ಬಿಸಿ ಬಿಸಿ ಸುದ್ದಿ

ಪಶು ಸಂಗೋಪನೆ, ಹಾಲು ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಭಾರತ ಪ್ರಥಮ ಸ್ಥಾನ

ಬೆಂಗಳೂರು, ಡಿಸೆಂಬರ್ 02; ಪಶು ಸಂಗೋಪನೆ ಹಾಗೂ ಹಾಲು ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ ಭಾರತ ಪ್ರಥಮ ಸ್ಥಾನದಲ್ಲಿದೆ. ಆದರೆ, ಉತ್ಕøಷ್ಟ ಮೇವು, ರಸಮೇವು, ಪಶು ಆಹಾರ ಹಾಗೂ ಆಧುನಿಕ ತಾಂತ್ರಿಕತೆಗಳ ಕೊರತೆಯಿಂದಾಗಿ ವಿಶ್ವದ ಸರಾಸರಿ ಹಾಲು ಉತ್ಪಾದಕತೆಗೆ ಹೋಲಿಸಿದರೆ ಭಾರತದ ಸರಾಸರಿ ಹಾಲಿನ ಉತ್ಪಾದಕತೆಯಲ್ಲಿ ಕಡಿಮೆಯಿದೆ, ಇದು ಕಳವಳಕಾರಿಯಾಗಿದೆ ಎಂದು ಜಾನ್ಸಿ, ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ. ಅಮರೇಶಚಂದ್ರ ಅವರು ತಿಳಿಸಿದರು.

ಇಂದು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಆವರಣದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಹಾಗೂ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ, ಜಾನ್ಸಿ, ಉತ್ತರ ಪ್ರದೇಶ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ಸುಸ್ಥಿರ ಪರಿಸರ ಸ್ನೇಹಿ ಹುಲ್ಲುಗಾವಲು, ಮೇವು ಮತ್ತು ಪ್ರಾಣಿ ವಿಜ್ಞಾನ ನಾವೀನ್ಯತೆಯಿಂದ ಭವಿಷ್ಯದ ಪೋಷಣೆ” ಕುರಿತ ಅಂತರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಸಿ ಮಾತನಾಡಿದ ಅವರು, ಪ್ರಸ್ತುತ, ದೇಶದ್ಯಾಂತ 20 ಮಿಲಿಯನ್ ಹೆಕ್ಟರ್ ಹುಲ್ಲುಗಾವಲು ಇದ್ದರೂ ಸಹ ಶೇಕಡ 12 ರಷ್ಟು ಹಸಿಮೇವು, ಶೇಕಡ 23 ರಷ್ಟು ಒಣ ಮೇವು ಹಾಗೂ ಶೇಕಡ 24 ರಷ್ಟು ಪಶು ಆಹಾರದ ಕೊರತೆ ಇದೆ ಎಂದರು.

ಸರಾಸರಿ ಹಾಲಿನ ಉತ್ಪಾದಕತೆಯನ್ನು ಹೆಚ್ಚಿಸಲು ಉತ್ತಮ ತಳಿಗಳ ಆಯ್ಕೆ, ಆಧುನಿಕ ತಾಂತ್ರಿಕತೆಗಳ ಅಳವಡಿಕೆ ಹಾಗೂ ಪ್ರತಿಯೊಬ್ಬ ರೈತತಮ್ಮ ಹೊಲದಲ್ಲಿ ಶೇಕಡ 10ರಷ್ಟು ಜಾಗವನ್ನು ಹುಲ್ಲುಗಾವಲಿಗೆ ಮೀಸಲಿಡುವುದರಿಂದ ಮೇವಿನ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಮಾತನಾಡಿ, ದೇಶದಲ್ಲೇ ಹೈನೋದ್ಯಮ ಒಂದು ಪ್ರಮುಖ ಉದ್ಯಮವಾಗಿದೆ. ಹೈನೋದ್ಯಮ, ಹುಲ್ಲುಗಾವಲು, ಬೇಸಾಯದ ಮೇವಿನ ಬೆಳೆಗಳು ಮತ್ತು ಬೆಳೆ ಉಳಿಕೆಗಳ ಮೇಲೆ ಅವಲಂಬಿತವಾಗಿದೆ. ಹೆಚ್ಚು ಹೆಚ್ಚು ಸಾಂದ್ರಿಕರಿಸಿದ ಪಶು ಆಹಾರದ ಮೇಲೆ ರೈತರು ಅವಲಂಬಿಸಿರುವುದರಿಂದ ಇಂದು ಹೈನೋದ್ಯಮ ಲಾಭದಾಯಕವಾಗಿರುವುದಿಲ್ಲ. ಹೈನೋದ್ಯಮದಲ್ಲಿ ಖರ್ಚು/ವೆಚ್ಚ ಕಡಿಮೆ ಮಾಡಬೇಕಾದರೆ ಪೌಷ್ಠಿಕವಾದ ಮೇವನ್ನು ಪಶುಗಳಿಗೆ ಕೊಡುವುದು ಅವಶ್ಯಕ ಎಂದರು.

ರಾಜ್ಯವು ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಎದುರಾಗಬಹುದು. ಇಂತಹ ಕೊರತೆಯನ್ನು ಸಮರ್ಪಕವಾಗಿ ಎದುರಿಸಲು ಮೇವಿನ ಬೆಳೆಗಳ ಸಂಶೋಧನೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ದೇಶ ಅನುಭವಿಸುತ್ತಿರುವ ಮೇವಿನ ಬೆಳೆಗಳ ಕೊರತೆಯನ್ನು ನೀಗಿಸಲು ಮತ್ತು ಸಂಶೋಧನಾ ದಿಶೆಯನ್ನು ನಿರ್ಧರಿಸಲು 3 ದಿನಗಳ ಈ ಸಮ್ಮೇಳನ ಸಹಕಾರಿಯಾಗಲಿದೆ. ನೀರಾವರಿ, ಒಣಬೇಸಾಯ, ಏಕವಾರ್ಷಿಕ, ಬಹುವಾರ್ಷಿಕ, ಏಕದಳ ಮತ್ತು ದ್ವಿ-ದಳ ಮೇವಿನ ಬೆಳಗಳ ಅಭಿವೃದ್ಧಿ, ಬೇಸಾಯ, ಬೀಜೋತ್ಪಾದನೆ, ಸಂಸ್ಕರಣೆ, ವಿಸ್ತರಣೆ ಹೀಗೆ ವಿವಿಧ ಆಯಾಮಗಳ ಕುರಿತು ಚರ್ಚಿಸಲು ಈ ಸಮಾವೇಶ ಉತ್ತಮ ವೇದಿಕೆಯನ್ನು ಕಲ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬೀದರ್‍ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ.ಸಿ. ವೀರಣ್ಣ, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹೈನುಗಾರಿಕೆಯಲ್ಲಿ ಪಶುಗಳ ಆರೋಗ್ಯ ಪ್ರಮುಖವಾಗಿ ಮೇವಿನ ಗುಣಮಟ್ಟ ಹಾಗೂ ಪಶು ಆಹಾರದ ಮೇಲೆ ಅವಲಂಬಿತವಾಗಿದೆ. ಇತ್ತೀಚಿನ ದಿನಗಳಲ್ಲಿ, ನಗರ ಪ್ರದೇಶ ಹಾಗೂ ಹಳ್ಳಿಗಳಲ್ಲಿ ಪಶುಗಳು ಸೇವಿಸುವ ಮೇವಿನಲ್ಲಿ ಭಾರ ಲೋಹಗಳು ಕಂಡು ಬರುತ್ತಿವೆÉ. ಇದು ಮನುಷ್ಯನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರಲಿದೆ. ಆದುದರಿಂದ, ಅರಣ್ಯ ಕೃಷಿಯಿಂದ ಮೇವನ್ನು ಉತ್ಪಾದಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.

ಅರಣ್ಯ ಪ್ರದೇಶದಲ್ಲಿ ಹುಲ್ಲುಗಾವಲಿಗಾಗಿ ಗೋಮಾಳಗಳನ್ನು ಸಂರಕ್ಷಿಸುವುದು ಪ್ರಸ್ತುತ ಪರಿಸ್ಥಿತಿಯಲ್ಲಿ ಅತ್ಯವಶ್ಯಕ. 2026 ನ್ನು ಅಂತರಾಷ್ಟ್ರೀಯ ಹುಲ್ಲುಗಾವಲು ಮತ್ತು ಪಶು ಮೇಯಿಸುವ ಸಮುದಾಯದ ವರ್ಷವೆಂದು ಮಾರ್ಚ್ 15, 2022 ರಂದು ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಘೋಷಿಸಲಾಗಿದೆ. ಭಾರತದ ಶೇ.17ರಷ್ಟು ಭೌಗೋಳಿಕ ಪ್ರದೇಶವು ಹುಲ್ಲುಗಾವಲಿನಿಂದ ಆವೃತ್ತವಾಗಿದೆ. ಸುಮಾರು 130 ಲಕ್ಷ ಪಶು ಪಾಲಕರು ಹುಲ್ಲುಗಾವಲಿನ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೇ, ಒಟ್ಟು ದೇಶಿಯ ಉತ್ಪಾದನೆಯಲ್ಲಿ ಶೇ.3ರಷ್ಟು ಕೊಡುಗೆ ಹುಲ್ಲುಗಾವಲಿನದ್ದಾಗಿರುತ್ತದೆ. ಆದುದರಿಂದ ಹುಲ್ಲುಗಾವಲನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾವೇಶದಲ್ಲಿ ಸುಮಾರು 52 ಸಂಸ್ಥೆಗಳಿಂದ, 5 ದೇಶಗಳಿಂದ ಮತ್ತು 3 ಅಂತರಾಷ್ಟ್ರೀಯ ಸಂಸ್ಥೆಗಳಿಂದ 300ಕ್ಕಿಂತ ಹೆಚ್ಚು ಸಂಶೋಧನಾ ವಿಜ್ಞಾನಿಗಳು, ಅಭಿವೃದ್ಧಿ ವೃತ್ತಿಪರರು ಭಾಗವಹಿಸಿದ್ದರು.

ಸಮಾವೇಶದಲ್ಲಿ ಪಿ. ದಿನೇಶ್, ಮುಖ್ಯ ಪ್ರಧಾನ ವ್ಯವಸ್ಥಾಪಕರು, ನರ್ಬಾಡ್, ಮುಂಬೈ, ಡಾ.ಎಸ್. ಕೆ. ಪ್ರಧಾನ್, ಸಹಾಯಕ ಮಹಾ ನಿರ್ದೇಶಕರು, ಐಸಿಎಆರ್, ನವದೆಹಲಿ,ಡಾ. ಎಂ.ಬಿ. ಚೆಟ್ಟಿ, ಕುಲಪತಿಗಳು, ಸಂಸ್ಕøತಿ ವಿಶ್ವವಿದ್ಯಾಲಯ, ಮಥುರ, ಉತ್ತರ ಪ್ರದೇಶರವರು ಉಪಸ್ಥಿತರಿದ್ದರು.

emedialine

Recent Posts

ಪಾಲಿಕೆ ಸದಸ್ಯ ಸಚಿನ್ ಶಿರವಾಳಗೆ ಭೀಮನಗೌಡ ಪರಗೊಂಡ ಸನ್ಮಾನ

ಕಲಬುರಗಿ: ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಮಹಾನಗರದ ವಿದ್ಯಾನಗರ ವಾರ್ಡ್ ದ ಮಹಾನಗರ ಪಾಲಿಕೆಯ ಸದಸ್ಯ ಆಗಿರುವ ಸಚಿನ್ ಶಿರವಾಳ ಅವರು…

11 mins ago

ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ಡಾ. ಶರಣಪ್ಪ ಎಸ್.ಡಿ ನೇಮಕ

ಕಲಬುರಗಿ: 2009 ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಡಾ. ಶರಣಪ್ಪ ಎಸ್.ಡಿ ಅವರು ಕಲಬುರಗಿ ನೂತನ ಪೊಲೀಸ್ ಆಯುಕ್ತರಾಗಿ ನಿಯೋಕ್ತಗೊಂಡಿದ್ದಾರೆ.…

1 hour ago

ಪ್ರಾಧ್ಯಾಪಕಿ ಡಾ.ಜಯಶ್ರೀ ಅಗರಖೇಡ್ ಗೆ ಪೆÇ್ರ.ಸತೀಶ್ ಧವನ್ ಪ್ರಶಸ್ತಿ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ ಕಾಲೇಜಿನ ಕಂಪ್ಯೂಟರ್ ಸಾಯಿನ್ಸ್ ಇಂಜಿನಿಯರಿಂಗ (ಸಿಎಸ್‍ಇ) ವಿಭಾಗದ…

3 hours ago

ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಪದಕಗೆದ್ದ ಲೋಕೇಶ್ ಪೂಜಾರ್

ಕಲಬುರಗಿ: ರಾಜ್ಯಮಟ್ಟದ ಸರ್ಕಾರಿ ನೌಕರರಕ್ರೀಡಾಕೂಟದಈಜು ಸ್ಪರ್ಧೆಯಲ್ಲಿ ಕಲಬುರಗಿಯ ವಿಭಾಗೀಯಆಹಾರ ಪ್ರಯೋಗಾಲಯದ ಹಿರಿಯಆಹಾರ ವಿಶ್ಲೇಷಣಅಧಿಕಾರಿ ಲೋಕೇಶ್ ಪೂಜಾರ್‍ಅವರುಉತ್ತಮ ಪ್ರದರ್ಶನ ನೀಡಿಒಂದು ಬಂಗಾರ…

3 hours ago

ತೊಗರಿ ಬೆಳೆಯಲ್ಲಿ ಗೊಣ್ಣೆ ಹುಳದ ಭಾದೆ ಹತೋಟಿಗೆ ಡಾ. ಮಲ್ಲಪ್ಪ ಅವರಿಂದ ಸಲಹೆ

ಕಲಬುರಗಿ: ತಾಲೂಕಿನಲ್ಲಿ ತೊಗರಿ ಬೆಳೆಗೆ ಅಲ್ಲಲ್ಲಿ ಗೊಣ್ಣೆ ಹುಳದ ಭಾದೆ ಕಂಡು ಬಂದಿದ್ದು ರೈತಾಪಿ ಜನರು ಹತೋಟಿಗೆ ಕೃಷಿ ವಿಜ್ಞಾನ…

3 hours ago

ನಾಗಾವಿ, ಕಾಳಗಿ ಸ್ಮಾರಕಗಳ ಸಂರಕ್ಷಣೆಗೆ ಕ್ರಮ; ಪ್ರವಾಸಿಗಳಿಗೆ ಸೌಲಭ್ಯ | ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ; ಜಿಲ್ಲೆಯ ನಾಗಾವಿ ಮತ್ತು ಕಾಳಗಿಯಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸುವದರೊಂದಿಗೆ ಈ ಎರಡು ಸ್ಥಳಗಳನ್ನು ಪ್ರವಾಸೋದ್ಯಮ ದೃಷ್ಟಿಯಿಂದಲೂ ಅಭಿವೃದ್ಧಿ ಪಡಿಸಲು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420