ಕಷ್ಟಗಳನ್ನು ಭೇಟಿಯಾದಾಗ, ತಾಳ್ಮೆಗೆ ದಾರಿ  ಸಿಗುತ್ತದೆ

ಕಲಬುರಗಿ: ಅಲೆಯಾಗಿ ಬಂದು, ನೆಲೆಯಾಗಿ ನಿಂತು ಅಲೆಯಂತೆ ಅಪ್ಪಳಿಸಿ, ನೆಲೆ ಇಲ್ಲದೆ ಹೋಗುವ ಈ ಜೀವನದಲ್ಲಿ ನೆನಪುಗಳ ಜೊತೆಗೆ ನಾವು ಮಾಡುವ ಒಳ್ಳೆಯ ಕಾರ್ಯಗಳೆ ಶಾಶ್ವತವಾಗಿ ಉಳಿಯುತ್ತವೆ ಎಂದು ಹುಟಗಿ ಬ್ರಹನ್ಮಠ ಯೋಗಿ ರಾಜೇಂದ್ರ ಶಿಕ್ಷಣ ಟ್ರಸ್ಟನ್ ಕಾರ್ಯದರ್ಶಿಯಾದ ಓಂಕಾರೆಶ್ವರ ಗೋಸಿಮಠ ಹೇಳಿದರು.

ನಗರದ ಒಕ್ಕಲಗೆರದ ಶ್ರೀ ವೀರ ತಪಸ್ವಿ ಚನ್ನವೀರ ಶಿವಾಚಾರ್ಯ ಪ್ರೌಢಶಾಲೆಯಲ್ಲಿ ಚನ್ನಮಲ್ಲಯ್ಯ ಹಿರೇಮಠ ಅವರ ದ್ವಿತೀಯ ದರ್ಜೆಯ ಸಹಾಯಕರಾಗಿ ಸೇವಾ ನಿವೃತ್ತಿ  ಹಾಗೂ ಬಿಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸೇವಾ ನಿವೃತ್ತಿ ಜೀವನ ಸಮಾಜ ಸೇವೆಗೆ ಮನಸ್ಸನ್ನು ಇಮ್ಮಡಿಗೊಳಿಸುತ್ತದೆ. ಅಂತಹ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು.

ಸೇವಾ ನಿವೃತ್ತಿ ಹೊಂದಿದ ಚನ್ನಮಲ್ಲಯ್ಯ ಹಿರೇಮಠ ಮಾತನಾಡುತ್ತಾ ಯಾವಾಗಲೂ ಕಷ್ಟಗಳನ್ನು ಭೇಟಿಯಾದಾಗ, ತಾಳ್ಮೆಗೆ ದಾರಿ  ಸಿಗುತ್ತದೆ, ಅವಮಾನವನ್ನು ಭೇಟಿಯಾದಾಗ ನಿರ್ಣಯಗಳಿಗೆ ದಾರಿ ಸಿಗುತ್ತದೆ, ಸೋಲನ್ನು ಭೇಟಿಯಾದಾಗ ಗೆಲುವಿನ ಧಾರಿ ಸಿಗುತ್ತದೆ ಅದಕ್ಕಾಗಿ ತಮ್ಮೆಲ್ಲರ ಸಹಕಾರದಿಂದ ಯಾವುದೇ ಕಪ್ಪು ಚುಕ್ಕೆ ನಿವೃತ್ತಿ ಹೊಂದಿರುವುದಕ್ಕೆ ತಮ್ಮೆಲ್ಲ ರ ಬೆಂಬಲವೇ ಕಾರಣವೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಟ್ರಸ್ಟನ್ ಮುಖ್ಯಸ್ಥರಾದ ಶಾಂತಯ್ಯ ಸ್ವಾಮಿ, ಸಿದ್ದರಾಮ ಪಾಟೀಲ, ಅಪ್ಸರ್ ಮಿಯ, ಸುವರ್ಣ ಲತಾ ಹಿರೇಮಠ, ಬಸ್ಸಮ್ಮ ಘೋಷಿ ಮಠ, ಮುಖ್ಯ ಗುರುಗಳಾದ ಚಂದ್ರಕಲಾ ಉಕಲಿ, ಚಂದ್ರಶೇಖರ ಚಂಡರಕಿ ಮಠ, ಅಶೋಕ, ಮಾಜಿ ವಿದ್ಯಾರ್ಥಿಯಾದ ಜನಪರ ಹೋರಾಟಗಾರ ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ, ಶಿವಕುಮಾರ ಮಠಪತಿ, ಶಿವಾನಂದ ಬಿರಾದರ, ಶರಣಗೌಡ ಕಿರಣಗಿ, ಆಗಮಿಸಿದರು.

ವಿದ್ಯಾರ್ಥಿಗಳು ಪ್ರಾರ್ಥಿಸಿದರು.  ಶಿವಾನಂದ ಸಾಗರ ಸ್ವಾಗತಿಸಿದರು. ಸಿದ್ದಣ್ಣ ಸಜ್ಜನ. ಸಿ.ವಿ. ಪಾಟೀಲ ನಿರೂಪಿಸಿದರು. ಶಿವರಾಜ ನಾಯಕ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಭಾಕರ ಪಾಟೀಲ, ಬಸವರಾಜ ಇಂಗಳೇಶ್ವರ, ಶಾರದಾ, ಗುರುರಾಜ ಕುಲಕರ್ಣಿ, ಸಂಗಮೇಶ ನಾಗೂರ, ವೀರೇಶ ಹಿರೇಮಠ,  ಪ್ರೌಢಶಾಲೆಯ ಹಾಗೂ ಪ್ರಾಥಮಿಕ ಶಾಲೆ ಶಿಕ್ಷಕರು ವಿದ್ಯಾರ್ಥಿಗಳು ಸೇರಿದಂತೆ ಅನೇಕ ಜನರು  ಭಾಗವಹಿಸಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

4 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

7 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

11 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

12 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

14 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420