುಮೆ ಆಗಬೇಕಾದರೆ ಈ ದೇಹವನ್ನು ಪವಿತ್ರವಾಗಿ ಇಟ್ಟುಕೊಳ್ಳಬೇಕು. ಇದನ್ನೆ ಜೀವನದುದ್ದಗಲಕ್ಕೂ ಪೂಜ್ಯ ಮಹಾಂತ ಅಪ್ಪಗಳು ನಾಡಿನ ಜನರಿಗೆ ಬೋಧಿಸಿದರು. ಪೂಜ್ಯರು ಎಂತಹ ಪ್ರಸಂಗದಲ್ಲಿಯೂ ಬಸವನಿಷ್ಠೆಯನ್ನು ಬಿಡಲಿಲ್ಲ. ಜಾತಿವಾದಿಗಳು ಅವರನ್ನು ಅನೇಕ ರೀತಿಯ ತೊಂದರೆಯನ್ನು ನೀಡಿದರು. ಆದರೂ ಪೂಜ್ಯರು ಯಾವುದಕ್ಕೂ ಬಗ್ಗದೆ ಬಸವಧ್ವಜವನ್ನು ಹಾರಿಸಿದರು. ಅವರ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿರುವ ಕರ್ನಾಟಕ ಸರಕಾರಕ್ಕೆ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದು ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಅನುಭಾವ ನುಡಿ ನುಡಿದಿರುವ ಶರಣ ವಿಶ್ವರಾಧ್ಯ ಸತ್ಯಂಪೇಟೆ ಅವರು ಮಹಾಂತ ಅಪ್ಪಗಳ ಕುರಿತು ವಿವರವಾಗಿ ಮಾತನಾಡಿದರು. ಇಂದು ಯುವಕರು ವ್ಯಸನಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಯುವಕರು ವ್ಯಸನದಿಂದ ದೂರ ಇರಬೇಕು. ಇಂದಿನ ಮಕ್ಕಳೆ ನಾಡಿನ ಸಮಾಜದ ದೇಶದ ಆಸ್ತಿ ಅದಕ್ಕಾಗಿ ಮಕ್ಕಳು ಸಸಕ್ತವಾಗಿದ್ದರೆ ದೇಶ ಸದೃಢವಾಗುತ್ತದೆ. ಬಸವಾದಿ ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಕರು ತಮ್ಮ ವ್ಯಕ್ತಿತ್ವವನ್ನು ಭವ್ಯ ದಿವ್ಯ ಮಾಡಿಕೊಳ್ಳಬೇಕು ಎಂದು ನುಡಿದರು.

ಸಮಾರಂಭದ ಕನ್ನಡ ಸಾಹಿತ್ಯ ಪರಿಷತ್ತಿನ ಭಾಲ್ಕಿ ತಾಲೂಕಾ ಅಧ್ಯಕ್ಷರು, ನಾಗಭೂಷಣ ಮಾಮಡಿ, ಸೋಮನಾಥಪ್ಪ ಅಷ್ಟೂರೆ, ಬಸವರಾಜ ಮರೆ, ವೈಜಿನಾಥಪ್ಪ ಉಪ್ಪಿನ್, ಶಾಂತಯ್ಯ ಸ್ವಾಮಿ, ಬಾಬು ಬೆಲ್ದಾಳ ಉಪಸ್ಥಿತರಿದ್ದರು. ದೀಪಕ ಥಮಕೆ ನಿರೂಪಿಸಿದರು. ಅಕ್ಕನಬಳಗದ ತಾಯಿಂದಿರು ವಚನ ಗಾಯನ ಮಾಡಿದರು.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

35 mins ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

1 hour ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

1 hour ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

1 hour ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

2 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

3 hours ago