ಕಲಬುರಗಿ; ರೇವಣಸಿದ್ದಪ್ಪ ಜೀವಣಗಿ ಅವರು ಸುಮಾರು 40 ವರ್ಷಗಳ ಕಾಲ ಸೈನಿಕನಾಗಿ ದೇಶ ಸೇವೆಗಾಗಿ ಮಾಡಿ ಬಂದು ಸುಮಾರು 15 ವರ್ಷಗಳಿಂದ ಪ್ರಗತಿ ಕಾಲೋನಿಯ ವಚನೋತ್ಸವ ಸಮಿತಿಯ ಸಂಚಾಲಕರಾಗಿ ಪ್ರತಿ ವಾರಕ್ಕೊಮ್ಮೆ ಮನೆ ಮನೆಗೆ ಹೋಗಿ ವಚನೋತ್ಸವ ಕಾರ್ಯಕ್ರಮ ಮಾಡುವ ಮೂಲಕ ವಚನಗಳು ಮತ್ತು ವಚನ ಸಾಹಿತ್ಯ ಉಳಿಸಿ ಬೆಳೆಸುವ ಕಾರ್ಯ ಶ್ಲಾಘನೀಯವಾದದು.
ಜುಲೈ 02ರಂದು ವಚನ ಪಿತಾಮಹಾ ಪ.ಗು ಹಳಕಟ್ಟಿ ಅವರ ಜಯಂತೋತ್ಸವ ನಿಮಿತ್ಯ ಹಳಕಟ್ಟಿಯವರು ತಮ್ಮ ಜೀವನವನ್ನೆ ಹರಿದು ಹಂಚಿ ವಚನಗಳು ಸಾಹಿತ್ಯವನ್ನು ಸಂರಕ್ಷಿಸಿ, ಮರು ಮುದ್ರಿಸಿ ಸಂರಕ್ಷಿಸುವಲ್ಲಿ ಅವರು ಪಟ್ಟಿದ ಕಷ್ಟ ಅಷ್ಟಿಷ್ಟಲ್ಲ ಅಂತಹ ವಚನ ಸಾಹಿತ್ಯವನ್ನು ಪ್ರಚಾರ ಮಾಡುವ ಕಾರ್ಯ ಮಾಡುತ್ತಿರುವ ರೇವಣಸಿದ್ದಪ್ಪ ಜೀವಣಗಿ ಅವರಿಗೆ ಅವರ ಹುಟ್ಟುಹಬ್ಬದ ಕಾರಣ ಡಾ. ಪ.ಗು ಹಳಕಟ್ಟಿ ಅವರ ಭಾವಚಿತ್ರವನ್ನೆ ಉಡುಗೋರೆಯಾಗಿ ಕೊಡುವ ಮೂಲಕ ಹಳಕಟ್ಟಿಯವರ ಜಯಂತೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ಮಲ್ಲಿಕಾರ್ಜುನ ತರುಣ ಸಂಘದ ಅಧ್ಯಕ್ಷ ಮಾತನಾಡಿದರು.
ಮಲ್ಲಿಕಾರ್ಜುನ ತರುಣ ಸಂಘದ ಉಪಾಧ್ಯಕ್ಷರಾದ ವಿರೇಶ ನಾಗಶೆಟ್ಟಿ ಹಾಗು ಪದಾಧಿಕಾರಿಗಳಾದ ಅಮಿತ ಜೀವಣಗಿ, ಶಶಿಧರ ಪ್ಯಾಟಿ, ಸಂಜುಕುಮಾರ ತಂಬಾಕೆ, ಸೋನು ಜೀವಣಗಿ ಹಾಗು ಇತರರು ಉಪಸ್ಥಿತರಿದ್ದರು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…