ವಚನ ಪ್ರಜ್ಞೆ ಇಲ್ಲದ ಜನ ಸಾಮಾನ್ಯರಿಗೆ ಬಸವಣ್ಣನವರ ಪ್ರತಿಮೆಗಳು ಈಗಲೂ ಬೇಕು

ಉಳ್ಳವರು ಶಿವಾಲಯವ ಮಾಡುವರು
ನಾನೇನ ಮಾಡುವೆ ಬಡವನಯ್ಯಾ
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರ ಹೊನ್ನ ಕಲಶವಯ್ಯಾ, ಕೂಡಲಸಂಗಮದೇವಯ್ಯಾ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.

ಗರ್ಭಗುಡಿಯಲ್ಲಿ ದೇವರೆಂಬ ಗೊಂಬೆಯನ್ನು ಕೂಡಿಸಿ ಆ ಮೂಲಕ ಜನ ಸಮುದಾಯವನ್ನು ಸುಲಿಗೆ ಮಾಡುತ್ತಿದ್ದ ಪಟ್ಟಭದ್ರರ ಬುಡಕ್ಕೆ ಬಸವಣ್ಣನವರು ಕೊಡಲಿ ಪೆಟ್ಟನ್ನು ನೀಡಿದರು. ನಮಗೆ ದೇವರು ಇಲ್ಲವಲ್ಲ ! ಎಂಬ ಕಳವಳದಲ್ಲಿ ಸಹಸ್ರಾರು ಜನ ದೇವಸ್ಥಾನದ ಪ್ರವೇಶವಿಲ್ಲದೆ ಮನದಲ್ಲಿಯೆ ಮರುಗುತ್ತಿದ್ದರು. ಬಹುಜನ ಸಮುದಾಯದ ನಡುವೆ ನಿಂತುಕೊಂಡ ಬಸವಣ್ಣನವರು ಏಕಕಾಲಕ್ಕೆ ಗುಡಿಯನ್ನೂ ಅದರ ಜೊತೆಗೆ ಅಲ್ಲಿ ವಾಸವಾಗಿರುವವನು ಎಂದು ಹೇಳಲಾದ ದೇವರನ್ನೂ ಜನರ ಮನಸ್ಸಿನಿಂದ ತೆಗೆದು ಹಾಕಿದರು. ಬಸವಣ್ಣನವರು ಗುಡಿಯ , ಅಲ್ಲಿರುವ ದೇವರ ವಿರುದ್ಧ ಒಂದೆ ಒಂದು ಪದವನ್ನು ಹೇಳದೆ ಅವೆರಡರ ಅಸ್ತಿತ್ವವನ್ನು ಅಲ್ಲಗಳೆದು ಬಿಟ್ಟರು. ಗುಡಿಗಳ ಸಮೀಪ ಹೋಗದೆಯೂ ಆ ಗುಡಿಯನ್ನು ಬಸವಣ್ಣನವರು ಗುಡಿಸಿ ಗುಂಡಾಂತರ ಮಾಡಿಬಿಟ್ಟರು. ಗುಡಿಯೇ ಹೋದ ಮೇಲೆ ದೇವರ ಗತಿ ಅಧೋಗತಿಯಾಯಿತು !

ವಾಸ್ತವವಾಗಿ ಒಂದಿಲ್ಲ ಒಂದು ದಿನ ಸ್ಥಾವರಗಳಿಗೆ ಅಳಿವು ಇದ್ದೆ ಇದೆ. ಸದಾ ಹೊಸ ಹುಟ್ಟು ಪಡೆದು ಓಡಾಡುವ ಜಂಗಮಕ್ಕೆ ಎಂದೂ ಅಳಿವಿಲ್ಲ ಎಂಬುದು ಸತ್ಯ. ಇದನ್ನು ಶರಣರು ಸರಿಯಾಗಿ ಗ್ರಹಿಸಿದ್ದರು. ಹನ್ನೆರಡನೆಯ ಶತಮಾನದವರೆಗೆ ಬಹು ಜನರು ದೇಹದ ಬಗೆಗೆ ತಾತ್ಸಾರ ಹೊಂದಿದವರಾಗಿದ್ದರು. ಮನುಷ್ಯ ಜನ್ಮ, ನಾನಾ ಜನನಗಳ ಮೂಲಕ ಹಾದು ಬಂದ ಒಂದು ಜನ್ಮ ಎಂಬ ಪರಿಕಲ್ಪನೆಯನ್ನು ಒಳಗೊಂಡಿತ್ತು. ಈ ದೇಹ ಮುಕ್ತಿಯನ್ನು ಹೊಂದಬೇಕಾದರೆ, ಸ್ವರ್ಗಕ್ಕೆ ಹೋಗಬೇಕಾದರೆ ಗುಡಿಗಳಿಗೆ ಹೋಗುವುದು ಅಲ್ಲಿರುವ ದೇವರಿಗೆ ಕಾಣಿಕೆ ಅರ್ಪಿಸುವುದು ಸಾಮಾನ್ಯವಾಗಿತ್ತು. ಮುಂದೆ ಕಾಣಬಹುದಾದ ಮುಕ್ತಿ , ಸ್ವರ್ಗಗಳನ್ನು ಒಳ್ಳೆಯ ವಿಚಾರ, ಆಚಾರಗಳ ಮೂಲಕ ಇಲ್ಲಿಯೆ ಕಂಡುಕೊಳ್ಳಬಹುದೆಂಬ ಸತ್ಯವನ್ನು ಬಸವಣ್ಣ ‘ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ , ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು’ ಎಂದು ಹೇಳುವ ಮೂಲಕ ಭ್ರಾಮಕ ಕನಸುಗಳನ್ನು ಒಡೆದು ಹಾಕಿದರು.

ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣದವನು,
ಸಂಬೋಳಿ ಸಂಬೋಳಿ ಎನುತ್ತ ಇಂಬಿನಲ್ಲಿದ್ದೇನೆ
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು

ಗರ್ಭಗುಡಿಯಲ್ಲಿ ದೇವರ ಗುತ್ತಿಗೆ ಹಿಡಿದವರ ವಿರುದ್ಧ ಬಸವಣ್ಣ ಜನ ಸಾಮಾನ್ಯರನ್ನು ಹುರಿಗೊಳಿಸದೆ ಸಾಮಾನ್ಯರೊಂದಿಗೆ ಸಾಮಾನ್ಯನಾಗಿ ನಾನು ಇದ್ದೇನೆ ಎಂದು ತಿಳಿಸಿದರು. ಬಹು ಸೂಕ್ಷ್ಮವಾಗಿ ಅಂಥಹ ಪಟ್ಟಭದ್ರರ ವಿರುದ್ಧ ಸಂಬೋಳಿ ಸಂಬೋಳಿ ಎಂಬ ಪದವನ್ನು ಬಳಸಿ ಪ್ರತಿಭಟಿಸಿದರು. ನಿಮ್ಮನ್ನು ನಿತ್ಯ, ಕ್ಷಣ ಕ್ಷಣವೂ ಕಾಯಕದಲ್ಲಿ ನೆನೆಸಿಯೂ ಅನಾಮಿಕನಾಗಿ ಇದ್ದೇನೆ ಎನ್ನುವ ಮೂಲಕ ಆ ದೇವರಿಗೆ , ದೇವರ ಗುತ್ತಿಗೆ ಹಿಡಿದವರಿಗೆ ತಿಳಿಸಿದರು.

ಒಟ್ಟಿನಲ್ಲಿ ಬಸವಣ್ಣ ಸ್ಥಾವರದ ವಿರೋಧಿಯಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಯಾರದೆ ವಿಚಾರ ಕೂಡ ಸ್ಥಾವರವಾದರೆ ಅವೂ ಸಹ ಕಾಲನ ತೆಕ್ಕೆಯಲ್ಲಿ ಜೀವ ಕಳೆದುಕೊಳ್ಳುತ್ತವೆ. ಆದರೆ ನಾವುಗಳು ಇಂದು ಅದೆ ಬಸವಣ್ಣನವರ ಪ್ರತಿಮೆಗಳನ್ನು ಸ್ಥಾಪಿಸುವುದು ಎಷ್ಟು ಸರಿ ? ಎಂಬ ಜಿಜ್ಞಾಸೆಗೆ ತೊಡಗಿದಾಗ ತತಕ್ಷಣ ಸರಿಯಲ್ಲ ಎಂಬ ಉತ್ತರವೇ ನಮ್ಮೆಲ್ಲರಲ್ಲಿ ಬರುತ್ತದೆ.

ಆದರೆ ಬಸವಣ್ಣನವರ ಪ್ರತಿಮೆಗಳು ಇಲ್ಲದೆ ಹೋಗಿದ್ದರೆ ಶರಣರ ಚಳುವಳಿಯ ವಿಚಾರಗಳನ್ನು ಇಷ್ಟು ತೀವ್ರ ಗತಿಯಲ್ಲಿ ಜನ ಸಾಮಾನ್ಯನಿಗೆ ತಲುಪಿಸಲು ಆಗುತ್ತಿತ್ತೆ ? ಎಂಬ ಸಂಗತಿಗಳತ್ತಲೂ ನಾವು ಗಮನ ಹರಿಸಬೇಕಿದೆ. ತೀರಾ ಇತ್ತೀಚೆಗೆ ಅಫಘಾನಿಸ್ಥಾನದಲ್ಲಿ ಬುದ್ಧನ ಬಹುದೊಡ್ಡ ಪ್ರತಿಮೆಯನ್ನು ಉರುಳಿಸಿದರು. ಲೇನಿನ್ , ಕಾರ್ಲಮಾಕ್ರ್ಸ ಪ್ರತಿಮೆಗಳು ನಮ್ಮ ಕಣ್ಣ ಮುಂದೆಯೇ ಉರುಳಿ ಹೋಗಿವೆ. ಇದೆಲ್ಲ ಸತ್ಯ.

ಬಸವಣ್ಣ ಇತ್ಯಾದಿ ಶರಣರು ಪುರಾಣದ ವಸ್ತುವಾಗಿ ಸಮಾಜದಲ್ಲಿ ಬಿಂಬಿತಗೊಂಡಿದ್ದರು. ಬಸವಣ್ಣ ಹುಟ್ಟಿದ್ದೆ ನಂದಿಯ ವ್ರತಗಳಿಂದ ಎಂಬ ಪೌರಾಣಿಕ ಕಲ್ಪನೆ ಸಮಾಜದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಅಷ್ಟೇಕೆ ? ಬಸವಣ್ಣನೆಂದರೆ ನಾಲ್ಕು ಕಾಲು, ಎರಡು ಕೊಂಬು , ಒಂದು ಬಾಲ ಇರುವ ದನವೇ ಬಸವಣ್ಣ ಎಂದು ಜನ ಸಾಮಾನ್ಯರನ್ನು ನಂಬಿಸಿಕೊಂಡು ಬಂದಿದ್ದರು. ಇಂಥ ಸಂದರ್ಭದಲ್ಲಿ ಬಸವಣ್ಣನವರ ಕಾಲ್ಪನಿಕ ಭಾವಚಿತ್ರ ಬರೆಯಿಸಿ, ಪ್ರಸಾರ ಮಾಡದೆ ಹೋಗಿದ್ದರೆ ನಮ್ಮ ಇಂದಿನ ಸಮಾಜ ಜಾಗ್ರವಾಗಲು ಸಾಧ್ಯವಿತ್ತೆ ? ಎಂಬ ಪ್ರಶ್ನೆಯನ್ನು ನಮ್ಮಷ್ಟಕ್ಕೆ ನಾವೇ ಹಾಕಿಕೊಳ್ಳಬೇಕು !

ಯಾರದೆ ಪ್ರತಿಮೆಗಳು ಗರ್ಭಗುಡಿಯಲ್ಲಿ ಕುಳಿತು ಹೋದರೆ ಅವು ಕೊಳೆತು ಹೋಗುವ ಅಪಾಯ ಇದ್ದೆ ಇದೆ. ಆದರೆ ಪ್ರೇರಣೆಗಾಗಿ ಇತಿಹಾಸದ ನೆನಪಿಗಾಗಿ ನಿರ್ಮಿಸಿದರೆ ತಪ್ಪೇನು ಆಗುವುದಿಲ್ಲ. ಕಾಗೆ ವಿಷ್ಟವಿಸುವ ಹೊನ್ನ ಕಳಸವಾಗಲಾರೆ ಎಂಬ ಬಸವಣ್ಣನವರ ಪ್ರತಿಮೆಯನ್ನೆ ಆ ಮಾತಿಗೆ ಗುರಿಪಡಿಸಲು ಬಯಸುವುದಿಲ್ಲ. ಆದರೆ ಆ ಮೂಲಕ ಜನ ಮಾನಸವನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಪ್ರತಿಮೆ ಒಂದು ರೀತಿಯ ಪ್ರಭಾವ ಬೀರಿದಾಗ ಆನಂತರ ವಚನಗಳ ಮೂಲಕ ನಿಜವಾದ ಬಸವಣ್ಣನವರನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತದೆ. ಬಸವಣ್ಣನವರ ಪ್ರತಿಮೆ ಶರಣರ ಸಾಹಿತ್ಯದ ಸಾಗರಕ್ಕೆ ಕೇವಲ ಎಂಟ್ರಿ ಪಾಸ್ ಎಂಬುದನ್ನು ನಾವ್ಯಾರು ಮರೆಯಬಾರದು.

ಎಲ್ಲಾ ದೇವರ ಮೂರ್ತಿಗಳಂತೆ ಬಸವಣ್ಣನವರ ಪ್ರತಿಮೆಗೂ ಕಾಯಿ, ಕರ್ಪೂರ, ನೈವೇದ್ಯ , ಮಂತ್ರ, ತಂತ್ರ ಶುರುವಾದರೆ ಮತ್ತೊಬ್ಬ ಪುರೋಹಿತ ಹುಟ್ಟಿಕೊಳ್ಳುತ್ತಾನೆ. ಬಸವಣ್ಣವರ ಪ್ರತಿಮೆ ನಮ್ಮ ಒಳಗಿನ ಗಂಟೆಯನ್ನು ಬಡಿಯಬೇಕೆ ಹೊರತು, ಹೊರಗಿನ ಗಂಟೆಯನ್ನಲ್ಲ ಎಂಬುದನು ನಾವು ಮರೆಯಬಾರದು. ಬಸವಣ್ಣವರ ಆಶಯಗಳ ಜಾರಿಗೆ ಮೂರ್ತಿ ಪೂಜೆ ಅನಾವಶ್ಯಕ ಎಂಬುದಲ್ಲಿ ಎರಡು ಮಾತಿಲ್ಲ. ಬಸವಣ್ಣನೆಂದರೆ ಮತ್ತೆ ತಿರುಗಿ ಮುರಿಗಿ ಎತ್ತುಗಳನ್ನೆ ತೋರಿಸಿ, ಲೂಟಿ ಖೋರರ ಗ್ಯಾಂಗಿನ ಹುನ್ನಾರಗಳನ್ನು ತಿಳಿಸಲು ಪ್ರತಿಮೆಗಳು ಈಗ ಅನಿವಾರ್ಯವಾಗಿದೆ.

ವಚನ ಪ್ರಜ್ಞೆ ಬಂದವರಿಗೆ ಪ್ರತಿಮೆಗಳು ಅವಶ್ಯಕವಲ್ಲದಿರಬಹುದು, ವಚನ ಸಮೀಪ ಬರದೆ ವಂಚಕ ಗುಂಪಿನಲ್ಲಿರುವವರಿಗೆ ಅದು ಈಗಲೂ ಅವಶ್ಯವಿದೆ.

emedialine

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420