ಬಿಸಿ ಬಿಸಿ ಸುದ್ದಿ

ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದ ಕಲಬುರಗಿ ಟ್ರಾನ್ಸ್ ಮಹಿಳೆ ದಿವ್ಯ

ಕಲಬುರಗಿ, ನ.11; ಸುಪ್ರೀಂ ಕೋರ್ಟ್ ಲಿಂಗಾಂತರಿ (ಟ್ರಾನ್ಸ್ ಜೆಂಡರ್) ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ ನಂತರ ದೇಶದಲ್ಲಿ ಕೆಲವರಾದರೂ ಲಿಂಗಾಂತರಿ ಮಹಿಳೆಯರು (ಟ್ರಾನ್ಸ್ ಜೆಂಡರ್) ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ.

ಕಲಬುರಗಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ಲಿಂಗಾಂತರಿ ಮಹಿಳೆ ದಿವ್ಯ ಅವರು ಎಂ.ಎ ರಾಜ್ಯಶಾಸ್ತ್ರದ ಅಂತಿಮ ಪರೀಕ್ಷೆ ಬರೆದು ಎಲ್ಲರನ್ನು ಬೆರಗುಗೊಳಿಸಿದ್ದಾಳೆ.
ಕಾಲೇಜಿನ ದಾಖಲೆಗಳಲ್ಲಿ ರಾಜಶೇಖರ್ ಎಂದಿರುವುದರಿಂದ ಕಾಲೇಜಿನಲ್ಲಿ ರಾಜಶೇಖರ ಎಂದೇ ಗುರುತಿಸುತ್ತಾರೆ.

ಚಿಂಚೊಳಿ ತಾಲೂಕಿನ ಧುತ್ತರಗ ಗ್ರಾಮದ ಲಿಂಗಾಯತ ಸಮುದಾಯದ ರಾಜಶೇಖರ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಿಂದಾಗಿ ಮಹಿಳೆಯಾಗಿ ಬದಲಾಗಿದ್ದಾರೆ.
ಎಂ.ಎ ಮೊದಲ ವರ್ಷ ಪ್ಯಾಂಟು ಶರ್ಟು ಹಾಕಿಕೊಂಡು ತರಗತಿಗೆ ಹಾಜರಾದ ರಾಜಶೇಖರ ಎಂ.ಎ ಎರಡನೆ ವರ್ಷಕ್ಕೆ ದಿವ್ಯ ಎಂಬ ಸುಂದರ ಹುಡುಗಿಯಾಗಿ ಬಂದು ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ.

ಈ ಬಗ್ಗೆ ದಿವ್ಯ ಮಾತನಾಡುತ್ತಾ `ನಮ್ಮ ಮನೆಯಲ್ಲಿ ನಾನು ಹೆಣ್ಣಾಗುವುದನ್ನು ಬಹಳ ವಿರೋಧಿಸಿದರು. ಹಾಗಾಗಿ ನಾನು ನನ್ನಂತೆಯೇ ಇರುವ ಸಮುದಾಯದ ಜತೆ ಸೇರಿಕೊಂಡೆ. ನಮ್ಮ ಸಮುದಾಯ ಓದಿ ಮುಂದೆ ಬರಬೇಕು. ನನಗೆ ಎಂ.ಎ ಮುಗಿಸಿ ಪಿಹೆಚ್.ಡಿ ಮಾಡಬೇಕೆಂದು ಕನಸಿದೆ ಎನ್ನುತ್ತಾರೆ.

ದಿವ್ಯ ಅವರು ಕಲಬುರಗಿಯ ದುಬೈ ಕಾಲನಿಯ ಗುರುವಿನ ಮನೆಯಲ್ಲಿದ್ದು ಕಾಲೇಜಿಗೆ ಬರುತ್ತಿದ್ದರು. ಪರೀಕ್ಷೆ ಮುಗಿದ ನಂತರ ಮಂಬೈಗೆ ತೆರಳಲಿದ್ದಾರೆ.

ಪೀಪಲ್ಸ್ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್ ಅವರು `ಇಂತಹ ಬದಲಾವಣೆಗೆ ನಮ್ಮ ಕಾಲೇಜು ಸಾಕ್ಷಿಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಕುಮಾರ ಅವರು ಈ ಬಗ್ಗೆ ಇತರೆ ಲಿಂಗಾಂತರಿ ಸಮುದಾಯಕ್ಕೆ ದಿವ್ಯ ಮಾದರಿಯಾಗಿದ್ದಾಳೆ, ಅಂಬೇಡ್ಕರ್ ಅವರ ಹೆಸರಿನ ಈ ಕಾಲೇಜಿನಲ್ಲಿ ಈ ಬದಲಾವಣೆ ಖುಷಿ ಕೊಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

emedialine

Recent Posts

ಮಹಿಳಾ ಅಸ್ಮಿತೆ ಸಾರಿದ ಡಾ.ಕಮಲಾ ಹಂಪನಾ

ಸೇಡಂ: ಕನ್ನಡ ಸಾಹಿತ್ಯ ಲೋಕಕ್ಕೆ ಸೃಜನ ಶೀಲ ಬರಹದ ಮೂಲಕ ಮಹಿಳಾ ಅಸ್ಮಿತೆ ಸಾರಿದ ಕೀರ್ತಿ ಹಿರಿಯ ಸಾಹಿತಿ ಡಾ.ಕಮಲಾ…

4 hours ago

ರಾಜ್ಯದಲ್ಲಿ 82 ಲಕ್ಷ‌ ಹೆಕ್ಟೇರ್ ಬಿತ್ತನೆ ಗುರಿ; 2025 ಅಂತ್ಯಕ್ಕೆ ಕಂದಾಯ ಇಲಾಖೆ ಡಿಜಿಟಲೀಕರಣ | ಸಚಿವ ಕೃಷ್ಣ ಬೈರೇಗೌಡ

2025 ಅಂತ್ಯಕ್ಕೆ ಕಂದಾಯ ಇಲಾಖೆ ಡಿಜಿಟಲೀಕರಣ: ಕಂದಾಯ ಇಲಾಖೆಯು ಎಲ್ಲಾ ಆಯಾಮದಿಂದ ಡಿಜಿಟಲಿಕರಣಕ್ಕೆ ಮುಂದಾಗಿದೆ. ಈಗಾಗಲೆ ಇ-ಕಚೇರಿ ಅನುಷ್ಠಾನದಲ್ಲಿ ಶೇ.80ರಷ್ಟು…

15 hours ago

ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಧಾಕೃಷ್ಣ ದೊಡ್ಡಮನಿಗೆ ಮಜರ್ ಆಲಂ ಖಾನ್ ಸನ್ಮಾನ

ಕಲಬುರಗಿ: ರಾಧಾಕೃಷ್ಣ ದೊಡ್ಡಮನಿ ಅವರು ಸಂಸದರಾಗಿ ಪ್ರಮಾಣ ವಚನ ಸ್ವಿಕರಿಸಿದ ನಂತರ ಅವರನ್ನು ಕುಡಾ ಅಧ್ಯಕ್ಷ ಮಜರ್ ಆಲಂ ಖಾನ್…

16 hours ago

ಕಮಲಾಪುರದಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನ ಕೈಗೊಳ್ಳುವೆ: ವಿದ್ಯಾ ಕಣ್ವವಿರಾಜ ತೀರ್ಥ

ಸುರಪುರ: ಭಕ್ತರ ಆಪೇಕ್ಷೆ ಮತ್ತು ಅಭಿಮಾನದ ಮೇರೆಗೆ ಈ ಬಾರಿಯ ತಮ್ಮ ಪಂಚಮ ವರ್ಷದ ಚಾತುರ್ಮಾಸ್ಯ ವೃತಾನುಷ್ಠಾನವನ್ನು ವಿಜಯಪುರ ಜಿಲ್ಲೆಯ…

17 hours ago

ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣಗಳ ನಿಷೇಧ

ಬೆಂಗಳೂರು; ಕಬಾಬ್‍ನ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ The Food Safety and Standards Act, 2006  ರ…

19 hours ago

17 ನೂತನ ಶಾಸಕರಿಂದ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು; ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನಪರಿಷತ್ತಿಗೆ ಆಯ್ಕೆಯಾದ 17 ವಿಧಾನ ಪರಿಷತ್ ಸದಸ್ಯರಾಗಿ  ಪ್ರಮಾಣ ವಚನ ಸ್ವೀಕರಿಸಿದರು. ಭಾರತೀಯ ರಾಷ್ಟ್ರೀಯ…

19 hours ago