ಚಿತ್ತಾಪುರ; ಹೂವಿನ ವ್ಯಾಪಾರಿ ಯುವಕನನ್ನು ಕೊಲೆಗೈದು, ಪೆಟ್ರೋಲ್ ಹಾಕಿ ಶವ ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಚಿತ್ತಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ತಾಪುರ ಪಟ್ಟಣದ ಆಸೀಫ್ ಗಂಜ್ ನಿವಾಸಿಗಳಾದ ಆಸೀಫ್ ಪಾಶಾ ಸೈಯದ್ ಪಾಶಾ (21), ಬಾಬುಮೀಯಾ ಮಹೇಬೂಬ ಸಾಬ್ ಕೋಟಿ (20), ಅಲ್ತಾಫಶಾ ಗುಲಾಮಶಾ (23), ಮಹ್ಮದ್ ಕೈಫ್ ಶೇಖ ಸಲೀಂ ಮಾಸೂಲದಾರ (22) ಆರೋಪಿಗಳನ್ನು ಬಂದಿಸಲಾಗಿದೆ.
ಶುಕ್ರವಾರ ಚಿತ್ತಾಪೂರ ಪಟ್ಟಣದ ಆಶ್ರಯ ಕಾಲೋನಿಯ ಫಾರೇಸ್ಟ ಆಫೀಸ್ ಸಮೀಪ ಇರುವ ಇಂಡಸ್ಟ್ರೀಯಲ್ ಏರಿಯಾದ ಖುಲ್ಲಾ ಜಾಗದಲ್ಲಿ ದಾವಲಸಾಬ್ ಮಹ್ಮದ್ ಶರೀಫ್ ಗುಲ್ಫರೋಷ್ (23) ಕೊಲೆಗೈದು, ಪೆಟ್ರೋಲ್ ಹಾಕಿ ಶವ ಸುಟ್ಟು ಹಾಕಿದರು.
ಪ್ರಕರಣದ ಕುರಿತು ಕಾರ್ಯಚರಣೆ ನಡೆಸಿದ ಎಸ್ಪಿ ಅಡ್ಡೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಶಹಾಬಾದ ಉಪಾಧೀಕ್ಷಕರ ಶೀಲವಂತ ಅವರ ನೇತೃತ್ವದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್’ಐ ಶ್ರೀಶೈಲ್ ಅಂಬಾಟಿ, ಸಿಬ್ಬಂದಿಗಳಾದ ಲಾಲಹ್ಮದ್, ಚಂದ್ರಶೇಖರ, ನಾಗೇಂದ್ರ, ರಾಜಕುಮಾರ, ಷಣ್ಮೂಖ, ವೀರಭದ್ರ, ಮಂಜುನಾಥ, ಹುಸೇನ್ ಪಾಶಾ, ಮುಕ್ತುಂ ಪಟೇಲ್, ಅಯ್ಯಣ್ಣ, ಬಲರಾಮ ಅವರ ನೇತೃತ್ವದ ತಂಡವು ನಾಲ್ವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಎರಡು ಬೈಕ್’ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತ ದಾವಲಸಾಬ ಆಸೀಫನ ತಂಗಿಗೆ ಚುಡಾಯಿಸುವದು, ನೋಡುವದು ಮಾತನಾಡಿಸುವದು ಮಾಡುತ್ತಿದ್ದ, ಹಲವು ಬಾರಿ ಬುದ್ದಿವಾದ ಹೇಳಿದರು ಸಹ ಆತನು ಅದೇ ಚಾಳಿ ಮುಂದುವರೆಯಿಸಿದ್ದರಿಂದ ಅದೇ ವೈ ಮನಸ್ಸಿನಿಂದ ಆರೋಪಿತರೆಲ್ಲರೂ ಕೊಲೆ ಮಾಡಿ ತಲೆ ಮೇಲೆ ಪರ್ಸಿಕಲ್ಲಿನಿಂದ ಹೊಡೆದು ಸಾಕ್ಷಿ ಸಿಗದಂತೆ ಪೇಟ್ರೊಲ್ ದಿಂದ ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಈ ಸಂದರ್ಭದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್’ಐ ಶ್ರೀಶೈಲ್ ಅಂಬಾಟಿ ಸೇರಿದಂತೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…
ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…
ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…
ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…
ಕರ್ನಾಟಕ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…