ಕಲಬುರಗಿ: ಇಲ್ಲಿನ ಜಿ.ಎಸ್.ಜಿ. ಸಂಗಿನಿ ಫೆÇೀರಂ ವತಿಯಿಂದ ಅ. 8ರಂದು ದೀವಾಳಿ ಮೇಳ ಆಯೋಜಿಸಲಾಗಿದೆ ಎಂದು ಸಂಗಿನಿ ಫೆÇೀರಂ ಅಧ್ಯಕ್ಷೆ ಡಾ.ಪ್ರಣೋತಿ ಕಾವೇರಿ, ಕಾರ್ಯದರ್ಶಿ ಲೀನಾ ಶಹಾ ತಿಳಿಸಿದರು.
ಕಳೆದ ಹತ್ತು ವರ್ಷಗಳಿಂದ ದೀವಾಳಿ ಮೇಳ ಆಯೋಜಿಸಲಾಗುತ್ತಿದ್ದು, ಮಹಿಳೆಯರು ತಮ್ಮ ಪ್ರತಿಭೆ ಹೊರ ಹಾಕಲು, ಮಹಿಳೆಯರಲ್ಲಿ ಸ್ವಾವಲಂಬಿ ಜೀವನ, ಆತ್ಮವಿಶ್ವಾಸ ಮೂಡಿಸಲು ವೇದಿಕೆ ಒದಗಿಸುವುದು ನಮ್ಮ ಸಂಸ್ಥೆಯ ಪ್ರಮುಖ ಧ್ಯೇಯವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಗಿನಿ ದೀವಾಳಿ ಮೇಳದಲ್ಲಿ ಮಹಿಳೆಯರು ಡ್ರೆಸ್ ಸ್ಟಾಲ್ ಗಳು, ಆಭರಣ ಸ್ಟಾಲ್ ಗಳು, ಗೃಹಲಂಕಾರ ವಸ್ತುಗಳು, ಅಡಿಗೆ ವಸ್ತುಗಳು, ಕಾಸ್ಮಟಿಕ್, ಆಹಾರ ಮತ್ರು ಇನ್ನೂ ಹಲವು ಬಗೆಯ ಸ್ಟಾಲ್ ಗಳನ್ನು ಪ್ರದರ್ಶಿಸುವ ಮೂಲಕ ಅನೇಕ ಮಹಿಳೆಯರು ತಮ್ಮ ವ್ಯಾಪಾರ ಪ್ರಾರಂಭಿಸಿದ್ದಾರೆ. ಈಗ ಅವರು ತಮ್ಮ ವ್ಯವಹಾರದಲ್ಲಿ ಪ್ರವರ್ಧನಮಾನಕ್ಕೆ ಬಂದಿದ್ದಾರೆ ಎಂದು ತಿಳಿಸಿದರು.
ಪ್ರತಿ ವರ್ಷ 2000ಕ್ಕೂ ಹೆಚ್ಚು ಗ್ದಾಹಕರು ಈ ಮೇಳಕ್ಕೆ ಭೇಟಿ ನೀಡುತ್ತಾರೆ. ಈ ಮೇಳದಲ್ಲಿ ಕಲಬುರಗಿ ಮಹಿಳಾ ಪ್ರದರ್ಶನವಲ್ಲದೆ ಸೊಲ್ಲಾಪುರ, ರಾಯಚೂರು, ಸಾಂಗ್ಲಿ, ಹೈದರಾಬಾದ್ ಮುಂತಾದ ಸ್ಥಳಗಳಿಂದ ಮಹಿಳೆಯರು ತಮ್ಮ ವಿಶೇಷ ಉತ್ಪನ್ನಗಳನ್ನು ಪ್ರದರ್ಶಿಸುತ್ತಾರೆ. ಗ್ರಾಹಕರು ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದರು.
ಈ ಬಾರಿ 60 ಸ್ಟಾಲ್ ಗಳಿರಲಿದ್ದು, ಮೇಳದ ಲಾಭ ಪಡೆಯುವಮತೆ ಅವರು ಮನವಿ ಮಾಡಿದರು. ದೀಪ್ತಿ ಮೆಹತಾ, ರಿಹಾ ಕುಲಕರ್ಣಿ, ಸಪ್ನ, ರೂಪ ಸೇರಿದಂತೆ ಅನೇಕರಿದ್ದರು.
ಕಲಬುರಗಿ; ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ "ನಮ್ಮ ನಡಿಗೆ, ಹಳ್ಳಿಯ ಕನ್ನಡ ಸರಕಾರಿ ಶಾಲೆಯ ಕಡೆಗೆ" ಎಂಬ…
ಕಲಬುರಗಿ: “ವಿನಯ, ಉದಾರತೆ, ಪ್ರೀತಿ ಮತ್ತು ವಾತ್ಸಲ್ಯಗಳು ಸೂಫಿ ಸಂತರ ಪ್ರಮುಖ ಬೋಧನೆಗಳಾಗಿವೆ. ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರು ಸೂರ್ಯನಂತೆ…
ಶಹಾಬಾದ :ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾ.ಪಂಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಿದ್ದು ಸಜ್ಜನ ಅವಿರೋಧ ಆಯ್ಕೆಯಾಗಿದ್ದಾರೆ. ಸಾಮಾನ್ಯ…
ಶಹಾಬಾದ: ನಿರುದ್ಯೋಗ ಸಮಸ್ಯೆಯಿಂದ ನಮ್ಮ ಯುವಜನತೆ ಇಂದು ದಾರಿ ತಪ್ಪುತ್ತಿದೆ ಇದರ ವಿರುದ್ಧ ಇದರ ವಿರುದ್ದ ಸಂಘಟಿತ ಆಂದೋಲನ ಕಟ್ಟಬೇಕೆಂದು…
ಶಹಾಬಾದ: ಕರ್ನಾಟಕ ರಾಜ್ಯಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ…
ಬೆಂಗಳೂರು; ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬೆಂಗಳೂರು ನಗರ ಕೇಂದ್ರೀಯ ವಿಭಾಗದಿಂದ 2023-24 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ…