ಸುರಪುರ:ಚುನಾವಣಾಧಿಕಾರಿ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ

ಸುರಪುರ: ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸುರಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಅಮರೇಶ ನಾಯಕ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚುನಾವಣಾಧಿಕಾರಿಗಳು,ಈಬಾರಿಯ ಚುನಾವಣೆಯ ಕುರಿತು ನಿಮಗೆ ವಹಿಸಿರುವ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವಂತೆ ಕರೆ ನೀಡಿದರು.ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನಿಗಾವಹಿಸುವಂತೆ ತಿಳಿಸಿದರು.ಅಲ್ಲದೆ ಗೋಡೆ ಬರಹಗಳಾಗಲಿ,ಬ್ಯಾನರ್‍ಗಳಾಗಲಿ,ಧ್ವಜಗಳಾಗಲಿ ಯಾವುದು ಇಲ್ಲದಂತೆ ತೆರವುಗೊಳಿಸಿ.ನಿಮ್ಮೊಂದಿಗೆ ಅಗತ್ಯವಿದ್ದಲ್ಲಿ ಸ್ಥಳಿಯ ಗ್ರಾಮ ಪಂಚಾಯತಿಯ ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳಿ ಎಂದು ತಿಳಿಸಿದರು.

ಇಂದಿನಿಂದಲೇ ನಿಮ್ಮ ಕಾರ್ಯವ್ಯಾಪ್ತಿಯಲ್ಲಿ ನಿಗಾವಹಿಸುವಂತೆ ತಿಳಿಸಿದರು.ಅಲ್ಲದೆ ಚೆಕ್‍ಪೋಸ್ಟ್‍ಗಳಲ್ಲಿ ಕಾರ್ಯನಿರ್ವಹಿಸುವವರು ತುಂಬಾ ನಿಗಾವಹಿಸುವಂತೆ ಸೂಚಿಸಿದರು.ಈಗಾಗಲೇ ಜಿಲ್ಲೆಯ ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ಅನೇಕ ವಸ್ತುಗಳು ಸೀಜಾಗ್ತಿವೆ,ಆದರೆ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಏನೊಂದು ಸೀಜ್ ಆಗದಿರುವುದು ಮೇಲಾಧಿಕಾರಿಗಳಿಗೆ ಅನುಮಾನಕ್ಕೆ ಕಾರಣವಾಗಲಿದೆ.ಆದ್ದರಿಂದ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ತೀವ್ರನಿಗಾವಹಿಸಿ.ಯಾವುದೇ ಚೆಕ್ ಪೋಸ್ಟಿನಿಂದ ಏನಾದರು ಅಕ್ರಮವಾಗಿ ವಸ್ತುಗಳು ಪಾರಾಗಿ ಮುಂದಿನ ಚೆಕ್‍ಪೋಸ್ಟ್‍ಲ್ಲಿ ಸಿಕ್ಕರೆ ಹಿಂದಿನ ಎಲ್ಲಾ ಚೆಕ್‍ಪೋಸ್ಟ್‍ನವರಿಗೆ ಕ್ರಮವಾಗಲಿದೆ ಎಂಬುದು ನೆನಪಲ್ಲಿಟ್ಟುಕೊಳ್ಳುವಂತೆ ಎಚ್ಚರಿಸಿದರು.

ತಹಸೀಲ್ದಾರರು ಹಾಗೂ ಸಹಾಯಕ ಚುನಾವಣಾಧಿಕಾರಿ ಸುಬ್ಬಣ್ಣ ಜಮಖಂಡಿ ಮಾತನಾಡಿ,ಚೆಕ್‍ಪೋಸ್ಟ್‍ಗಳಿಂದ ಚಿಕ್ಕ ಮಕ್ಕಳ ಬ್ಯಾಗ್‍ಗಳು ಅಥವಾ ಚೆಕ್‍ಪೋಸ್ಟ್ ಬಂದಾಗ ವಾಹನ ದಿಂದ ಇಳಿದು ನಡೆದುಕೊಂಡು ತಪ್ಪಿಸಿಕೊಂಡು ಹೋಗುವುದು ಇಂತಹ ಹಲವಾರು ತಂತ್ರಗಳನ್ನು ಮಾಡುತ್ತಾರೆ ಇದರ ಬಗ್ಗೆ ಗಮನವಿರಲಿ ಎಂದರು.ಅಲ್ಲದೆ ಯಾವುದೇ ಅಧಿಕಾರಿಗಳು ಮಾಹಿತಿ ನೀಡದೆ ಕ್ಷೇತ್ರ ಬಿಟ್ಟು ಹೋಗುವಂತಿಲ್ಲ,ಹಾಗೊಮ್ಮೆ ಅಗತ್ಯವಿದ್ದಲ್ಲಿ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಡಿವೈಎಸ್ಪಿ ಡಾ:ಮಂಜುನಾಥ ಟಿ ಮಾತನಾಡಿ.ಟಿ ಮಾತನಾಡಿ,ಯಾವುದೇ ಚೆಕ್‍ಪೋಸ್ಟ್‍ಲ್ಲಿ ರಾಜಕಾರಣಿಗಳು ಏನಾದರು ತಪ್ಪಿಸಿಕೊಂಡು ತರುವಂತದ್ದನ್ನು ಕೇವಲ ಪೊಲೀಸರೆ ಸೀಜ್ ಮಾಡಲಿ ಎಂದು ಇರಬೇಡಿ,ಎಲ್ಲರಿಗೂ ಜವಬ್ದಾರಿ ಇರುವುದರಿಂದ ಯಾವುದೇ ರೀತಿಯ ಅಕ್ರಮವಾಗಿ ವಸ್ತುಗಳು,ಹಣ ತರದಂತೆ ತಾವೆಲ್ಲರು ಸೇರಿ ಎಚ್ಚರಿಕೆ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಹುಣಸಗಿ ತಹಸೀಲ್ದಾರರು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಾದ ಜಗದೀಶ ಚೌರ್,ಗ್ರೇಡ-2 ತಹಸೀಲ್ದಾರ್ ಮಲ್ಲಯ್ಯ ದಂಡು,ಉಪ ತಹಸೀಲ್ದಾರ್ ಅವಿನಾಶ್, ಸುರಪುರ ಠಾಣೆ ಪಿ.ಐ ಆನಂದ ವಾಘ್ಮೋಡೆ,ಹುಣಸಗಿ ಠಾಣೆ ಸರ್ಕಲ್ ಇನ್ಸ್ಪೇಕ್ಟರ್ ಬಿ.ಎನ್.ಚಿಕ್ಕಣ್ಣನವರ್,ತಾ.ಪಂ ಇಒ ಚಂದ್ರಶೇಖರ್ ಪವಾರ್,ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ್,ಸಿಡಿಪಿಓ ಅನಿಲ್ ಕಾಂಬ್ಳೆ,ಟಿ.ಹೆಚ್.ಓ ಡಾ:ಆರ್.ವಿ.ನಾಯಕ, ಸಮಾಜಕಲ್ಯಾಣಾಧಿಕಾರಿ ಶೃತಿ ಎಸ್ ಸೇರಿದಂತೆ ಕ್ಷೇತ್ರದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.ಹಣಮಂತ್ರಾಯ ಪೂಜಾರಿ ಸಭೆಯ ಕುರಿತು ನಿರೂಪಿಸಿ ವಂದಿಸಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

7 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

7 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

7 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

7 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

7 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

7 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420