ಬಿಆರ್‍ಸಿ ಕಚೇರಿಗೆ ಸಚಿವ ದರ್ಶನಾಪುರ ಭೇಟಿ:ಹೊರಗುತ್ತಿಗೆ ನೌಕರರ ಮನವಿ ಸಲ್ಲಿಕೆ

ಸುರಪುರ: ನಗರದ ಹಳೆ ಬಸ್ ನಿಲ್ದಾಣದ ಬಳಿಯ ಶಿಕ್ಷಣ ಇಲಾಖೆಯ ಬಿಆರ್‍ಸಿ ಕಚೇರಿಗೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ಯಮಗಳ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರ ಸಂಘದ ಮುಖಂಡರು ಸಚಿವರನ್ನು ಭೇಟಿ ಮಾಡಿ ತಮ್ಮ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ,ಸಾರ್ವಜನಿಕ ಶಿಕ್ಷಣ ಇಲಾಖೆ ಕಲ್ಯಾಣ ಕರ್ನಾಟಕ ಹೊರ ಗುತ್ತಿಗೆ ನೌಕರರ ಸಂಘ ಯಾದಗಿರಿ ಜಿಲ್ಲಾ ವತಿಯಿಂದ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಮತ್ತು ತಾಲೂಕ ಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್, ಪ್ರೋಗ್ರಾಮರ್, ಲೆಕ್ಕಸಹಾಯಕ, ವಾಹನ ಚಾಲಕ ಮತ್ತು ಸಿಪಾಯಿ ವೇತನ ಅತೀ ಕಡಿಮೆ ಇದ್ದು ದಿನ ನಿತ್ಯದ ದವಸ ದಾನ್ಯಗಳ ಬೆಲೆ ಹೆಚ್ಚಳವಾದ ಕಾರಣದಿಂದ ತಿಂಗಳ ವೇತನ ಬದುಕಿಗೆ ಸಾಲುತ್ತಿಲ್ಲ. ಆದ್ದರಿಂದ ವರ್ಷಕ್ಕೊಮ್ಮೆ ವೇತನವನ್ನು ಪರಿಷ್ಕೃತಗೊಳಿಸಿ ಹೆಚ್ಚಿಸಿರುವುದಿಲ್ಲ. ಸದರಿ ಇಲಾಖೆಯಲ್ಲಿ 10 ವರ್ಷ ಮತ್ತು 16 ವರ್ಷ ದಿಂದ ಕೆಲಸ ನಿರ್ವಹಿಸುತ್ತಿದ್ದು, ಸರಕಾರ ಯೋಜನೆಯಾದಂತಹ (ಡಿ.ಪಿ.ಇ.ಪಿ ಯೋಜನೆ) ಯಡಿಯಲ್ಲಿ ನಮ್ಮ ಸಿಬ್ಬಂದಿಯನ್ನು ಖಾಯಂಗೊಳಿಸಿ, ನಮಗೆ ಸೇವಾ ಭದ್ರತೆ, ವೈದ್ಯಕೀಯ ವೆಚ್ಚ, ಸರಕಾರಿ ಹುದ್ದೆಯಲ್ಲಿರುವಂತಹ ಸಿಬ್ಬಂದಿಗಳಿಗಿಂತ ರಾತ್ರಿ ಹಗಲು ಎನ್ನದೇ ಕೆಲಸ ನಿರ್ವಹಿಸುತ್ತಿದ್ದು ಸರಕಾರಿ ಅರೇ ಸರಕಾರಿ ಕೆಲಸ ಮಾಡುತ್ತಿರುವವರಿಗೆ ಸಮಾನ ವೇತನ ಎಂದು ಸುಪ್ರಿಂ ಕೋರ್ಟ ಆದೇಶ ನೀಡಿದರೂ ಸಹ ನಮಗೆ ಸರಿಸಮಾನ ವೇತನ ನೀಡುತ್ತಿಲ್ಲ ಈ ವಿಷಯವನ್ನು ಮಾನ್ಯರಾದ ತಾವುಗಳು ಗಂಭೀರವಾಗಿ ಗಣನಿಗೆ ತೆಗೆದುಕೊಂಡು ನಮಗೆ ಬರಬೇಕಾದ ಸೌಲಭ್ಯವನ್ನು ಹಾಗೂ ತಿಂಗಳ ವೇತನ ಹೆಚ್ಚಳ ಮಾಡಬೇಕು ನಮ್ಮ ಮನೆಯಲ್ಲಿರುವ ಕುಟುಂಬದವರಿಗೆ ಸಂತೋಷದಿಂದ ದವಸದಾನ್ಯಗಳು, ಮಕ್ಕಳ ಉನ್ನತ ವ್ಯಾಸಂಗಕ್ಕೆ ಹಾಗೂ ಇನ್ನಿತರ ಸಂಸಾರಿಕ ಖರ್ಚನ್ನು ನಿಬಾಯಿಸಲು ತಿಂಗಳ ಸಂಬಳ ಹೆಚ್ಚಳ ಮಾಡಬೇಕು ಪ್ರತೀ ನೌಕರರ ವೇತನದಲ್ಲಿ ಪ್ರತೀ ತಿಂಗಳು ಜಿ.ಎಸ್.ಟಿ ಅಂತ ಸುಮಾರು 3000/- ರೂಗಳಂತೆ ಕಡಿತಗೊಳ್ಳುತ್ತಿದೆ. ಇದನ್ನು ರದ್ದುಗೊಳಿಸಬೇಕು. ಮುಂದಿನ ದಿನಗಳಲ್ಲಿ ಎನ್.ಜಿ.ಓ ಮೂಲಕ ವೇತನ ಮಾಡುವುದನ್ನು ರದ್ದುಗೊಳಿಸಿ ನೇರವಾಗಿ ಇಲಾಖೆ ಮೂಲಕವೇ ನಮ್ಮೆಲ್ಲ ಸಿಬ್ಬಂದಿಗಳಿಗೆ ವೇತನ ನೀಡುವ ವ್ಯವಸ್ಥೆ ಮಾಡಬೇಕು. ಹಾಗೂ ದುಬಾರಿಯ ಈ ಜಗತ್ತಿನಲ್ಲಿ ನಮ್ಮ ಕುಟುಂಬಗಳು ನೆಮ್ಮದಿಯಿಂದ ಬದುಕು ಸಾಗಿಸಲು ವೇತನವನ್ನು ಹೆಚ್ಚಳ ಮಾಡಬೇಕೆಂದು ಈ ಮೂಲಕ ಕಳಕಳಿಯಿಂದ ವಿನಂತಿ ಪೂರ್ವಕವಾಗಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಸಚಿವರು ಮಾತನಾಡಿ,ತಮ್ಮ ಮನವಿ ಆಲಿಸಿದ್ದೇನೆ ಮುಖ್ಯಮಂತ್ರಿಗಳು ಮನವಿಯನ್ನು ಪರಿಶೀಲಿಸಿ ಸಂಬಂಧಪಟ್ಟ ರಾಜ್ಯ ಹಂತದ ಅಧಿಕಾರಿಗಳಲ್ಲಿ ಚರ್ಚಿಸಿ ನಿಮಗೆ ಆದ ಸಮಸ್ಯಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದರು. ಮನವಿ ಸಲ್ಲಿಸುವ ವೇಳೆ ಜಿಲ್ಲಾ ಗೌರವಾಧ್ಯಕ್ಷರು ದೇವಿಂದ್ರಪ , ಜಿಲ್ಲಾಧ್ಯಕ್ಷರು ಶರಣಪ್ಪ ಕರಡಿ, ಅಬ್ದುಲ್ ಅಜೀಜ್ ಉಪಾಧ್ಯಕ್ಷರು ಪರಶುರಾಮ ಜಿಲ್ಲಾ ಉಪಾಧ್ಯಕ್ಷರು, ನಾಗರತ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಮಹಾಲಕ್ಷ್ಮೀ ಜಿಲ್ಲಾ ಖಜಾಂಚಿ, ಮೊಹಮದ್ ಅಲಿ ಸಂಘಟನ ಕಾರ್ಯದರ್ಶಿ ರವರು ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

9 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

9 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

9 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

9 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

9 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420