ಕಲಬುರಗಿ: ರಂಗಾಯಣದಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಮತ್ತು “ಏಕ ವ್ಯಕ್ತಿ ನಾಟಕ ಸಪ್ತಾಹ”ವನ್ನು ಇದೇ ಆಗಸ್ಟ್ 9 ರಿಂದ 15ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಕಲಬುರಗಿ ರಂಗಾಯಣ ಆವರಣದಲ್ಲಿ ವಿವಿಧ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಸಪ್ತಾಹದ ಅಂಗವಾಗಿ ಆಗಸ್ಟ್ 9ರಂದು ಚಿಟ್ಟೆ, ಆಗಸ್ಟ್ 10 ರಂದು ರಾಶಿ ಚಕ್ರ, ಆಗಸ್ಟ್ 11 ರಂದು ನಕ್ಷತ್ರದ ಧೂಳು, ಆಗಸ್ಟ್ 12 ರಂದು ಮಧುರ ಮಂಡೋದರಿ, ಆಗಸ್ಟ್ 13 ರಂದು ಸ್ಮಶಾನ ವಾಸಿಯ ಸ್ವಗತ, ಆಗಸ್ಟ್ 14 ರಂದು ಊರ್ಮಿಳಾ ಹಾಗೂ ಆಗಸ್ಟ್ 15 ರಂದು ಕೊನೆಯಿಲ್ಲದ ಪ್ರೀತಿ ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ.