ಕಲಬುರಗಿ: ಯಾವುದೇ ಕಾರಣಕ್ಕೂ ಹೊಸ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯಿದೆ ಜಾರಿಗೆ ತರಲು ಬೀಡುವುದಿಲ್ಲ ಎಂದು ಕೈಗಾರಿಕೊದ್ಯಮಿಗಳಿಗೆ ಮುಖ್ಯ ಮಂತ್ರಿಗಳ ಸಲಹೆಗಾರರಾಗಿರುವ ಶಾಸಕ ಬಿ. ಆರ್ ಪಾಟೀಲ್ ಆಶ್ವಾಸನೆ ನೀಡಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ನೂತನವಾಗಿ ಮುಖ್ಯ ಮಂತ್ರಿಗಳಿಗೆ ಸಲಹೆಗಾರರಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಶಾಸಕ ಬಿ. ಆರ್. ಪಾಟೀಲ ಅವರಿಗೆ ಸಂಸ್ಥೆಯ ಆಡಳಿತ ಮಂಡಳಿಯಿಂದ ಅಭಿನಂದಿಸಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುಡಿದರು.
ಇಲ್ಲಿಯವರೆಗೂ ನಾನು ರೈತರ ಪರವಾಗಿ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ. ಈವಾಗ ಕೈಗಾರಿಕೊದ್ಯಮಗಳು ಹಾಗೂ ವಾಣಿಜ್ಯೊದ್ಯಮಿಗಳ ಸಮಸ್ಯೆಗಳ ಹಾಗೂ ಬೇಡಿಕೆ ಈಡೇರಿಸಲು ಹೋರಾಟ ಮಾಡುವುದಾಗಿ ಭರವಸೆ ಕೊಟ್ಟರು.
ಕೈಗಾರಿಕೊದ್ಯಮಗಳು ಬೇಳೆಯಬೇಕೆಂದರೆ ಮೊದಲು ಕೃಷಿಗೆ ಆದ್ಯತೆ ನೀಡಬೇಕು. ಈಗೀನ ಪರಿಸ್ಥಿತಿಯಲ್ಲಿ ನೀರಿನ ಅಭಾವ ತುಂಬಾ ಎದುರಿಸುತ್ತಿದ್ದೇವೆ ಆದ್ದರಿಂದ ನೀರಿನ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಾಗೃತೆ ವಹಿಸಬೇಕೆಂದು ಹಾಗೂ ಜಾಗತೀಕ ಕೈಗಾರಿಕೆಗಳಿಂದ ಸಣ್ಣ ಕೈಗಾರಿಕೆಗಳು ನಶೀಸಿ ಹೋಗುತ್ತಿರುವದರಿಂದ ಕಳವಳ ವ್ಯಕ್ತ ಪಡಿಸಿದರು.
ಶೀಘ್ರದಲ್ಲಿಯೇ ಕೈಗಾರಿಕೊದ್ಯಮಿಗಳ ನಿಯೋಗವೊಂದನ್ನು ಮುಖ್ಯ ಮಂತ್ರಿಗಳು, ಕೈಗಾರಿಕಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಭೇಟಿಯಾಗಿ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಯ ನಿಗದಿ ಪಡಿಸುವುದಾಗಿ ಭರವಸೆ ನೀಡಿದರು.
ಸಂಸ್ಥೆಯ ಅಧ್ಯಕ್ಷರಾದ ಶಶಿಕಾಂತ ಬಿ. ಪಾಟೀಲ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಬಿ. ಆರ್ ಪಾಟೀಲ ಅವರು ಆಯ್ಕೆಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸದಿದ ಅವರು ಈ ಭಾಗದ ಪ್ರಮುಖ ಸಮಸ್ಯೆಯಾದ ತೊಗರಿ ಬೇಳೆ ಕಾರ್ಖಾನೆಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವ ಕುರಿತು ಕೆ.ಎಸ್.ಎಫ್.ಸಿ. ಸಂಸ್ಥೆಗೆ ನಿರ್ದೇಶಿಸಿ ಬೇಳೆ ಕಾರ್ಖಾನೆ ಪುನಶ್ಚೇತನಗೊಳಿಸಲು ವಿನಂತಿಸಿದರು. ವಾಣಿಜ್ಯ ವ್ಯವಹಾರಕ್ಕಾಗಿ ಕಲಬುರಗಿಯಿಂದ ಲಾತುರವರೆಗೆ ಅಚ್ಚುಕಟ್ಟಾದ ರಸ್ತೆ ನಿರ್ಮಿಸಿಕೊಡಲು ಹಾಗೂ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶಹಮ್ಮಿಕೊಳ್ಳಲುಮನವಿ ಮಾಡಿದರು.
ಈ ಭಾಗದ ಕೈಗಾರಿಕೊದ್ಯಮಿಗಳ ಬೇಡಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಸುವಿಸ್ತಾರವಾಗಿ ಮಾನ್ಯ ಮುಖ್ಯ ಮಂತ್ರಿಗಳ ಸಲಹೆಗಾರರ ಗಮನಕ್ಕೆ ತರುತ್ತಾ ಬೇಡಿಕೆಗಳ ಮನವಿ ಪತ್ರ ಸಲ್ಲಿಸದರು. ಕೈಗಾರಿಕೊದ್ಯಮಿಗಳ ಪರವಾಗಿ ಶ್ರೀಮಂತ ಉದನೂರ, ಉಮಕಾಂತ ನಿಗ್ಗುಡಗಿ, ಸಂತೋಷ ಲಂಗರ್, ಬಸವರಾಜ ಜೋಗುರ, ಪದ್ಮಾಜಿ ಅವರು ಬಿ. ಆರ್ ಪಾಟೀಲ ಅವರ ಜೊತೆಗೆ ಸಂವಾದ ನಡೆಸಿದರು.
ಈ ಸಭೆಯ ವೇದಿಕೆಯಲ್ಲಿ ಸಂಸ್ಥೆಯ ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ,ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಪ್ರಶಾಂತ ಮಾನಕರ, ಮಂಡಳಿಯ ಸದಸ್ಯರಾದ ರವಿಶಂಕರ ಜಮಾದರಖಾನಿ ಉಪಸ್ಥಿತರಿದ್ದರು. ಬಿ. ಆರ್. ಪಾಟೀಲರವರಿಗೆ ಅಕ್ಕಿ ವ್ಯಾಪರಿಗಳ ಸಂಘ, ಕಿರಾಣಾ ಬಜಾರ ವ್ಯಾಪಾರಿಗಳ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ ಹಾಗೂ ಅನೇಕರು ಸನ್ಮಾನಿಸಿದರು. ರವಿಶಂಕರ ಜಮಾದರಖಾನಿ ಕಾರ್ಯಕ್ರಮವನ್ನು ನಿರೂಪಿಸಿದರು. ಗೌರವ ಕಾರ್ಯದರ್ಶಿಗಳಾದ ಮಂಜುನಾಥ ಜೇವರ್ಗಿ ಅವರು ವಂದನಾರ್ಪಣೆ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷರಾದ ರಾಂಕೃಷ್ಣ ಬೋರಾಳಕರ್ ಜಂಟಿ ಕಾರ್ಯದರ್ಶಿಯಾದ ಸಂಗಮೇಶ ಆರ್. ಕಲ್ಯಾಣಿ, ಖಜಾಂಚಿ ಸಿ.ಎ. ಉತ್ತಮ ಬಜಾಜ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಜಗದೀಶ ಕಡಗಂಚಿ, ರವಿಚಂದ್ರ ಕೆ. ಪಾಟೀಲ, ಜಗದೀಶ ಗಾಜರೆ, ಮಹಾದೇವ ತಾವರಗೇರಾ, ಮಹಾದೇವ ವಿ. ಖೇಣಿ, ದಿನೇಶ ಪಾಟೀಲ, ಸಂದೀಪ ಮಿಶ್ರಾ, ಶಿವರಾಜ ಇಂಗೀನಶೆಟ್ಟಿ, ಅಭಿಜೀತ ಪಡಶೆಟ್ಟಿ, ನರೇನ್ ಪಾಟೀಲ, ಸಂಪತ್ ಪಾಟೀಲ ಮತ್ತು ನಿಕಟಪೂರ್ವ ಕಾರ್ಯದರ್ಶಿ ಶರಣಬಸಪ್ಪ ಎಮ್. ಪಪ್ಪ ಹಾಜರಿದ್ದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…