ರಾಜ್ಯ ಮಟ್ಟದ ಕೋಲಿ ಸಮಾಜದ ಸಮಾವೇಶಕ್ಕೆ ಒಕ್ಕೂರಲಿನ ಬೆಂಬಲ

ಕಲಬುರಗಿ: ಇದೇ 25ರಂದು ನಗರದ ಎನ್.ವಿ.ಮೈದಾನದಲ್ಲಿ ನಡೆಯಲಿರುವ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಮತ್ತು ಮೊಗವೀರ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶಕ್ಕೆ ನಗರದ ವಿವಿಧ ಬಡಾವಣೆಗಳ ಸಮಾಜ ಮುಖಂಡರು ಒಕ್ಕೂರಲಿನ ಬೆಂಬಲ ಸೂಚಿಸಿದರು.

ಕಲ್ಬುರ್ಗಿಯ ಗಂಗಾ ನಗರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಲ್ಲಿ ಬುಧವಾರ ಗಂಗಾ ನಗರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಜೀಣೋದ್ದಾರ ಸಂಘ, ಶ್ರೀ ಮಾತಾ ಮಾಣಿಕೇಶ್ವರಿ ಟ್ರಸ್ಟ್, ಗಂಗಾನಗರದ ಕರ್ನಾಟಕ ಕೋಲಿ ಸೈನ್ಯ, ಗಂಗಾನಗರದ ಅಂಬಿಗರ ಸೇವಾ ದಳ, ಗಂಗಾನಗರದ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಸತ್ಸಂಗ ಸೇವಾ ಸಮಿತಿ, ಮಾಣಿಕೇಶ್ವರಿ ಕಾಲೋನಿಯ ನಿಜಶರಣ ಅಂಬಿಗರ ಚೌಡಯ್ಯ ಸ್ನೇಹಿತರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವಾರು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿ ಇದೇ 25 ರಂದು ನಡೆಯುವ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರನ್ನು ಕರೆದುಕೊಂಡು ಬರಲು ನಿರ್ಣಯ ಕೈಗೊಂಡರು.

ಸಮಾಜದ ಮುಖಂಡರಾದ ಬಸವರಾಜ್ ಹರವಾಳ ಮತ್ತು ರಮೇಶ ನಾಟಿಕರ ಮಾತನಾಡಿ, ಇದೇ 25ರಂದು ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶಕ್ಕೆ ಸಮಾಜದ ಎಲ್ಲಾ ಮುಖಂಡರು ಪಕ್ಷಬೇಧ ಮರೆತು ಭಾಗವಹಿಸಬೇಕು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರ ನೇತೃತ್ವದಲ್ಲಿ ಈ ಸಮಾವೇಶ ನಡೆಯುತ್ತಿದ್ದು, ಇದು ಏಕ ಪಕ್ಷೀಯ ನಿರ್ಣಯವಲ್ಲ, ಕಾಂಗ್ರೆಸ್ ಪಕ್ಷದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕಲಬುರಗಿಗೆ ಬಂದಿರುವುದರಿಂದ ಅವರ ಗಮನಕ್ಕೆ ತರುವ ಉದ್ದೇಶದಿಂದ ಕಮಕನೂರ ಅವರು ತುರ್ತು ಸುದ್ದಿಗೋಷ್ಠಿ ನಡೆಸಿದರು.

ಹೊರತು ಯಾವುದೇ ಬೇರೆ ಉದ್ದೇಶ ಇರಲಿಲ್ಲ ಆ ಸುದ್ದಿಗೋಷ್ಠಿಯಲ್ಲಿ ಅವರು ಸಹ ಬರುವ ದಿನಗಳಲ್ಲಿ ಈ ಸಮಾವೇಶಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸಿ ಸಮಾಜದ ಎಲ್ಲಾ ಮುಖಂಡರ ಆಹ್ವಾನಿಸಿ ಅವರ ಸಲಹೆ ಸೂಚನೆ ಅಭಿಪ್ರಾಯಪಡೆದು ಸಮಾವೇಶ ನಡೆಸಲು ನಿರ್ಣಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದರು. ಆದರೂ ಕೆಲವರು ಅವರ ಉದ್ದೇಶ ತಿಳಿದುಕೊಳ್ಳದೆ ಏಕ ಪಕ್ಷೀಯ ನಿರ್ಣಯವೆಂದು ಇಲ್ಲಸಲ್ಲದ ಪತ್ರಿಕೆಗಳಿಗೆ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ದಯವಿಟ್ಟು ಎಲ್ಲರೂ ಇದೇ 9ರಂದು ನಡೆಯುವ ಪೂರ್ವಭಾವಿ ಸಭೆಗೆ ಭಾಗವಹಿಸಿ ಸಲಹೆ ಸೂಚನೆ ನೀಡಿ ಸಮಾವೇಶ ಯಶಸ್ವಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಸಂತೋಷ ಬೆಣ್ಣೂರ, ನಿಂಗಪ್ಪ ಕುಳಕುಮಟಗಿ ಮಾತನಾಡಿ, ಸಮಾಜದ ಮುಖಂಡರು ಹಾಗೂ ಸಮಾಜ ಬಾಂಧವರು ಎಲ್ಲರೂ ಒಗ್ಗೂಡಿ 25 ರಂದು ನಡೆಯುವ ಸಮಾವೇಶಕ್ಕೆ ಎಲ್ಲರೂ ಭಾಗವಹಿಸಬೇಕು ಅನಗತ್ಯವಾಗಿ ಹೇಳಿಕೆ ನೀಡಿ ಸಮಾಜ ಒಡೆಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ಶಿವಕುಮಾರ್ ಹನುಗುಂಟಿ ಮಾತನಾಡಿ, ತಿಪ್ಪಣ್ಣಪ್ಪ ಕಮಕನೂರ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ದೊಡ್ಡ ಪ್ರಮಾದ ಮಾಡಿಲ್ಲ. ಸಮಾಜ ಮುಖಂಡರನ್ನು ಏಕೆ ಆಹ್ವಾನ ಮಾಡಿಲ್ಲವೆಂದು ಪ್ರಶ್ನೆ ಕೇಳಿದರೆ ಅವರು ಉತ್ತರ ನೀಡುತ್ತಿದ್ದರು. ಆದರೆ ಅವರನ್ನು ಪ್ರಶ್ನೆ ಮಾಡದೆ ಪ್ರತ್ಯೇಕ ಸಭೆ ನಡೆಸಿ ಏಕ ಪಕ್ಷಿಯ ನಿರ್ಣಯವೆಂದು ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸರಿಯಲ್ಲ. ಕಮಕನೂರ ಅವರು ಸಮಾಜದಲ್ಲಿಯೇ ಒಬ್ಬ ಪ್ರತಿಷ್ಠಿತ ನಾಯಕರಾಗಿ, ವಿಧಾನ ಪರಿಷತ್ ಸದಸ್ಯರಾಗಿದ್ದು ಈ ಸಮಾವೇಶ ಸಂಘಟಿಸುವುದರಿಂದ ನಮ್ಮ ಸಮಾಜ ಎಸ್ಟಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಮುಖಂಡರು ಅನ್ಯತಾ ಭಾವಿಸದೆ ಇದೆ 9ರಂದು ನಡೆಯುವ ಪೂರ್ವಭಾವಿ ಸಭೆಗೆ ಭಾಗವಹಿಸಿ ನಿಮ್ಮ ಸಲಹೆ ಸೂಚನೆ ನೀಡಿ ಸಮಾವೇಶ ಯಶಸ್ವಿಗೊಳಿಸಲು ಸಹಕರಿಸಬೇಕು. ಈ ಸಮಾವೇಶದಿಂದ ನಮ್ಮ ಸಮಾಜ ಒಗ್ಗಟ್ಟು ಪ್ರದರ್ಶನ ಮಾಡಿದೆ ಎಂಬ ಸಂದೇಶ ಹೋದರೆ ನಮ್ಮ ಸಮಾಜ ಎಸ್ಟಿಗೆ ಸೇರಲಿದೆ ಮತ್ತು ತಿಪ್ಪಣ್ಣಪ್ಪ ಕಮಕನೂರ ಅವರು ಭವಿಷ್ಯದಲ್ಲಿ ಸಚಿವರಾಗುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ಎಲ್ಲರೂ ಒಗ್ಗೂಡಿ ಸಮಾವೇಶ ಯಶಸ್ವಿಗೊಳಿ ಸಬೇಕೆಂದು ಮನವಿ ಮಾಡಿದರು.

ಅರ್ಜುನ್ ಜಮಾದಾರ್ ಮತ್ತು ಶ್ರೀಕಾಂತ್ ಆಲೂರು ಅವರು ಮಾತನಾಡಿ, 25ರಂದು ನಡೆಯುವ ಸಮಾವೇಶ ಯಶಸ್ವಿಗೊಳಿಸಲು ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಇದೇ 9ರ ಪೂರ್ವಭಾವಿ ಸಭೆಯ ಬಳಿಕ ಜಿಲ್ಲೆಯ ಪ್ರತಿಯೊಂದು ತಾಲೂಕು ಮತ್ತು ಹಳ್ಳಿಗಳಿಗೆ ಹೋಗಿ ಕರಪತ್ರ ಬ್ಯಾನರ್ ಗಳನ್ನು ವಿತರಿಸಿ ಪ್ರಚಾರಪಡಿಸಿ ಸಮಾವೇಶಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಮೃತ ಡಿಗ್ಗಿ ಅವರು ಮಾತನಾಡಿ, ಈ ಸಮಾವೇಶ ಏಕ ಪಕ್ಷೀಯ ನಿರ್ಣಯವಲ್ಲ ಸಮಾಜದ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದವರನ್ನು ಮತ್ತು ಅಸಮಾಧಾನ ಗೊಂಡವರನ್ನು ಮನವೊಲಿಸಿ 9ರಂದು ನಡೆಯುವ ಪೂರ್ವಭಾವಿ ಸಭೆಗೆ ಆಹ್ವಾನಿಸಲಾಗುವುದು ಎಂದರು.

ಸಭೆಯಲ್ಲಿ ಜಗನ್ನಾಥ ಭೀಮನಳ್ಳಿ, ಅರ್ಜುನ ಜಮಾದಾರ, ಅನೀಲ ಎನ್.ಕೂಡಿ, ಸಂತೋಷ ಹಳಿಗೋದಿ, ರಾಯಪ್ಪ ಹೊನಗುಂಟಿ, ರಮೇಶ ಭಾದನಳ್ಳಿ, ಪ್ರಶಾಂತ ನಂದಳ್ಳಿ, ಕೋಲಿ ಸಮಾಜದ ಯುವ ನಾಯಕರಾದ ಪ್ರಕಾಶ ಕಮಕನೂರ, ರಮೇಶ ಫಿರೋಜಾಬಾದ, ಶಿವಕುಮಾರ ಹೊನಗುಂಟಿ, ನಾಗು ಜಮಾದಾರ ಆಜಾದಪುರ, ಬಾಪುಗೌಡ ಮಾಲಿಪಾಟೀಲ, ನಟರಾಜ ಕಟ್ಟಿಮನಿ, ರಾಜೇಶ್ವರ ಅಂಬರಾಯ, ರವಿ ಡೊಂಗರಗಾಂವ, ಬಸವರಾಜ ಹರವಾಳ, ರಮೇಶ ನಾಟಿಕರ, ವಿಜಯಕುಮಾರ್ ಹದಗಲ, ಸಂದೇಶ ಕಮಕನೂರ, ಪ್ರಕಾಶ ಕಮಕನೂರ, ಶರಣು ಎಸ್. ಕವಲಗಿ, ಅಶೋಕ ಬಿದನೂರು, ಮಲ್ಲು ಕೂಡಿ, ಬಾಬಾಸಾಹೇಬ ಸೇರಿದಂತೆ ಸಮಾಜದ ಹಲವಾರು ಮುಖಂಡರು ಭಾಗವಹಿಸಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420