ಹಿಂಬಾಲಕರಿಂದಲೆ ಚಂದು ಪಾಟೀಲರ ಸೋಲು

ಕಲಬುರಗಿ: ಕಳೆದ ಚುನಾವಣೆಯಲ್ಲಿ ಸೋತರೂ ಧೃತಿಗೆಡದ ಚಂದು ಪಾಟೀಲರು ಐದು ವರ್ಷ ಕಲಬುರ್ಗಿ ಉತ್ತರ ಕ್ಷೇತ್ರದಲ್ಲಿ ಮತದಾರರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದರು. ಈ ಬಾರಿ ಚಂದು ಪಾಟೀಲರ ಸೋಲಿಗೆ ಅವರ ಹಿಂಬಾಲಕರೇ ಕಾರಣ ಎಂದು ಸಾಮಾಜಿಕ ಹೋರಾಟಗಾರ ದೇವಿಂದ್ರ ದೇಸಾಯಿ ಕಲ್ಲೂರ್ ಆರೋಪಿಸಿದ್ದಾರೆ.

ಹೇಳಿಕೆ ಹೊರಡಿಸಿರುವ ಅವರು ಚಂದು ಪಾಟೀಲರು ಸಾಮಾಜಿಕ ಕಳಕಳಿ ಉಳ್ಳ ಯುವನಾಯಕರು, ಬಡವರಿಗೆ, ದುರ್ಬಲರಿಗೆ ಸದಾ ಸಹಾಯ ಹಸ್ತ ಇದೆ. ಅವರಲ್ಲಿ ಯಾವುದೇ ಅಹಂ ಇಲ್ಲ, ಉತ್ತರ ಮತ ಕ್ಷೇತ್ರದಲ್ಲಿ 13 ಜನ ಬಿಜೆಪಿ ಕಾಪೆರ್Çರೇಟ್ ಗಳು ತಮ್ಮ ಕರ್ತವ್ಯ, ಪಕ್ಷ ನಿಷ್ಠೆ ಪ್ರಾಮಾಣಿಕತೆಯಿಂದ ಮತದಾರರ ಮನ ಗೆಲ್ಲಲು ಪ್ರಯತ್ನ ಮಾಡಲಿಲ್ಲ. ಚಂದು ಪಾಟೀಲರ ಅಪ್ತರಲ್ಲಿಯೆ ಕೆಲವರು ಸರಿಯಾಗಿ ಕೆಲಸ ಮಾಡದೇ ಇದ್ದದ್ದು ಬೇಸರ ತಂದಿದೆ. ಅವರ ಆಪ್ತರಲ್ಲಿ ಕರಪತ್ರ ಕೇಳಿದರೆ ಕಳುಹಿಸಿ ಕೊಡುವದಾಗಿ ಮಾತ್ರ ಹೇಳಿದರು.

ಕಾರ್ಯಕರ್ತರ ಫೆÇೀನ್ ಕರೆಗೆ ಸರಿಯಾಗಿ ಸ್ಪಂದಿಸಲಿಲ್ಲ, ಇದು ಕಾರ್ಯಕರ್ತರಲ್ಲಿ ಬೇಸರ ತಂದಿದೆ. ಬಿಜೆಪಿ ಕೆಲವು ಮುಖಂಡರ ವರ್ತನೆ ಇದರ ಹೊರತಾಗಿಲ್ಲ, ಹಾಗಾದರೆ ಚಂದು ಪಾಟೀಲರ ಆಪ್ತರು ಮತದಾರರಲ್ಲಿ ಕರಪತ್ರ ನೀಡದೆ ಪ್ರಚಾರ ಮಾಡಿದರೇ?, ಚಂದು ಪಾಟೀಲರು 13 ಜನ ಕಾಪೆರ್Çರೇಟರ್ ಗಳನ್ನು ಗೆಲ್ಲಿಸಿ ಕೊಟ್ಟರು, ಗೆದ್ದ ಕಾಪೆರ್Çರೇಟ್ ಗಳು ತಲಾ ಎರಡು ಸಾವಿರ ಮತಗಳು ಹಾಕಿಸುವದಕ್ಕೆ ಆಗಲಿಲ್ಲವೆ? ಒಟ್ಟಾರೆ ಚಂದು ಪಾಟೀಲರ ಸೋಲಿಗೆ ಸಂಘಟನಾತ್ಮಕ ಕೊರತೆ ಎದ್ದು ಕಾಣುತಿತ್ತು. ಅವರ ಆಪ್ತರೇ ಅವರ ಸೋಲಿಗೆ ಕಾರಣವಾಗಿದ್ದಾರೆ ಎಂದು ದೇವೇಂದ್ರ ದೇಸಾಯಿ ಕಲ್ಲೂರ್ ಪ್ರಕಟಣೆ ಮೂಲಕ ಬೇಸರ ವ್ಯಕ್ತ ಪಡಿಸಿದ್ದಾರೆ.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420