ವಿಶ್ವ ಏಡ್ಸ ದಿನಾಚರಣೆ ನಿಮಿತ್ತ MRM ಕಾಲೇಜು ವತಿಯಿಂದ ವಾಕ್ಥಾನ್‍

ಕಲಬುರಗಿ: ವಿಶ್ವ ಏಡ್ಸ್ ದಿನಾಚರಣೆ. ಈ ವರ್ಷದ ದೇಹ ವಾಕ್ಯ “ಏಡ್ಸ ದಿನಾಚರಣೆ ನೆನಪಿನಲ್ಲಿ ಇಟ್ಟಕೊಳ್ಳಿ – ಬದ್ದರಾಗಿ. ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜು ಕಲಬುರಗಿ ವತಿಯಿಂದ ಏಡ್ಸ ದಿನಾಚರಣೆ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸಲು ದೂರನಡೆ ವಾಕ್ಥಾನ್ ಅನ್ನು ನಗರದ ಎಂ ಆರ್ ಮೆಡಿಕಲ್ ಕಾಲೇಜಿನಿಂದ ವಲ್ಲಭಭಾಯಿ ಪಟೇಲ್ ವೃತ್ತದ ವರೆಗೆ ಮಾಡಲಾಯಿತು.

ದೂರನಡೆ ವಾಕ್ಥಾನ್ ಅನ್ನು ಹೈ ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಭೀಮಾಶಂಕರ ಬಿಲಗುಂದಿ ಬಲೂನಗಳನ್ನು ಆಕಾಶಕ್ಕೆ ಹಾರಿಸುವುದರ ಮೂಲಕ ಚಾಲನೆ ನೀಡಿದರು. ಕಾಲೇಜಿನ ಡೀನರಾದ ಡಾ ಎಸ್ ಎಂ ಪಾಟೀಲರು ಮಾತನಾಡಿ ಏಡ್ಸ ರೋಗಿಗಳನ್ನು ನಿರ್ಲಕ್ಷಿಸದೆ ನಮ್ಮ ಜೋತೆ ಸಹಜೀವನ ನಡೆಸಲು ಅವಕಾಶಮಾಡಿ, ಏಡ್ಸ್ ರೋಗ ಪ್ರಸರಣದ ಬಗ್ಗೆ ಜಾಗ್ರತೆ ಮೂಡಿಸಿ, ಏಡ್ಸ ಮುಕ್ತ ಭಾರತ ಮಾಡಲು ಕರೆ ನೀಡಿದರು.

ಹೈ ಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ ಎಸ್ ಆರ್ ಹರವಾಳ, ಕೌನ್ಸಿಲ್ ಸದಸ್ಯರಾದ ಡಾ ಅನೀಲ ಪಟ್ಟಣ, ಕಾಲೇಜಿನ ಉಪ-ಡೀನರಾದ ಡಾ ಅನುರಾದಾ ಪಟೀಲ, ಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕರಾದ ಡಾ ಬಸವರಾಜ ಪಾಟೀಲ ರಾಯಕೊಡ, ಸಂಗಮೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಮಹಾನಂದಾ ಮೇಳಕುಂದಿ, ಓಬಿಜಿ ವಿಭಾಗದ ಮುಖ್ಯಸ್ಥರಾದ ಡಾ ನೀತಾ ಹರವಾಳ, ಡಾ ಮೀನಾಕ್ಷಿ ದೇವರಮನಿ, ಡಾ ಅನೀತಾ ಗೌರಾ, ಸಮುದಾಯ ವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಸುನೀಲ ದೇಶಮುಖ, ಡಾ ಕವಿರಾಜ, ಡಾ ಪಲ್ಲವಿ, ಡಾ ಮುಬನ್, ಡಾ ಶ್ವೇತಾ, ಡಾ ಶಿವಾನಂದ, ಡಾ ಶ್ರೀಶೈಲ ಘೂಳಿ, ದೀಪ್ತಿ ಭಂಡಕ್, ಶ್ರೀದೇವಿ ಪಾಟೀಲ ,ಸಮಾತಾ, ಹಾಗೂ ಮೆಡಿಶನ್ ವಿಭಾಗದ ಮುಖ್ಯಸ್ಥರಾದ ಡಾ ಭರತ ಕೊಣಿನ, ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ ವಾಲಿ ಖeಜioಟogಥಿ ವಿಭಾಗದ ಡಾ ನಾಗರಾಜ ಪಾಟೀಲ, ಇನ್ನಿತರ ಪ್ರದ್ಯಾಪಕರು ಉಪಸ್ಥಿತಿ ಇದ್ದರು.

ಸುಮಾರ 300 ವೈದ್ಯ ವಿದ್ಯಾರ್ಥಿಗಳು, ಹೋಮಿಯೋಪತಿ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕೇತರ ಸಿಬ್ಬಂದಿ ವರ್ಗದವರು ವಾಕ್ಥಾನ್ ದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ವೈದ್ಯ ವಿದ್ಯಾರ್ಥಿಗಳು ಏಡ್ಸ ಕುರಿತಾಗಿ ಕಿರು ನಾಟಕ ಹಾಗೂ ಡ್ಯಾನ್ಸ್ ಜನರ ಗಮನ ಸೆಳೆಯಿತು ಹಾಗೂ ಪೆÇೀಸ್ಟರ್‍ಗಳು, ಪ್ಲೇ ಕಾರ್ಡ್‍ಗಳು ಅತ್ಯಂತ ಆಕರ್ಷಕವಾಗಿದ್ದವು ಬಹುಜನರ ಹಮನ ಸೆಳೆದವು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

17 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

27 mins ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

29 mins ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

35 mins ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

36 mins ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

41 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420