ಕಲಬುರಗಿ: ಗೋವುಶಾಲೆಯಿಂದ 21 ಗೋವು ನಾಪತ್ತೆ ಆರೋಪ

ಕಲಬುರಗಿ: ರಾಜಕೀಯ ಪ್ರೇರಿತ ದಮನಕಾರಿ ಶಕ್ತಿಗಳಿಂದಾಗಿ ಜಿಲ್ಲೆಯ ರೈತರು, ಅಲ್ಪಸಂಖ್ಯಾತರು ಮಹಿಳೆಯರು ದುರ್ಬಲರನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಮಾಪಿಯಾಗಳಿಗೆ ಮಟ್ಟ ಹಾಕಬೇಕೆಂದು ಒತ್ತಾಯಿಸಿ ಪೆÇಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲಾಗುವುದೆಂದು ದಲಿತ ಸೇನೆಯ ರಾಜ್ಯಾಧ್ಯಕ್ಷÀ ಹನುಮಂತ ಯಳಸಂಗಿ ತಿಳಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ¥sುಡ್ ಮಾಪಿಯಾ, ಸ್ಯಾಂಡ್ ಮಾಪಿಯಾ, ಲ್ಯಾಂಡ್ ಮಾಪಿಯಾ ಇವುಗಳ ಜೊತೆ ಜೊತೆಗೆ ಸದ್ದಿಲ್ಲದೆ ಗೋ ಮಾಪಿಯಾ ದಂಧೆ ವ್ಯಾಪಕವಾಗಿ ಜಾಲಬೀಸುತ್ತಿದೆ, ಅದಕ್ಕೆ ಕಡಿವಾಣ ಹಾಕಬೇಕಿದ್ದ ಪೆÇಲೀಸ್ ಇಲಾಖೆ ಪರೋಕ್ಷವಾಗಿ ಸಹಕರಿಸುತ್ತಿದೆ ಎಂದ ಆರೋಪಿಸಿದ ಯಳಸಂಗಿ ಅವರು, ಹಿಂದಿನ ಬಿಜೆಪಿ ಸರಕಾರದ ಆಡಳಿತ ಸಂದರ್ಭದಲ್ಲಿ ಗೋ ರಕ್ಷಣೆಯ ನೆಪದಲ್ಲಿ ಜಿಲ್ಲೆಯಲ್ಲಿ ಜಪ್ತಿಮಾಡಿರುವ ಸಾವಿರಾರು ಹಸು-ಕರುಗಳು ನಾಪತ್ತೆಯಾಗಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಜಪ್ತಿಮಾಡಿರುವ ದನಕರುಗಳು ನಾಪತ್ತೆಯ ಹಿಂದೆ ಜವಾಬ್ದಾರಿ ಯಿಂದ ನಡೆದುಕೊಂಡು ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಬೇಕಿದ್ದ ಪೆÇಲೀಸ್ ಇಲಾಖೆ, ಗೋ ಶಾಲೆಯ ಮುಖ್ಯಸ್ಥರು, ಪಶು ವೈದ್ಯರು ಮತ್ತು ಕಸಾಯಿ ಖಾನೆಯವರಿದ್ದಾರೆ. ಆದ್ದರಿಂದಲೇ ವಿದೇಶಕ್ಕೆ ಗೋ ಮಾಂಸ ರಪ್ತಿನಲ್ಲಿ ಭಾರತದ ನಂ.1 ಆಗಿದೆ ಎಂದು ಆರೋಪಿಸಿದರು.

2022ರಲ್ಲಿ ಗುವಿವಿ ಠಾಣೆಯ ಇನ್ಸ್‍ಪೆಕ್ಟರ್ ಅವರು ರೈತನಾದ ಮಹ್ಮದ ಜಾವೀದ್ ಅವರ ತೋಟದಲ್ಲಿದ್ದ 26 ಹಸು ಮತ್ತು ಕರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ, ಆದರೆ ನ್ಯಾಯಾಲಯದ ಆದೇಶ ನೀಡಿದರು ಇಲ್ಲಿಯವರೆಗೆ ದನಕರುಗಳನ್ನು ಬಿಡುಗಡೆ ಮಾಡಿಲ್ಲ, ಜೊತೆಗೆ ಜಪ್ತಿಮಾಡಿರುವ ದನಕರುಗಳನ್ನು ರೇವಣಸಿದ್ದೇಶ್ವರ ಗೋ ಶಾಲೆಯಲ್ಲಿಡಲಾಗಿದೆ ಎಂದು ಪೆÇಲೀಸರು ಪತ್ರಬರೆದಿದ್ದರು. ಆದರೆ ಬಿಡುಗಡೆ ಆದೇಶ ಪತ್ರ ತಗೆದುಕೊಂಡು ಗೋ ಶಾಲೆಗೆ ಸಂಪರ್ಕಿಸಿದರೆ ಕೇವಲ 5 ದನಗಳು ಮಾತ್ರ ಜೀವಂತವಿವೆ ಎಂದು ಗೋಶಾಲೆಯವರು ಹೇಳುತ್ತಾರೆ, ಹಾಗಾದರೆ ಉಳಿದ 21 ಹಸುಗಳು ಎಲ್ಲಿಗೆ ಹೋದವು ಎಂದು ಕೇಳಿದರೆ ಅಧಿಕಾರಿಗಳಲ್ಲಿ ಉತ್ತರವಿಲ್ಲ.

ಈ ಎಲ್ಲಾ ಮಾಪಿಯಾ ಮಾಡುವಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಮತ್ತು ಗೋ ಶಾಲೆಯವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ 26ರಂದು ಬೆಳಿಗ್ಗೆ 11 ಗಂಟೆಗೆ ಮುತ್ತಿಗೆ ಹಾಕಲಾಗುವುದೆಂದು ತಿಳಿಸಿದರು.

ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ, ಶಿವಕುಮಾರ ಗೋಳಾ, ಮಹ್ಮದ್ ಅಶ್ರಫ್, ಶ್ರೀಕಾಂತ ರೆಡ್ಡಿ, ಗುರು ಎಸ್. ಮಾಳಗೆ, ಮಲ್ಲೇಶಿ ಯಾದವ್, ಪಂಚಶೀಲ ಚಾಂಬಾಳ ಇದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

3 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

21 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

21 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420