ಸರಕಾರಗಳ ವಿರುಧ್ಧ ಧ್ವನಿ ಎತ್ತದಿದ್ದರೆ ಬೇಡಿಕೆ ಈಡೇರಲಾರವು: ದಾವಲಸಾಬ್ ನದಾಫ್

ಸುರಪುರ: ಯಾವುದೆ ಸರಕಾರಗಳು ಬಂದರು ರೈತ,ಕಾರ್ಮಿಕರ,ಶ್ರಮಿಕರ ಬೇಡಿಕೆಗಳು ಈಡೆರಲಾರವು.ಆದ್ದರಿಂದ ನಾವೆಲ್ಲರು ಒಂದಾಗಿ ಸರಕಾರಗಳ ವಿರುಧ್ಧ ಧ್ವನಿ ಎತ್ತುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್ ಮಾತನಾಡಿದರು.

ತಾಲ್ಲೂಕಿನ ನಾಗರಾಳ ಮತ್ತು ಆಲ್ದಾಳ ಗ್ರಾಮ ಘಟಕಗಳ ಪದಾಧಿಕಾರಗಳ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಇಂದು ರೈತರಿಗೆ ಸರಕಾರಗಳ ಸರಿಯಾದ ನೆರವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.ಕಾರ್ಮಿಕರ ಅನೇಕ ಬೇಡಿಕೆಗಳು ಹಲವಾರು ವರ್ಷಗಳಿಂದ ಹಾಗೆ ಇವೆ.ಇದಕ್ಕೆಲ್ಲ ಕಾರಣ ನಮ್ಮಲ್ಲಿಲ್ಲದ ಒಗ್ಗಟ್ಟು.ಆದ್ದರಿಂದ ತಾವೆಲ್ಲ ಸಂಘಟಿತರಾಗಿ ಹೋರಾಟಕ್ಕೆ ಧುಮುಕಿದಾಗ ಸರಕಾರ ನಮ್ಮತ್ತ ಗಮನ ಹರಿಸುತ್ತವೆ.ಆದ್ದರಿಂದ ತಾವೆಲ್ಲ ಸಂಘಟನೆಯನ್ನು ಬಲಪಡಿಸುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಆಲ್ದಾಳ ಗ್ರಾಮ ಘಟಕದ ಪದಾಧಿಕಾರಿಗಳನ್ನಾಗಿ ಹಲಕೆಪ್ಪ ಪೂಜಾರಿ ಗೌರವಾಧ್ಯಕ್ಷ,ಲಕ್ಷ್ಮೀಬಾಯಿ ಅಮಾತೆಪ್ಪ ಅಧ್ಯಕ್ಷರು,ಹುಸೇನಬಿ ಲಾಲಸಾಬ,ಮಹದೇವಿ ಉಪಾಧ್ಯಕ್ಷರು,ಶರಣಬಸವ ಪ್ರ.ಕಾರ್ಯದರ್ಶಿ ಹಾಗು ಶರಣಬಸವ ಮತ್ತು ಪುಲಕಪ್ಪ ಇವರನ್ನು ಸಹಕಾರ್ಯದರ್ಶಿಗಳನ್ನಾಗಿ ನೇಮಕಗೊಳಿಸಲಾಯಿತು.

ಅದೆರೀತಿ ನಾಗರಾಳ ಗ್ರಾಮ ಘಟಕಕ್ಕೆ ಹಯ್ಯಾಳಪ್ಪ ಕಿಲ್ಲೇದಾರ ಗೌರವಾಧ್ಯಕ್ಷರು,ಇಮಾಂಬಿ ನಬಿಸಾಬ್ ಅಧ್ಯಕ್ಷರು,ದೇವಕ್ಕೆಮ್ಮ ವೆಂಕೋಬ,ಮುಮ್ತಾಜ್ ಹುಸೇನಭಾಷಾ ಉಪಾಧ್ಯಕ್ಷರು,ಖಾಸಿಂಸಾಬ್ ಬೋನಾಳ ಪ್ರ,ಕಾರ್ಯದರ್ಶಿ,ಭೀಮಬಾಯಿ ಈರಪ್ಪ, ಭೀಮಬಾಯಿ ಈಟಗಿ ಸಹಕಾರ್ಯದರ್ಶಿ ಹಾಗು ಸಣ್ಣ ಬಸಪ್ಪ ಖಜಾಂಚಿಯನ್ನಾಗಿ ನೇಮಕಗೊಳಿಸಲಾಯಿತು.

ಸಭೆಯಲ್ಲಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ,ಜಂಟಿ ಕಾರ್ಯದರ್ಶಿಮಲ್ಲಮ್ಮ ಕೊಡ್ಲಿ,ಹುಣಸಗಿ ಸಂಚಾಲಕ ಬಸ್ಸು ಕಟ್ಟಿಮನಿ ಕಾಮನಟಿಗಿ ಉಪಸ್ಥಿತರಿದ್ದರು.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420