ಬಿಸಿ ಬಿಸಿ ಸುದ್ದಿ

ಸೈಬರ್ ಅಪರಾಧಗಳು  ಮತ್ತು ಮಹಿಳಾ ಸುರಕ್ಷತೆ ಬಗ್ಗೆ ಅರಿವು ಮೂಡಿಸುವದು ಇವತ್ತಿನ ಅಗತ್ಯ

ಕಲಬುರಗಿ: ಇಂದಿನ ಡಿಜಿಟಲ್ ಯುಗದಲ್ಲಿ, ಜೀವನದ ವಿವಿಧ ಕಾರ್ಯಕ್ಷೇತ್ರಗಳಲ್ಲಿನ ಅಂತರಗಳನ್ನು ತುಂಬುವ ಮತ್ತು ಮಾನವ ಸಂಬಂಧಗಳನ್ನು  ವರ್ಧಿಸುವ ಹಾಗೂ ಡಿಜಿಟಲ್ ಹೆಜ್ಜೆಗುರುತುಗಳನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಸೈಬರ್ ವಲಯ ಹಾಗೂ ಸಾಮಾಜಿಕ ಜಾಲತಾಣಗಳಾದಂತಹ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್.. ಕೋಟಿಗಟ್ಟಲೆ ಜನರಿಗೆ ಪ್ರಯೋಜನಕಾರಿಯಾಗಿರುವುದು ಗೊತ್ತಿರುವಂಥದ್ದೇ. ಅಂಕಿ – ಅಂಶಗಳ ಪ್ರಕಾರ ಸುಮಾರು 70% ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಪ್ರತಿನಿತ್ಯವೂ ಉಪಯೋಗಿಸುತ್ತಿರುವದು ಗಮನಾರ್ಹ ಸಂಗತಿ ಎಂದು ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜಿನ ಪ್ರೊ. ಡಾ.ಗೀತಾ ಪಾಟೀಲ್ ಅವರು  ಅಭಿಪ್ರಾಯ ಪಟ್ಟರು.

ಅವರು ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ, ಕಲಬುರಗಿ ಲೋಕಲ್ ಸೆಂಟರ್ ವತಿಯಿಂದ ಆಯೋಜಿಸಿದ್ದ “ಸೈಬರ್  ಅಪರಾಧಗಳು ಹಾಗೂ ಮಹಿಳಾ ಸುರಕ್ಷತೆ ” ಕುರಿತು ಮಾತನಾಡಿದ ತಂತ್ರಜ್ಞಾನದ ಅಭಿವೃದ್ಧಿಯಾದಂತೆ, ಆಧುನಿಕ ಕಂಪ್ಯೂಟರ್ಗಳು, ಕಂಪ್ಯೂಟರ್ ಸಂಬಂಧಿತ ಸಾಧನ-ಸಲಕರಣೆಗಳ ತಾಂತ್ರಿಕ ಸಾಮರ್ಥ್ಯವು, ಸೌಲಭ್ಯದ ದುರ್ಬಳಕೆಗಿರುವ ಮಾಗೋಪಾಯಗಳನ್ನು ಮಾತ್ರವಲ್ಲದೆ ಭೀಕರ ಅಪರಾಧ ಎಸಗುವ ಅವಕಾಶಗಳನ್ನೂ ಸಹ ಒದಗಿಸುತ್ತಿವೆ ಎಂಬುದು ಭಯಹುಟ್ಟಿಸುವ ವಿಷಯ,  ದುರದೃಷ್ಟವಶಾತ್, ಅನೇಕ ಸಂದರ್ಭಗಳಲ್ಲಿ ಅಂತರ್ಜಾಲ ಬ್ರೌಸಿಂಗ್ ವೇಳೆಯಲ್ಲಿ, ಸಾಮಾಜಿಕ ತಾಣಗಳಲ್ಲಿ ಪೋಸ್ಟ್ಗಳನ್ನು ಅಪ್ಲೋಡ್ ಮಾಡುವಾಗ ಅಥವಾ ತೃತೀಯ ಪಕ್ಷಸ್ಥರ ಕಂಪ್ಯೂಟರ್ ಸಿಸ್ಟಂಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿಡುತ್ತಿರುವಾಗ ಯಾವೆಲ್ಲ ಅಪಾಯಗಳಿಗೆ  ಒಡ್ಡಿಕೊಂಡಿದ್ದೇವೆ, ಖಾಸಗಿತನದ ಅತಿಕ್ರಮಣಕ್ಕೆ ಯಾವ ರೀತಿಯಾಗಿ ಅನುವು ಮಾಡಿಕೊಟ್ಟಿದ್ದೇವೆ ಎಂಬುದನ್ನು ಗುರುತಿಸಲು  ಸಾಮಾಜಿಕ ಜಾಲತಾಣಗಳ ಬಳಕೆದಾರರು ವಿಫಲರಾಗುತ್ತಾರೆ, ಅದೇ ವೇಳೆಗೆ, ಬಳಕೆದಾರರ ವಿರುದ್ಧ  ಅಪರಾಧಗಳನ್ನೆವಸಗಲು ಒಂದು ವೇದಿಕೆಯಾಗಿ ದುಷ್ಕರ್ವಿುಗಳು ಸೈಬರ್ ಕ್ಷೇತ್ರವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬೆಲ್ಲ ವಿಷಯಗಳ ಬಗ್ಗೆ ನಾವೆಲ್ಲರೂ ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದು ತಿಳಿಸಿದರು.

ಅವರು ಭಾರತದಲ್ಲಿ ಮಹಿಳೆಯರ ವಿರುದ್ಧ ಗಾಬರಿಹುಟ್ಟಿಸುವ ಪ್ರಮಾಣದಲ್ಲಿ ಸೈಬರ್ ಅಪರಾಧಗಳು ಘಟಿಸುತ್ತಿದ್ದು, ಆನ್ಲೈನ್ ವಲಯದಲ್ಲಿ ಮಹಿಳೆಯೊಬ್ಬಳ ಘನತೆ, ಖಾಸಗಿತನ ಹಾಗೂ ಭದ್ರತೆಗೆ ಭಾರಿ ಅಪಾಯ ಒದಗುವ ಸಾಧ್ಯತೆಗಳು ಕಂಡುಬರುತ್ತಿವೆ. ನಿಂದನೀಯ ಭಾಷೆಯ ಬಳಕೆ, ಮಾನಹಾನಿ ಯತ್ನ,  ದ್ವೇಷಸಾಧನೆಯ ಅಶ್ಲೀಲ ಚಿತ್ರಗಳು ಹಾಗೂ ಮಹಿಳೆಯರನ್ನು ಇತರ ಸ್ವರೂಪಗಳಲ್ಲಿ ಅಸಭ್ಯವಾಗಿ ಬಿಂಬಿಸುವಿಕೆ ಇತ್ಯಾದಿಗಳು ಸೈಬರ್ ಪ್ರಪಂಚದಲ್ಲಿ ಅತಿರೇಕದ ಮಟ್ಟಕ್ಕೇರಿವೆ. ಸೈಬರ್ ಅಪರಾಧಗಳ ಆವರ್ತನೆ ಮತ್ತು ಸಂಕೀರ್ಣತೆಯಲ್ಲಿನ ಹೆಚ್ಚಳವು, ಅಂತರ್ಜಾಲ ಬಳಕೆದಾರರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಹಾಗೂ ಹದಿಹರೆಯದ ಹೆಣ್ಣು ಮಕ್ಕಳಲ್ಲಿ  ಖಿನ್ನತೆ, ಉದ್ವೇಗಗಳನ್ನು  ಮೂಡಿಸುತ್ತಿವೆ,  ಸೈಬರ್ ಮಾಧ್ಯಮದಲ್ಲಿನ ಕಿರುಕುಳದಿಂದಾಗಿ ಮಹಿಳೆಯರು, ಹದಿಹರೆಯದ ಹೆಣ್ಣು ಮಕ್ಕಳು ತಲ್ಲಣಿಸುತ್ತಿದ್ದಾರೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಅಂತರ್ಜಾಲ ಮಾಧ್ಯಮದ ಅತಿವ್ಯಾಪಕತೆ, ಸೈಬರ್ ಅಪರಾಧವನ್ನು ಎಸಗಿಯೂ ಪಾರಾಗಲು ಇರುವ ಅವಕಾಶಗಳು ಸಮಾಜಕ್ಕೆ ಒದಗಿರುವ ಈ ದೊಡ್ಡ ಬೆದರಿಕೆಯ ಹಿಂದಿರುವ ಒಂದು ಕಾರಣವಾಗಿದೆ. ಇಂಥ ಅತಿಕ್ರಮಣ/ನಿಯಮೋಲ್ಲಂಘನೆಯ ಪ್ರಮುಖ ಬಲಿಪಶುಗಳಲ್ಲಿ ಮಹಿಳೆಯರು-ಮಕ್ಕಳು ಸೇರಿದ್ದಾರೆ.  ಇದು ನಿಜಕ್ಕೂ ಗಾಭರಿ ಹುಟ್ಟಿಸುವ ಸಂಗತಿ ಯಾಗಿವೆ,  ಇಂಥ ವಿಕೃತ ಕೃತ್ಯಗಳು ಘಟಿಸಿದಾಗ ತತ್ಕ್ಷಣವೇ ಸಂಬಂಧಿತ ಪ್ರಾಧಿಕಾರದ ಗಮನಕ್ಕೆ ತರುವಂತೆ ಅವರಲ್ಲಿ ಅರಿವು ತುಂಬಬೇಕಿರುವುದು ಈ ಕ್ಷಣದ ಅನಿವಾರ್ಯತೆಯಾಗಿದೆ  ಎಂದು ಹೇಳಿದ ಅವರು  ಸೈಬರ್ ಅಪರಾಧ ಪ್ರಕರಣಗಳಲ್ಲಿ ಕಾನೂನುಕ್ರಮ ಜರುಗಿಸುವುದಕ್ಕೆ ಸಂಬಂಧಿಸಿದಂತೆ ಐಟಿ ಕಾಯ್ದೆಯನ್ನು ಪರಿಷ್ಕರಿಸುವ ಅಗತ್ಯವಿದೆ. ಅಷ್ಟೇ ಅಲ್ಲ, ಇಂಥ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಕಾನೂನುಜಾರಿ ವ್ಯವಸ್ಥೆಯನ್ನು ಸುಸಜ್ಜಿತವಾಗಿಸಬೇಕಿದೆ. ಸೈಬರ್ ದುರಾಚಾರಗಳಿಗೆ ಬಲಿಪಶುವಾಗುವವರ ಸಂಖ್ಯೆಯನ್ನು ತಗ್ಗಿಸಲೆಂದು, ಕಾನೂನು ಮತ್ತು ತಂತ್ರಜ್ಞಾನ ಸಂಬಂಧಿತ ಸವಾಲುಗಳೆಡೆಗೆ ತ್ವರಿತವಾಗಿ ಹಾಗೂ ಪರಿಣಾಮಕಾರಿಯಾಗಿ ಗಮನಹರಿಸುವತ್ತ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ವಿಂಗ್ ಕಮಾಂಡರ್ ಟಿ.ಬಿ.ಎಸ್ ರಾವ್  ಅವರು ಕಾರ್ಯಕ್ರಮದ ಔಚಿತ್ಯ ತೆಯ ಕುರಿತು ಮಾತನಾಡಿದರು.  ಇಂ.ಹನುಮಯ್ಯಾ ಬೇಲೂರೆ ಅತಿಥಿಗಳನ್ನು ಸ್ವಾಗತಿಸಿದರು.ಪ್ರೊಫೆಸರ್ ಶ್ರೀಧರ್ ಪಾಂಡೆ ಅತಿಥಿಗಳನ್ನು ಪರಿಚಯಿಸಿದರು. ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ, ಕಲಬುರಗಿ ಲೋಕಲ್ ಸೆಂಟರ್ ನ ಅಧ್ಯಕ್ಷ ರಾದ ಇಂಜಿನೀಯರ್  ಬಿ. ಎಸ್. ಮೋರೆ ಅವರು ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಇವತ್ತಿನ ಕಾರ್ಯಕ್ರಮ ವಿಶೇಷವಾದದ್ದು, ಸೈಬರ್ ವಲಯದಲ್ಲಿ ಮಹಿಳಾ ಸುರಕ್ಷತೆ ಕುರಿತು ಮಾತನಾಡಲು ಮಹಿಳೆಯೊಬ್ಬರು ನಮ್ಮೊಂದಿಗೆ ಇರುವುದು ಇವತ್ತಿನ ವಿಶೇಷ, ಅವರ ಅಭಿಪ್ರಾಯ ಮಂಡನೆಗೆ ನಮ್ಮ  ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ, ಕಲಬುರಗಿ ಲೋಕಲ್ ಸೆಂಟರ್ ವೇದಿಕೆ ಯಾಗಿರುವುದು ನಮಗೆಲ್ಲ ಹೆಮ್ಮೆ ತಂದಿದೆ ಎಂದು ಹೇಳಿದರು.ಇಂಜಿನೀಯರ್ ಶಿವಪುತ್ರಪ್ಪ ಭಾವಿ  ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಇಂಜಿನೀಯರ್ ಕಾಶಪ್ಪಾ ವಾಂಜರಖೇಡೆ, ಇಂಜಿನೀಯರ್ ಜಿ.ಅರ್ ಮುತ್ತಗಿ, ಇಂಜಿನೀಯರ್ ಬಸವರಾಜ ಪಾಟೀಲ,  ಇನ್ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ ಕಲಬುರಗಿ ಲೋಕಲ್ ಸೆಂಟರ್ ನ ಗೌರವ ಕಾರ್ಯದರ್ಶಿ ಡಾ. ಬಾಬುರಾವ್ ಶೇರಿಕಾರ,  ಇಂಜಿನೀಯರ್ ಎಮ್.ಎಮ್ ಕಾಡಿದಿ, ಡಾ.ಭಾರತಿ ಹರಸೂರ್, ಡಾ.ಅರುಣಕುಮಾರ ಜೀರಗಿ, ಪ್ರೊಫೆಸರ್ ಪವನ್ ರಂಗದಾಳ, ಪ್ರೊಫೆಸರ್ ಚಂದ್ರಶೇಖರ ಭೋಗಲೆ,  ಡಾ.ವೀರೇಶ್ ಮಲ್ಲಾಪೂರ  ಮುಂತಾದವರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಶಿಕ್ಷಕರನ್ನು ಸನ್ಮಾನಿಸಲಾಯಿತು.
emedialine

Recent Posts

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

28 mins ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

3 hours ago

ಶರಣ ಮಾರ್ಗಕ್ಕೆ ನಿಮ್ಮೆಲ್ಲರ ಸಹಾಯ ಸಹಕಾರ ಅಗತ್ಯ: 10ನೇ ವರ್ಷದ ಹೊಸ್ತಿಲಲ್ಲಿ ನಿಂತು ನಿಮ್ಮೊಂದಿಗಿಷ್ಟು

ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…

5 hours ago

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

18 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

18 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

20 hours ago