ಬಿಸಿ ಬಿಸಿ ಸುದ್ದಿ

ಅಪ್ಪನ ಕೆರೆಗೆ ಅಪಾಯಕ್ಕೆ ದೂಡಿ ಅವೈಜ್ಞಾನಿಕ ಕಾಮಗಾರಿ: ಸದನದಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ: ಕೆರೆ ಸೌಂದರ್ಯೀಕರಣ ಹೆಸರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಎಶ್‍ಎಫ್‍ಸಿ ಅನುದಾನದಲ್ಲಿ 10 ಕೋಟಿ ರು ವೆಚ್ಚದಲ್ಲಿ ಇಲ್ಲಿನ ಶರಣಬಸವೇಶ್ವರ ಕೆರ ಕಾಮಗಾರಿ ಕೈಗೆತ್ತಿಕೊಂಡಿರೋದು ಇಡೀ ಕೆರೆಯನ್ನೇ ಅಪಾಯಕ್ಕೆ ತಳ್ಳಿದೆ, ತಕ್ಷಣ ಈ ಅವೈe್ಞÁನಿಕ ಕಾಮಗಾರಿ ನಿಲ್ಲಬೇಕು, ಕೆರೆ ಸಂರಕ್ಷಣೆಯಾಗಬೇಕು, ಅಲ್ಲಿನ ಜಲಮೂಲದ ಸಂರಕ್ಷಣೆಯಾಗಲಿ, ಜಲಚರಗಳಿಗೆ ಅಪಾಯವಾಗದಂತೆ ಕ್ರಮಗಳು ಕೈಗೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಂಪ್ರಭು ಪಾಟೀಲರು ಇಂದು ಸದನದಲ್ಲಿ ಸರ್ಕಾದ ಗಮನ ಸೆಳೆದರು.

ಗಮನಸೆಳೆಯುವ ಗೊತ್ತುವಳಿ ಮಂಡಿಸಿ ಈ ವಿಷಯವನ್ನು ಸದನದಲ್ಲಿ ಗಂಭೀರವಾಗಿ ಪ್ರಸ್ತಾಪಿಸಿದ ಅಲ್ಲಂಪ್ರಭು ಪಾಟೀಲರು ಕೆರೆಯ ಬದುವಿನ ಮೆಲೆಯೇ ಕಾಮಗಾರಿ ಮಾಡಲಾಗುತ್ತಿದೆ. ಕಾಂಕ್ರೀಟ್ ರಚನೆ ಬದುವಿನ ಮೇಲೆ ಬಂದಲ್ಲಿ ಕೆರೆಯ ಬದುವು ಅಶಕ್ತವಾಗಿ ಒಡೆಯುವ ಅಪಾಯಗಳಿವೆ. ಇದಲ್ಲದೆ ಕೆರೆಯ ನೀರು ಸಂಗ್ರಹಕ್ಕೂ ಈ ಕಾಮಗಾರಿ ಅಪಾಯ ತಂದೊಡ್ಡಿದೆ ಎಂದು ಗಮನ ಸೆಳೆದರು.

ಕಲಬುರಗಿ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಕೆರೆ (ಅಪ್ಪನ ಕೆರೆ) ಅತ್ಯಂತ ಪುರಾತನ ಕೆರೆಯಾಗಿದೆ, ಈ ಕೆರೆಯಿಂದಲೇ ಕಲಬುರಗ ಮಹಾನಗರದ ಅಂತರ್ಜಲ ರಕ್ಷಣೆ ಯಾಗುತ್ತಿದೆ. 15 ವರ್ಷದ ಹಿಂದೆ ಕೆರೆಯ ಹೂಳನ್ನೆತ್ತಿ ಸ್ವಚ್ಚ ಮಾಡಿ ಸೌಂದರ್ಯೀಕರಣ ಮಾಡಲಾಗಿತ್ತು, ಹಾಗೂ ಕೆರೆಯಲ್ಲಿ ನೀರು ನಿಲ್ಲುವ ಸಾಮಥ್ರ್ಯವನ್ನೂ ಹೆಚ್ಚಿಸಲಾಗತ್ತು. ಅತ್ಯಂತ ವೈe್ಞÁನಿಕವಾಗಿ ಈ ಕೆಲಸವಾಗಿತ್ತು. ಇದರಿಂದಾಗಿ ಈ ಕೆರೆ ಅಂತರ್ಜಲ ರಕ್ಷಣೆಯ ಜೊತೆಗೇ ಮಕ್ಕಳು, ಮಹಿಳೆಯ ಪ್ರವಾಸಿ ತಾಣವೂ ಆಗಿತ್ತು. ಇಡೀ ರಾಜ್ಯದ ಜನ ಬಂದು ನೋಡುತ್ತಿದ್ದರು. ಈಗ ಆತುರದಲ್ಲಿ, ಹಿಂದೆ ಮುಂದೆ ಯೋಚಿಸದೆ, ಪರಿಸರ ಅದ್ಯಯನ ನಡೆಸದೆ, ಕೆರೆ ಒತ್ತುವರಿ ಮಾಡುವಂತೆಯೇ ಕಾಮಗಾರಿ ಮಾಡಲಾಗುತ್ತಿರೋದು ವಿಷಾದದ ಸಂಗತಿ ಎಂದರು.

ಯಾವುದೇ ಜಲಮೂಲಗಳಲ್ಲಿ ನೀರು ನಿಲ್ಲುವ ಪ್ರದೇಶಕ್ಕೆ ತೊಂದರೆಯಾಗದಂತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಆದರೆ ದರೆ ಅಪ್ಪನ ಕರೆಯಲ್ಲಿ ಈ ರೀತಿ ಮಾಡಲ್ಲ. ಸಿಮೆಂಟ್ ಕಟ್ಟೆಗಳನ್ನು ಕರೆಯ 20 ಅಡಿ ಜಾಗವನ್ನೇ ಅತಿಕ್ರಮಿಸಿವೆ. ಹೀಗಾಗಿ ಕೆರೆಯ ನೀರಿನ ಸಂಗ್ರಹಕ್ಕೂ ಕೊಕ್ಕೆ ಬಿದ್ದಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿ ಕೆರೆಯನ್ನೇ ನುಂಗುತ್ತಿದೆ. ಒಟ್ಟಾರೆಯಾಗಿ ಸಾವಿರಾರು ಕೊಳವೆ ಬಾವಿಗಳು, ತೆರೆದ ಬಾವಿಗಳಿಗೆ ಕಲಬುರಗಿ ನಗರದಲ್ಲಿರುವ ಏಕೈಕ ಜಲಮೂಲ ಹಾಳುಗೆಡವುವ ಕೆಲಸವಾಗಿದೆ ಎಂದು ಆತಂಕ ಹೊರಹಾಕಿದರು.

ಹಿಂದಿನ ಜಿಲ್ಲಾಧಿಕಾರಿಗಳು ಈ ಕೆರೆಯ ಕಾಮಗಾರಿಯಲ್ಲಿ ಕಾಯ್ದೆ, ಕಾನೂನು ಉಲ್ಲಂಘನೆಯಾಗಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರದ ಅನುಮತಿ ಸಹ ಪಡದಲ್ಲ. ಸಿಮೆಂಟ್ ಕಟ್ಟಡ ಯಾವುದೇ ಕಾರಣಕ್ಕೂ ಕೆರೆಯ ಜಾಗ ಕಬಳಿಸಬಾರದು ಎಂಬ ಷರತ್ತಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಅನೇಕ ಕಾನೂನು ಕಮಗಳನ್ನು ಪ್ರಸ್ತಾಪಿಸಿ ಕೆರೆ ಕಾಮಗಾರಿ ನಿಲಿಸಿದ್ದಾರೆ.

ಮೊದಲೇ ಕಲಬುರಗಿಯಲ್ಲಿ ನಿಜಾಂ ಕಾಲದಲ್ಲಿದ್ದ 7 ಕೆರೆಗಳು ಕಬಳಿಕೆಯಾಗಿ ಅವುಗಳ ಪೈಕಿ ಅಪ್ಪನ ಕೆರೆಯೊಂದೇ ಉಳಿದರೋವಾಗ ಇದನ್ನೂ ನಾವು ಉಳಸಿಕೊಳ್ಳದೆ ಹಾಳು ಮಾಡುತ್ತಿರೋದ ಸರ್ವಥಾ ಸರಿಯಲ್ಲ. ಹಿಂದಿನ ಬಿಜೆಪಿ ಸರ್ಕಾರ, ಸ್ಥಳೀಯ ಅಂದಿನ ಶಾಸಕg ನೇತೃತ್ವದಲ್ಲಿ ಕೈಗೊಂಡ ಅವೈe್ಞÁನಿಕ ಕಾಮಗಾರಿ ಕೆರೆಯನ್ನೇ ಸಂಪೂರ್ಣ ಹಾಳು ಗೆಡವಲು ಹೊರಟಿದೆ. ಇದನ್ನು ತಡೆಯಲೇಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರೂ ಮೊನ್ನೆ ನಡೆಸಿದ ಸಭೆಯಲ್ಲಿ ಕೆರೆ ಕಾಮಗಾರಿ ಅವೈe್ಞÁನಿಕವಾಗಿದೆ, ಪರಿಸರದ ಮೇಲಾಗಿರುವ ಹಾನಿ, ಪರಿಣಾಮಗಳ ಅಧ್ಯಯನಕ್ಕೆ ಸೂಚಿಸಿದ್ದಾರೆ. ಕೆರೆಯಲ್ಲಿ ಚಾಚಿಕೊಂಡಿರುವ 11 ಕ್ಕೂ ಹೆಚ್ಚಿನ ಸಿಮೆಂಟ್ ಕಟ್ಟೆಗಳು ಒಡೆದು ಹಾಕಬೇಕು. ಪರಿಸರ ಅಧ್ಯಯನ ವರದಿ ಬರುವವರೆಗೂ ಕಾಮಗಾರಿ ಮುಂದುವರಿಸಬಾರದು ಎಂದು ಆಗ್ರಹಿಸಿದರು.

ಶಾಸಕ ಅಲ್ಲಂಪ್ರಭು ಪಾಟೀಲರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಸಣ್ಣ ನೀರಾವರಿ ಇಲಾಖೆಯ ತಾಂತ್ರಿಕ ಸಮೀತಿ ಷರತ್ತುಗಳಂತೆಯೇ ಕಾಮಗಾರಿ ಕೈಗೆತ್ತಕೊಳ್ಳಲಾಗಿದೆ. ಕೆರೆ ಅಭವೃದ್ಧಿ ಕಾಮಗಾರಿಯಲ್ಲಿ ಅದಾಗಲೇ 11 ಕಟ್ಟೆ ನಿರ್ಮಿಸಲಾಗಿದೆ. ಈಚಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧ್ಯಕ್ಷತೆಯಲ್ಲಿನ ಪಾಲಿಕೆ ಅಧಕಾರಿಗಳ ಸಭೆಯಲ್ಲಿ ಕೆರೆಯಲ್ಲಿನ ಸದರಿ ಕಾಮಗಾರಿ ಸುತ್ತಮುತ್ತ ಪರಿಸರ ಅಧ್ಯಯನ ನಡೆಸುವಂತೆ ತೀರ್ಮಾನವಾಗಿದ್ದರಿಂದ ಕಾಮಗಾರಿ ನಿಲ್ಲಿಸಲಾಗಿದೆ. ಪರಿಸರ ಅಧ್ಯಯನ ನಡೆಸಿ ವರದಿ ತರಿಸಲಾಗುತ್ತದೆ. ಅದನ್ನಾಧರಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನದಲ್ಲಿ ಭರವಸೆ ನೀಡಿದ್ದಾರೆ.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

12 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

12 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

14 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

14 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

14 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

15 hours ago