ಆಳಂದ: 9ಕ್ಕೆ ಎನ್‍ಎಸ್‍ಎಲ್‍ಗೆ ಪ್ರತಿಭಟನೆ ಬಿಸಿ

ಜಿಲ್ಲಾಧಿಕಾರಿಗಳು ಮಂಗಳವಾರ ಕರೆದ ಸಭೆಯಲ್ಲಿ ರೈತರಿಗೆ 2500 ರೂಪಾಯಿ ಪ್ರತಿಟನ್ ಕಬ್ಬಿಗೆ ಬೆಲೆ ನೀಡದೇ ಹೋದಲ್ಲಿ ನ. 9ರಂದು ನಾಲ್ಕೈದು ಸಾವಿರ ರೈತರೊಂದಿಗೆ ಸೇರಿ ಎನ್‍ಎಸ್‍ಎಲ್ ಕಾರ್ಖಾನೆಗೆ ಮುತ್ತಿಗೆ ಹಾಕಿ ಕಾರ್ಖಾನೆಯ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಪ್ರತಿಭಟಿಸಲಾಗುವುದು.- ಸುಭಾಷ ಗುತ್ತೇದಾರ ಶಾಸಕರು ಆಳಂದ.

ಆಳಂದ: ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ನೀಡಲು ಒಪ್ಪದೇ ಹೋದರೆ ಮಂಗಳವಾರದಿಂದ ಸಂಪೂರ್ಣವಾಗಿ ಕಾರ್ಖಾನೆಯಲ್ಲಿ ಯಾವುದೇ ಕಾರ್ಯ ಚಟುವಟಿಕೆ ಕೈಗೊಳ್ಳಬಾರದು ಎಂದು ಶಾಸಕ ಸುಭಾಷ ಗುತ್ತೇದಾರ ಅವರು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಖಡಕ್ಕಾಗಿ ಸೂಚನೆ ನೀಡಿದ್ದಾರೆ.

ನೆರೆಯ ಅಫಜಲಪೂರದ ರೇಣಕಾ ಸಕ್ಕರೆ ಕಾರ್ಖಾನೆ ನೀಡುವ ದರವನ್ನು ಇಲ್ಲಿಯೂ ನೀಡುವಂತೆ ತಾಲೂಕಿನ ಭೂಸನೂರ ಬಳಿಯ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಮುಂದೆ ರೈತರು ಆರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಸೋಮವಾರ ಸಂಜೆ ಭೇಟಿ ನೀಡಿದ ಅವರು ಹಾಜರಿದ್ದ ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು ಅವರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕರೆದ ಸಭೆಯ ನಿರ್ಣಯವರೆಗೂ ಕಾರ್ಖಾನೆ ನಡೆಸಕೊಡದು. ರೇಣುಕಾ ಶುಗರ್ಸನವರು 2500ರಿಂದ 2600 ರೂಪಾಯಿ ವರೆಗೆ ಪ್ರತಿಟನ್ ಕಬ್ಬಿಗೆ ನೀಡುತ್ತಿದ್ದು, ಎನ್‍ಎಸ್‍ಎಲ್ ಕಾರ್ಖಾನೆಯುವರು ಸಹ ಇವರ ದರವನ್ನೇ ಪ್ರತಿವರ್ಷ ಅನುಸರಿಸುತ್ತಾ ಬಂದು ಈ ವರ್ಷವೂ ಅವರನ್ನು ಅನುಸರಿಸದೆ, 2400 ರೂಪಾಯಿ ಮಾತ್ರ ನೀಡುವ ಹೇಳಿಕೆಗೆ ಕೊಡುವುದು ಸರಿಯಲ್ಲ. ಜಿಲ್ಲಾಧಿಕಾರಿಗಳ ಆದೇಶದಂತೆ ಎನ್‍ಎಸ್‍ಎಲ್ 2500 ರೂಪಾಯಿ ಬೆಲೆ ನಿಗದಿಪಡಿಸಿದರೆ ಕಾರ್ಖಾನೆ ಆರಂಭಕ್ಕೆ ಯಾವುದೇ ತಕರಾರಿಲ್ಲ ಎಂದು ಅವರು ಹೇಳಿದರು.

ಕಬ್ಬು ಸಾಗಾಣೆಯ ವಾಹನಗಳ ಕಳೆದ ಸಾಲಿನಲ್ಲಿ 252 ರೂಪಾಯಿ ಪ್ರತಿಟನ್‍ಗೆ ದರ ನೀಡುವ ಬದಲು ಈ ಬಾರಿ 202 ರೂಪಾಯಿ ಮಾತ್ರ ಇದು ಸಹ 30 ಕಿ.ಮೀ ಸಾರಿಗೆ ಬದಲು 20 ಕಿ.ಮೀ ಕೊಡುವುದಾಗಿ ಹೇಳುತ್ತಿದ್ದಾರೆ. ಸರಿಯಲ್ಲ. ಮೊದಲಿನ 252 ರೂಪಾಯಿ ಹೆಚ್ಚಿಸುವುದು ಮತ್ತು ಪ್ರತಿಟನ್ ಕಬ್ಬಿಗೆ 2500 ರೂಪಾಯಿ ಬೆಲೆ ಘೋಷಿಸಿ ಕಾರ್ಖಾನೆ ಆರಂಭಿಸಿ ಇಲ್ಲ ನಾಳೆಯಿಂದಲೇ ಯಾಅವುದೇ ಚಟುವಟಿಕೆ ನಡೆಯದಂತೆ ತಡೆಹಿಡಿಯರಿ ಎಂದು ಹೇಳಿದರು.

ಕಾರ್ಖಾನೆ ಉಪಾಧ್ಯಕ್ಷ ದೇವರಾಜಲು ಅವರು ರೈತರ ಬೇಡಿಕೆಯ ಕುರಿತು ಆಡಳಿತ ಮಂಡಳಿಯ ಗಮನಕ್ಕೆ ತರಲಾಗುವುದು ಎಂದಾಗ ರೈತ ಮುಖಂಡರು ಆಕ್ರೋಶಗೊಂಡು ಕಾರ್ಖಾನೆಯಲ್ಲಿ ನೌಕರರಿಂದ ಯಾವುದೇ ನಡೆದರೆ ಒಳಹೊಕ್ಕು ಉಗ್ರಹೋರಾಟ ಮಾಡಲಾಗುವುದು ಬೇಡಿಕಗೆ ಸ್ಪಂದಿಸಿದರೆ ಮಾತ್ರ ಕಾರ್ಖಾನೆ ನಡೆಸಿ ಇಲ್ಲ ಮುಚ್ಚಿಬಿಡಿ ಎಂದು ಗಡಿಗಿದರು.

ರೈತರ ಎದುರು ಹಾಕಿಕೊಂಡರೆ ತಕ್ಕಶಾಸ್ತಿ: ಈ ಮೊದಲು ಮುಖಂಡ ಅಶೋಕ ಗುತ್ತೇದಾರ ಅವರು, ಕಾರ್ಖಾನೆ ಅಧಿಕಾರಿಗಳ ಮೇಲೆ ಹರಿಹಾಯ್ದ ಅವರು, ರೈತರ ಸಂಕಷ್ಟ ಕೇಳುವ ಸೌಜನ್ಯವೂ ಇಲ್ಲದ ಆಡಳಿತ ಮಂಡಳಿಯ ಉಪಾಧ್ಯಕ್ಷರ, ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.

ರೈತರ ಎದುರು ಹಾಕಿಕೊಂಡ ಕೃಷಿಂಗ ಮಾಡಿ ಕಾರ್ಖಾನೆ ನಡೆಸುವ ತಾಕ್ಕತ್ತಿದಿಯಾ ಅದು ಹೇಗೆ ನಡೆಸುತ್ತಿರೇ ನೋಡುತ್ತೇವೆ ಗುಡಗಿದರು.

ಮನೆಯ ಹೆಂಡತಿಯ ತಾಳಿಮಾರಿ ಕಬ್ಬು ಬೆಳೆದು ಕಾರ್ಖಾನೆಗೆ ಕೊಡುತ್ತಿದ್ದೇವೆ. ಸಹಕಾರಿ ರಂಗದ ಕಾರ್ಖಾನೆ ಗುತ್ತಿಗೆ ಪಡೆದು 11 ವರ್ಷವಾಗಿದೆ. ನಿಯಮದಂತೆ ಯಾವುದು ಅನುಸರಿಸಿಲ್ಲ. ಕಬ್ಬು ಕೊಟ್ಟವರಿಗೆ ಸಮಯಕ್ಕೆ ಹಣ ಪಾವತಿಸಿಲ್ಲ. ಜಿಲ್ಲಾಡಳಿತ ಆದೇಶ ಎಲ್ಲಿ ಪಾಲಿಸಿದ್ದಾರೆ. ಹೈಕೋರ್ಟ್ ಆದೇಶವು ಪಾಲಿಸಿಲ್ಲ. ರೈತರನ್ನು ಮೋಸಮಾಡುತ್ತಿದ್ದಾರೆ. ರೈತರನ್ನು ಒಡಕುಮಾಡಿ ಜಗಳ ಹಚ್ಚುವ ಕೆಲಸಮಾಡುತ್ತೀರಿ ಎಂದು ಏರುಧ್ವನಿಯಲ್ಲಿ ಕಾರ್ಖಾನೆಯವರನ್ನು ತರಾಟೆಗೆ ತೆಗೆದುಕೊಂಡರು.

ಅವರು, ರೇಣುಕಾ ಶುಗರ್ಸ್ ಕೊಟ್ಟ ಬೆಲೆ ನೀಡಿದರೆ ಮಾತ್ರ ಕಾರ್ಖಾನೆ ನಡೆಸಿ. ಇಲ್ಲವಾದಲ್ಲಿ ನಮ್ಮ ಜೀವ ಹೋದರು ಸರಿ ಕಾರ್ಖಾನೆ ನಡೆಯಲು ಬಿಡುವುದಿಲ್ಲ ಎಂದು ಅವರು ಗುಡಗಿದರು. ಈ ವೇಳೆ ಶಾಸಕರು ಆಗಮಿಸಿದಾಗ ಪರಸ್ಥಿತಿ ಶಾಂತವಾಯಿತು.

ರೈತ ಧನು ಜಾಧವ ಅವರು ಬೆಲೆ ನಿಗದಿಪಡಿಸದೇ ಕಬ್ಬು ಕಟಾವು ಮಾಡಿ ಎಂದು ಕಟಾವು ಮಾಡಿದ್ದಾರೆ. ಈಗ ಕಟಾವಾದ ಕಬ್ಬಿನ ಹಾನಿ ಕಾರ್ಖಾನೆಯವರು ಕೊಡಬೇಕು. ಕಡಿದ ಕಬ್ಬು ತೂಕಮಾಡಿಟ್ಟು ಉಳಿದವರಿಗೆ ಕಡಿಬೇಡಿ ಎಂದು ಹೇಳುತ್ತೇವೆ. ಮೊದಲು ಕಬ್ಬಿಗೆ 2500 ರೂಪಾಯಿ ಕೊಡಬೇಕು ಎಂದರು.

ಈ ಮೊದಲು ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮುಡ್ ಭೇಟಿ ನೀಡಿ ಬೇಡಿಕೆ ಚರ್ಚಿಸಿದರು. ಸ್ಥಳಕ್ಕೆ ಆಗಮಿಸಿದ್ದ ಆಹಾರ ಇಲಾಖೆಯ ಕಲಬುರಗಿ ಉಪನಿರ್ದೇಶಕ ಶಾಂತಗೌಡ ಗೊಳಕಿ ಭೇಟಿ ನೀಡಿ ರೈತರ ಬೇಡಿಕೆ ಆಲಿಸಿ ಚರ್ಚಿಸಿದರು.

ಮುಖಂಡ ಚಂದ್ರಶೇಖರ ಸಾಹು, ರಾಜಶೇಖರ ಮಲಶೆಟ್ಟಿ, ಕಲ್ಯಾಣಿ ಜಮಾದಾರ, ವೀರಣ್ಣಾ ಮಂಗಾಣೆ, ಅಶೋಕ ಪಾಟೀಲ, ಶರಣಪ್ಪ ಮಲಶೆಟ್ಟಿ, ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಂಕರ ಸೋಮಾರ, ಶಂಕರ ಎಸ್. ಮದಗುಣಕಿ, ಶಾಂತಪ್ಪ ಮೈನಾಳ, ಬಸವರಾಜ ಮಲಶೆಟ್ಟಿ, ದಿಲೀಪ ಕೋಥಲಿ ಸೇರಿದಂತೆ ನೂರಾರು ರೈತರು ಮತ್ತು ಕಬ್ಬು ಸಾಗಾಣೆಯ ವಾಹನ ಮಾಲೀಕರು ಇದ್ದರು.

emedialine

Recent Posts

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

49 mins ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

12 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

14 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

14 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

15 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420