1 ರಂದು ನವಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದಿಂದ ವಿಶ್ವ ಕಾರ್ಮಿಕ ದಿನಾಚರಣೆ

ಕಲಬುರಗಿ,: ನವಕಲ್ಯಾಣ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಮೇ 01 ರಂದು ವಿಶ್ವ ಕಾರ್ಮಿಕ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಭೀಮರಾಯ ಎಂ. ಕಂದಳ್ಳಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಮಹಾನಗರ ಪಾಲಿಕೆಯ ಪಕ್ಕದ ಸಾರ್ವಜನಿಕ ಉದ್ಯಾನವನದಲ್ಲಿ  ಮುಂಜಾನೆ 1 ಗಂಟೆಗೆ ಕಲಬುರಗಿ ಮಹಾನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ಸಂಬಂಧಿಸಿದಂತಹ ಆಯಾ ಕ್ಷೇತ್ರದ ಸುಮಾರು ಐವತ್ತು ಸಾವಿರ ಜನ ಕಾರ್ಮಿಕರು ಇತರೆ ಕ್ಷೇತ್ರದ ಸುಮಾರು 25,000 ಕಾರ್ಮಿಕರು ದುಡಿಯುತ್ತಿದ್ದಾರೆ ಎಂದು ಮಾಹಿತಿ ನೀಡಿದ ಅವರು ಮೇ-1 ಕಾರ್ಮಿಕರಿಗೆ ಹಬ್ಬದ ಪ್ರತೀಕವಾಗಿ ಕಾರ್ಮಿಕ ಕ್ಷೇತ್ರದ ಎಲ್ಲಾ ವರ್ಗದ ಕಾರ್ಮಿಕರು ಈ ಹಬ್ಬವನ್ನು ಆಚರಿಸಲು ಒಂದು ದಿನ ಕೆಲಸ ಕಡ್ಡಾಯವಾಗಿ ಸ್ಥಗಿತಗೊಳಿಸಿ (ಬಂದ್ ಮಾಡಿ) ಈ ಮಹತ್ವದ ದಿನಾಚರಣೆಯಲ್ಲಿ ಭಾಗವಹಿಸುವುದು ಅತಿ ಮಹತ್ವವಾಗಿದೆ ಎಂದು ತಿಳಿಸಿದರು.

ಸರಕಾರಿ ವಲಯ ಈ ದಿನಾಚರಣೆಗೆ ರಜೆ ನೀಡುವ ಮೂಲಕ ಗೌರವಿಸುತ್ತಿದೆ. ಆದರೆ, ಖಾಸಗಿ ಕ್ಷೇತ್ರ ಈ ದಿನಾಚರಣೆಗೆ ದುಡಿಯುವ ವರ್ಗಕ್ಕೆ ಸಂಬಳ ಸಹಿತ ರಜೆ ನೀಡದೇ ಇರುವದು ಖಂಡನೀಯ ವಾಗಿದೆ ಮತ್ತು ಇದು ದುಡಿಯುವ ವರ್ಗಕ್ಕೆ ಅಪಮಾನ ಮಾಡಿದಂತಾಗುತ್ತದೆ. ಖಾಸಗಿ ವಲಯದ ವಾಣಿಜ್ಯೋದ್ಯಮಿಗಳಿಗೆ, ವ್ಯಾಪಾರಿಗಳಿಗೆ, ಗುತ್ತಿಗೆದಾರರಿಗೆ, ವರ್ತಕರಿಗೆ ವಿನಂತಿಸಿಕೊಳ್ಳುವದೇನೆಂದರೆ 1 ರಂದು ಅಧೀನದಲ್ಲಿ ದುಡಿಯುವ ಕೆಲಸಗಾರರಿಗೆ ಸಂಬಳ ಸಹಿತವಾಗಿ ರಜೆ ನೀಡಿ ದುಡಿಯುವ ವರ್ಗಕ್ಕೆ ಮತ್ತು ಕಾರ್ಮಿಕ ದಿನಾಚರಣೆಗೆ ಗೌರವ ಕೊಡಬೇಕೆಂದು ಈ ಮೂಲಕ ಮನವರಿಕೆ ಮಾಡಿಕೊಡಲಾಗುತ್ತದೆ.
ಕಟ್ಟಡ ಕಾರ್ಮಿಕರಿಗೆ ಸರಕಾರ ಸಹಸ್ರಾರು ಕೋಟಿ ಯೋಜನೆಗಳು ರೂಪಿಸಿ ಹಣ ಮಂಜೂರು ಮಾಡಿದರೂ ಸಹ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಇವುಗಳ ಸಮರ್ಪಕ ಅನುಷ್ಠಾನವಾಗದೆ, ಇದರ ಫಲ ಕಾರ್ಮಿಕರಿಗೆ ತಲುಪದೇ ಇರುವುದು ಖೇದಕರವಾಗಿದೆ ಎಂದು ತಿಳಿಸಿದರು.

ದುಡಿಯುವ ವರ್ಗಕ್ಕೆ ಗೌರವ ಸೂಚಿಸುವುದರ ಜೊತೆಗೆ ಸಮಸ್ತ ಕಾರ್ಮಿಕರ ಸಂಘಟನೆಯ ಶಕ್ತಿ ತೋರಿಸುವ ಮುಖಾಂತರ ಈ ದಿನಾಚರಣೆಯನ್ನು ಹಬ್ಬದ ರೂಪದಲ್ಲಿ ಆಚರಿಸುತ್ತೇವೆ. ಅಷ್ಟೇ ಅಲ್ಲದೇ, ಉತ್ಪಾದನಾ ವಲಯದಲ್ಲಿ ಮತ್ತು ಅಭಿವೃದ್ಧಿಯಲ್ಲಿ ಕಾರ್ಮಿಕರ ಹಕ್ಕಿನ ಜಾಗೃತಿ ಮೂಡಿಸುವುದು, ಕಾರ್ಮಿಕರ ಕಲ್ಯಾಣಕ್ಕಾಗಿ ಇರುವ ಯೋಜನೆಗಳ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುವ ಕಾರ್ಯವೂ ಸಹ ಈ ಸಂದರ್ಭದಲ್ಲಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಮಿಕ ದಿನಾಚರಣೆಗೆ ಉದ್ಘಾಟಕರಾಗಿ ಲಿಂಗರಾಜ ಅಪ್ಪರವರು ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಹೋರಾಟಗಾರರಾದ ಲಕ್ಷ್ಮಣ ದಸ್ತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಬುರಾವ ಯಡ್ರಾಮಿ, ಹಿರಿಯ ಪತ್ರಕರ್ತರಾದ ವಾದಿರಾಜ ವ್ಯಾಸಮುದ್ರ, ರಾಮಕೃಷ್ಣ ಬಡಶೇಶಿ, ಕುಮಾರ ಬುರಡಕಟ್ಟಿ, ಪ್ರಭುಲಿಂಗ ನೀಲೂರೆ, ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ರಮೇಶ ಕುಂಬಾರ, ರವೀಂದ್ರಕುಮಾರ ಬಲ್ಲೂರ ಸೇರಿದಂತೆ ಕಟ್ಟಡ ಕರ್ಮಿಕ ಸಂಘಟನೆಯಶಹಾಪೂರ ಮುಖಂಡರಾದ, ಪ್ರದೀಪ ಅಣದಿ, ಇಂಜಿನಿಯರ ಅಸೋಸಿಯೇಷನ್ ಅಧ್ಯಕ್ಷರಾದ ಮುರುಳಿಧರ ಜಿ. ಕರಳಿಕರ್, ಅನೀಲಕುಮಾರ ಮೆಂಗಾಣಿ ಸೇರಿದಂತೆ ಆಯಾ ಕ್ಶೇತ್ರದ ಅನೇಕ ಗಣ್ಯರು, ಬುದ್ಧಿ ಜೀವಿಗಳು, ಚಿಂತಕರು, ಕಾರ್ಮಿಕ ಮುಖಂಡರು, ಹೋರಾಟಗಾರರು ಭಾಗವಹಿಸಲಿದ್ದಾರೆ.

2023ನೇ ಮೇ ಕಾರ್ಮಿಕರ ದಿನಾಚರಣೆ ಪ್ರಸ್ತುತ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಂದಿರುವುದರಿಂದ ಸಹಜವಾಗಿ ನಮ್ಮ ಈ ದಿನಾಚರಣೆಯ ಕಾರ್ಯಕ್ರಮದಲ್ಲಿ ಕಲಬುರಗಿ ಸೇರಿದಂತೆ, ಕಲ್ಯಾಣ ಕರ್ನಾಟಕದ ಲಕ್ಷಾಂತರ ಕಾರ್ಮಿಕರಿಗೆ ತಮ್ಮ ಒಂದೊಂದು ಮತದಾನದ ಶಕ್ತಿಯನ್ನು ಕಡ್ಡಾಯವಾಗಿ ಚಲಾಯಿಸುವುದರ ಬಗ್ಗೆಯೂ ಕೂಡ ಅರಿವು ಮೂಡಿಸಲಾಗುವುದು. ಪಕ್ಷಾತೀತವಾಗಿ, ಧರ್ಮಾತೀತವಾಗಿ, ಜಾತ್ಯಾತೀತವಾಗಿ, ವರ್ಗಾತೀತವಾಗಿ ಶುದ್ಧ ರಾಜಕಿಯೇತರ ತಳಹದಿಯ ಮೇಲೆ ಜರುಗುವ ಈ ಬೃಹತ್ ಕಾರ್ಮಿಕ ದಿನಾಚರಣೆಗೆ ಕಟ್ಟಡ ಕಾರ್ಮಿಕ ಕ್ಷೇತ್ರದ ಎಲ್ಲಾ ಕಾರ್ಮಿಕರು, ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಕಾರ್ಮಿಕರು ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ಅಂದು ಮುಂಜಾನೆ 11.00 ಗಂಟೆಯ ಒಳಗೆ ಪಬ್ಲಿಕ್ ಗಾರ್ಡನ್ ಆವರಣದಲ್ಲಿ ಸೇರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಭಿಮಾನದ ಪ್ರತೀಕವಾದ ಕಾರ್ಮಿಕ ದಿನಾಚರಣೆ ಯಶಸ್ವಿಗೊಳಿಸಲು ಸಂಘದ ಮುಖಂಡರು ತೋರಿದ್ದಾರೆ.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420