ಬೀದರ್: ಪರಿಸರ ಜಾಗೃತಿಗಾಗಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸಿದ್ರಾಮ್ ಟಿ.ಪಿ. ಅವರು ಇಲ್ಲಿ ಕರೆ ನೀಡಿದರು.
ಗುರುನಾನಕ್ ದೇವಜಿ ಅವರ ೫೫೦ನೇ ಜಯಂತ್ಯುತ್ಸವ ನಿಮಿತ್ಯ ಗುರುನಾನಕ್ ಸಂಸ್ಥೆಗಳ ಅಡಿಯಲ್ಲಿ ನಮ್ಮ ನಡಿಗೆ ಹಸಿರಿನೆಡೆಗೆ ಎಂಬ ಘೋಷವಾಕ್ಯದಲ್ಲಿ ಶನಿವಾರ ಜರುಗಿದ ಶಾಲಾ ವಿದ್ಯಾರ್ಥಿಗಳ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಯಾಂತ್ರಿಕ ಜೀವನ ಕ್ರಮದಿಂದಾಗಿ ವಹಾನಗಳ ಹೊಗೆದಟ್ಟಿನಿಂದ ಉಸಿರುವ ಗಟ್ಟುವಂತಹ ಪರಿಸರ ನಿರ್ಮಾಣವಾಗಿದೆ. ಮನುಷ್ಯ ತನ್ನ ಸ್ವರ್ಥಕ್ಕಾಗಿ ಗಿಡಮರಗಳನ್ನು ತುಂಡರಿಸಿ ಇಂತಹ ಅನಾಹುತಕ್ಕೆ ಎಡೆಮಾಡಿಕೊಟ್ಟಿದ್ದಾನೆ. ಮುಂದಿನ ಪಿಳಿಗೆ ಸ್ವಚ್ಛ ಪರಿಸರಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಒದಗಿಬರಬಹುದು. ಇದಕ್ಕೆ ಏಕೈಕ ಉಪಾಯವೆಂದರೆ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ತಲೆಗೊಂದು ಮರ, ಊರಿಗೊಂದು ವನ ಎಂಬ ನೀರಿ ಅನುರಿಸರಿ ಅದರಂತೆ ನಡೆದರೆ ಮಾತ್ರ ಭಾವಿ ಪೀಳಿಗೆಗೆ ಉಡಿಗಾಲವಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿಸುವ ರ್ಯಾಲಿಗೆ ಚಾಲನೆ ನೀಡಿದ ಗುರುನಾನಕ್ ಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯೆಕ್ಷೆ ಶ್ರೀಮತಿ ರೇಷ್ಮಾ ಕೌರ್ ಅವರು ಮಾತನಾಡಿ, ನಿಮ್ಮ ಈ ಕ್ರಮ ಜನರಿಗೆ ಜಾಗೃತಿ ಮೂಡಿಸಿ ಹಸಿರು ಕ್ರಾಂತಿಗೆ ಒಂದು ಅಳಿಲು ಸೇವೆಯಂದು ಭಾವಿಸಿ ಇದು ಕೇವಲ ತೋರಿಕೆಯ ಕ್ರಮವಾಗದೆ ನಾವೆಲ್ಲರು ಹಸಿರನ್ನು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಕರೆ ನೀಡಿದರು.
ರ್ಯಾಲಿಯು ಗುರುನಾನಕ್ ಶಾಲೆಯಿಂದ ಹೊರಟು ರೋಟರಿ ಕ್ಲಬ್, ಗುದಗೆ ಆಸ್ಪತ್ರೆ, ಮೋಹನ್ ಮಾರ್ಕೆಟ್, ಅಂಬೇಡ್ಕರ್ ಸರ್ಕಲ್ ಮುಖಾಂತರ ಜನವಾಡಾ ರಸ್ತೆ ಮಾರ್ಗವಾಗಿ ಚಿಕ್ಪೆಟ್ ಹತ್ತಿರ ವರ್ತುಲ ರಸ್ತೆ ಪಕ್ಕ ನಿರ್ಮಿಸಿದ ಬೃಹತ ಸಮಾವೇಶದಲ್ಲಿ ಕೊನೆಗೊಂಡಿತು.
ಕಾರ್ಯಕ್ರಮದಲ್ಲಿ ಶ್ರೀ ನಾನಕ್ ಝಿರಾ ಸಾಹೇಬ್ ಫೌಂಡೆಷನ್ನ ಅಧ್ಯಕ್ಷ ಡಾ. ಸರದಾರ್ ಬಲಬೀರಸಿಂಗ್, ಗುರುನಾನಕ್ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕರು, ಸಂಸ್ಥೆಯ ಉಪಾಧ್ಯಕ್ಷರು ಮತ್ತು ಗುರುನಾನಕ್ ಸಂಸ್ಥೆಯ ಪ್ರಿನ್ಸಿಪಾಲರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…