ಕಲಬುರಗಿ: ವಿದ್ಯಾರ್ಥಿಗಳು ಕೇಳುವಿಕೆ, ನೋಡುವಿಕೆ ಮತ್ತು ಅನುಭವಕ್ಕೆ ತಂದುಕೊಳ್ಳುವ ಆಸಕ್ತಿದಾಯಕ ಹಾಗೂ ಪ್ರೇರಣಾತ್ಮಕ ಕಲಿಕಾ ಪದ್ದತಿಯಿಂದ ವಿವಿಧ ವಿಷಯಗಳನ್ನು ಸುಲಭವಾಗಿ ಅರಿತುಕೊಂಡು ಪರೀಕೆಯಲ್ಲಿ ಹೆಚ್ಚು ಅಂಕಗಳನ್ನು ಸಾಧಿಸಬಹುದೆಂದು ಬೆಂಗಳೂರಿನ ಮನೋತಜ್ಞ ಹಾಗೂ ಶಿಕ್ಷಣತಜ್ಞ ಭುಜಬಲಿ ಬೋಗಾರ ಹೇಳಿದರು.
ನಗರದ ಎಸ್.ಬಿ.ಆರ್ ಶಾಲೆಯಲ್ಲಿ ಇಂದು ನಡೆದ ಮೌನಯೋಗಿ ಫೌಂಡೇಶನ್ ಹಾಗೂ ಟ್ರಾನ್ಸ್ಫಾರ್ಮೊ ಇನ್ಕಾರ್ಪ್ ಸಹಭಾಗಿತ್ವದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಯಶಸ್ಸಿನ ಮೂಲ ಮಂತ್ರಗಳು ಎಂಬ ವಿಷಯದ ಮೇಲೆ ತರಬೇತಿ ಕಾರ್ಯಗಾರವನ್ನು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದರು. ಭುಜಬಲಿಯವರು ವಿದ್ಯಾರ್ಥಿಗಳನ್ನು ಉದ್ದೆಶಿಸಿ: ತಮ್ಮ ಶೈಕ್ಷಣಿಕ ಜೀವನದಲ್ಲಿ ಯಶಸ್ಸನ್ನುಗಳಿಸಲು ಏನು ಮಾಡಬೇಕು. ಅದಕ್ಕಿರುವ ಮಾರ್ಗಗಳು ಯಾವುವು ಎಂಬ ಬಗ್ಗೆ ಅನೇಕ ಹೊಸ ಅನ್ವೇಷಣೆಗಳು ನಡೆಯುತ್ತಲೇ ಇವೆ. ಅವುಗಳಲ್ಲಿ ಒಂದು ಮೈಂಡ್ ಮ್ಯಾಪಿಂಗ್ ಮಹತ್ವದ ವಿಧಾನವಾಗಿದೆ ಎಂದು ಹೇಳಿದರು.
ಗಂಟೆಗಟ್ಟಲೆ ಮೊಬೈಲ್ ಬಳಸಿದ ನಂತರ ಓದುವ ಸಮಯ ಹಾಳುಮಾಡಿದೆ ಎಂದು ಪಶ್ಚಾತಾಪ -ತಪ್ಪಿನ ಅರಿವು ಉಂಟಾಗಿ ಮತ್ತೆ ಆ ಭಾವನೆಯಿಂದ ಹೊರಬರಲು ಮರಳಿ ಮೊಬೈಲ್-ಇಂಟರನೆಟ್ ಬಳಕೆಯ ವಿಷವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ. ಅದಕ್ಕಾಗಿ ದೈಹಿಕ ಚಟುವಟಿಕೆಗಳಾದ ವಾಕಿಂಗ್, ಪ್ರಾಣಾಯಾಮ, ಕೆಲಸದ ಬದಲಾವಾಣೆ, ಇನ್ನಿತರ ಹಲವು ತಂತ್ರಗಳನ್ನು ಅನುಸರಿಸಿದರೆ ಸಕಾರಾತ್ಮಕ ಮತ್ತು ಪರಿಣಾಮಕಾರಿ ಪರಿವರ್ತನೆ ಕಾಣಬಹುದು ಎಂದು ಮನೋತಜ್ಞ ಭುಜಬಲಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿಕೊಟ್ಟರು.
ಈ ತರಬೇತಿ ಕಾರ್ಯಗಾರವು ಪ್ರಾಂಶುಪಾಲರಾದ ಶ್ರೀ ಎನ್.ಎಸ್ ದೇವರಕಲ್ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಮೌನಯೋಗಿ ಫೌಂಡೇಶನ್ನ ಶ್ರಾವಣಯೋಗಿ ಹಿರೇಮಠ, ಎಸ್.ಬಿ.ಆರ್ ಶಾಲೆಯ ಶಿಕ್ಷಕ ವರ್ಗ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ರಾಯಚೂರು; ಕಲ್ಯಾಣ ಕರ್ನಾಟಕಕ್ಕೆ 371ನೇ ಜೇ ಕಲಂ ಜಾರಿಗೆಗೆ ದಶಕಗಳಿಂದ ಹೋರಾಟ ನಡೆಸಿದ ಎಳು ಜಿಲ್ಲೆಗಳ ಸಹಸ್ರಾರು ಹೋರಾಟಗಾರರ ಪರವಾಗಿ…
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…