ಬಿಸಿ ಬಿಸಿ ಸುದ್ದಿ

ಕೆವೈಡಿಸಿಸಿ ಬ್ಯಾಂಕ್ ಹಂಗಾಮಿ ಅಧ್ಯಕ್ಷರಾಗಿ ಸುರೇಶ ಸಜ್ಜನ ಆಯ್ಕೆ

ಕಲಬುರಗಿ: ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಭಾರಿ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಸುರೇಶ ಸಜ್ಜನ ಸುರಪುರ ಅವರು ಶುಕ್ರವಾರ ಜರುಗಿದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆಗೊಂಡರು.

ಈ ಹಿಂದೆ ಅಧ್ಯಕ್ಷರಾಗಿದ್ದ ರಾಜಕುಮಾರ ಪಾಟೀಲ್ ತೆಲ್ಕೂರ ಅವರು ರಾಜೀನಾಮೆ ನೀಡಿದ ಪ್ರಯುಕ್ತ ತೆರವಾದ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಲು ನಗರದ ಗಾಜಿಪುರದಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ಜರುಗಿದ ಎಲ್ಲ ನಿರ್ದೇಶಕರ ಸಭೆಯಲ್ಲಿ ಚರ್ಚೆ ನಡೆಸಿ ನಿಯಮದಂತೆ ಹಾಲಿ ಉಪಾಧ್ಯಕ್ಷರಾಗಿರುವ ಸುರೇಶ ಸಜ್ಜನ ಅವರನ್ನು ಸರ್ವಾನುಮತದಿಂದ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಮುಂಗಾರು ಹಂಗಾಮು ಆರಂಭÀಗೊಳ್ಳುತ್ತಿರುವುದರಿAದ ರೈತರಿಗೆ ಸಾಲ ವಿತರಣೆ ಮಾಡುವ ಕುರಿತು ಶೀಘ್ರವೇ ಜಿಲ್ಲೆ ಸಚಿವರನ್ನು ಭೇಟಿ ಮಾಡಿ ಚರ್ಚಿಸುವೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ನಬಾರ್ಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ರೈತರಿಗೆ ಅನುವು ಮಾಡಿಕೊಡಲು ಪ್ರಯತ್ನಿಸುವೆ. ಡಿಸಿಸಿ ಬ್ಯಾಂಕ್‌ನನ್ನು ಇನ್ನಷ್ಟು ಬಲಗೊಳಿಸಿ ಕೃಷಿಕರಿಗಾಗಿ ಕೆಲವೊಂದು ಹೊಸ ಯೋಜನೆಗಳನ್ನು ರೂಪಿಸಲು ಬ್ಯಾಂಕ್ ಅಧಿಕಾರಿಗಳ ಹಾಗೂ ನಿರ್ದೇಶಕ ಸಭೆ ನಡೆಸಲಾಗುವುದು. – ಸುರೇಶ ಸಜ್ಜನ ಕೆವೈಡಿಸಿಸಿ ಬ್ಯಾಂಕ್ ಅಧ್ಯಕ್ಷ.

ಆಯ್ಕೆಯಾಗುತ್ತಲೇ ಎಲ್ಲ ನಿರ್ದೇಶಕರು ಹಾಗೂ ಅಧಿಕಾರಿಗಳು ಸಜ್ಜನ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಬ್ಯಾಂಕಿನ ಮುಂಭಾಗದಲ್ಲಿ ಜಮಾಗೊಂಡಿದ್ದ ಅವರ ಬೆಂಬಲಿಗರು ಸುರೇಶ ಸಜ್ಜನ ಆಯ್ಕೆ ಘೋಷಣೆ ಮಾಡುತ್ತಲೇ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ್, ಕೆವೈಡಿಸಿಸಿ ನಿರ್ದೇಶಕರಾದ ಸೋಮಶೇಖರ ಗೋನಾಯಕ, ಶರಣಬಸಪ್ಪ ಪಾಟೀಲ್ ಅಷ್ಟಗಿ, ಬಾಪುಗೌಡ ಪಾಟೀಲ್ ಹುಣಸಗಿ, ಸಿದ್ರಾಮರಡ್ಡಿ ಕೌಳೂರ ಯಾದಗಿರಿ, ಗೌತಮ ಪಾಟೀಲ್ ಚಿಂಚೋಳಿ, ಬಸವರಾಜ ಪಾಟೀಲ್ ಹೇರೂರ, ಅಶೋಕ ಸಾವಳೇಶ್ವರ ಆಳಂದ, ಚಂದ್ರಶೇಖರ ತಳ್ಳಳ್ಳಿ, ನಿಂಗಣ್ಣ ದೊಡ್ಡಮನಿ, ಉತ್ತಮ ಬಜಾಜ ಮೊದಲಾದವರಿದ್ದರು. ಸಿಇಒ ಮತ್ತು ಎಂಡಿ ವಿಶ್ವನಾಥ ಮಲಕೂಡ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಕಿಶೋರ ಸೇಠ ಸುರಪುರ, ಪ್ರಕಾಶ ಸಜ್ಜನ, ರಾಜಾ ಮುಕುಂದ ನಾಯಕ, ಮಂಜುನಾಥ ಗುಳಗಿ, ಮಲ್ಲಿಕಾರ್ಜುನ ರಡ್ಡಿ ಹತ್ತಿಕುಣಿ, ಶಾಂತರಡ್ಡಿ ಚೌಧರಿ ಮುದನೂರ, ವಿಶ್ವರಾಧ್ಯ ಸತ್ಯಂಪೇಟೆ, ರೇವಣಸಿದ್ದಪ್ಪ ಸಂಕಾಲಿ, ಶರಣು ಬಿಲ್ಲಾಡ, ಚಂದ್ರಕಾAತ ಗೌಡರ, ಸೇರಿದಂತೆ ಅನೇಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

emedialine

Recent Posts

ಅಸಮಾನತೆಯ ಸಮಾಜದಲ್ಲಿ ಸಮಾನತೆ ಸ್ಥಾಪಿಸಲು ಸಂವಿಧಾನವೇ ಹಾದಿ: ಪ್ರೋ.ಸೋಮಶೇಖರ

ಶಹಾಬಾದ:ಅಸಮಾನತೆಯ ಸಮಾಜದಲ್ಲಿ ಸಮಾನತೆ ಸ್ಥಾಪಿಸುವುದು ಬಹಳ ಸುಲಭದÀ ಕೆಲಸವಲ್ಲ ಎಂಬುದನ್ನು ಮನಗಂಡು ಬಾಬಾ ಸಾಹೇಬರು ಸಂವಿಧಾನದ ಮೂಲಕ ಹಾದಿಯನ್ನು ಸೃಷ್ಠಿ…

1 hour ago

ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕಲಬುರಗಿ; ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಉತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ 29 ನೇ ಪೀಠಾರೋಹಣ ಮಹೋತ್ಸವದಂದು ಶ್ರೀರಾಮ…

2 hours ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ಸುಶ್ರೂಷೆಯರ ದಿನಾಚರಣೆ

ಕಲಬುರಗಿ: ಸ್ಥಳೀಯ ಸುಪ್ರಸಿದ್ಧ ಕೆಬಿನ್ ವಿಶ್ವ ವಿದ್ಯಾಲಯದ ಕೆಬಿಎನ್ ಆಸ್ಪತ್ರೆಯ ನರ್ಸಿಂಗ ವಿಭಾಗದಿಂದ ಸೋಮವಾರ ಸುಶ್ರೂಷೆಯರ ದಿನಾಚರಣೆಯನ್ನು ಆಚರಿಸಲಾಯಿತು. ಈ…

2 hours ago

ಕಲಬುರಗಿ; ಎಂಟನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಕಲಬುರಗಿ; 2024-25ನೇ ಸಾಲಿಗೆ ಕಲಬುರಗಿ ಐವಾನ್ ಶಾಹಿಯಲ್ಲಿರುವ ಕಲಬುರಗಿ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯಲ್ಲಿ 8 ನೇ ತರಗತಿಗೆ ಪ್ರವೇಶ…

2 hours ago

ಎಲ್ಲಾ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೆಲಸ ಕೊಡಿ; ಸಿಇಓ ಗರಿಮಾ ಪನ್ವಾರ

ಸುರಪುರ: ಎರಡೂ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಕೂಲಿ ಕಾರ್ಮಿಕರಿಗೆ ನೀಡುವ ಮೂಲಕ ಆಯಾ ಗ್ರಾಮ…

2 hours ago

ನೃತ್ಯ ಸಂಗೀತ ಕಲಾ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರ

ಕಲಬುರಗಿ; ನಗರದ ಕಲಾ ಮಂಡಳದಲ್ಲಿ ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ ವತಿಯಿಂದ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ನಿವೃತ್ತ ಡಿ.ಎಸ್.ಪಿ…

2 hours ago