ಕೊಪ್ಪಳ: ವಿಜ್ಞಾನ ಜೀವನದ ಒಂದು ಭಾಗ. ಇದುವೇ ಸತ್ಯ ಉಳಿದುದೆಲ್ಲಾ ಮಿತ್ಯ ಎಂದು ವೈದ್ಯರಾದ ಡಾ.ವಿಶ್ವನಾಥ ನಾಲ್ವಾಡ ಅಭಿಪ್ರಾಯ ವ್ಯಕ್ತ ಪಡಿಸಿದರು.
ಅವರು ನಗರದ ಶ್ರೀಗವಿಸಿದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಯೋಗಾಲಯದಲ್ಲಿ ಸಿ.ಎನ್.ಆರ್ ರಾವ್ ಕ್ಲಬ್ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ‘ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿ ಮಾತನಾಡಿ, ವಿಜ್ಞಾನ ಜೀವನದ ಒಂದು ಭಾಗ. ಇದುವೇ ಸತ್ಯ. ಉಳಿದುದೆಲ್ಲಾ ಮಿತ್ಯ. ಏಕೆಂದರೆ ಪ್ರತಿಯೊಂದು ವಸ್ತು ಹಾಗೂ ವಿಷಯಗಳಲ್ಲಿ ವೈಜ್ಞಾನಿಕ ಅಂಶಗಳು ಇದ್ಧೇ ಇರುತ್ತವೆ ಅವುಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವಂತಾಗಬೇಕು. ಇದರಿಂದ ಸತ್ಯದ ಅರಿವು ಮೂಡಿಬರುತ್ತದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ಮನೋಧರ್ಮವನ್ನು ಬೆಳೆಸುವಂತಹ ಇಂತಹ ‘ವಿಜ್ಞಾನ ವಸ್ತು ಪ್ರದರ್ಶನ’ ಏರ್ಪಡಿಸಲಾಗಿರುವದು ಬಹಳಷ್ಟು ಸೂಕ್ತವೆಂದರು.
ವೇದಿಕೆಯಲ್ಲಿ ಪದವಿ ಪ್ರಾಚಾರ್ಯ ಎಂ.ಎಸ್.ದಾದ್ಮಿ, ಪದವಿ ಪೂರ್ವ ಪ್ರಾಚಾರ್ಯ ಬಿ.ಶ್ರೀನಿವಾಸ, ಕಾಲೇಜಿನ ಸಂಯೋಜಕರಾದ ಪರೀಕ್ಷಿತರಾಜ, ಹಿರಿಯ ಪ್ರಾಧ್ಯಾಪಕ ಸಿ.ವಿ.ಕಲ್ಮಠ ಇದ್ದರು. ಪ್ರಾರ್ಥನೆ ಕುಮಾರಿ ವೃಂದಾ, ಸಿ.ಎನ್.ಆರ್ ರಾವ್ ಕ್ಲಬ್ ಕಾರ್ಯಕ್ರಮಗಳ ರೂಪರೇಶಗಳ ವರದಿ ಮಂಡನೆಯನ್ನು ಉಪನ್ಯಾಸಕ ಪ್ರತಾಪ್, ಸ್ವಾಗತ ಮತ್ತು ಪ್ರಾಸ್ತಾವಿಕ ಉಪನ್ಯಾಸಕ ಡಾ.ವಿರೇಶ, ಅತಿಥಿಗಳ ಪರಿಚಯ ಉಪನ್ಯಾಸಕ ಡಾ.ಪ್ರಕಾಶ ಬಳ್ಳಾರಿ, ನಿರೂಪಣೆ ಉಪನ್ಯಾಸಕಿ ಭವಾನಿ ನೆರವೇರಿಸಿದರು.
ಸಮಾರಂಭದಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಸಂತೋಷ್ ಗೌಡ, ಶ್ರೀಧರ್ ವಾಣಿ, ವಿನಯ್ ಹಿರೇಮಠ, ಉಪನ್ಯಾಸಕಿಯರಾದ ಮಧು ಬಳ್ಳೊಳ್ಳಿ, ಮಂಜುಳಾ ಬೀಡನಾಳ್, ಸವಿತಾ, ಆಶ್ವಿನಿ, ವರ್ಷಾ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಹಾಗೂ ಸಸ್ಯಶಾಸ್ತ್ರ ಈ ಎಲ್ಲ ಹತ್ತು ಹಲವು ವಿಷಯಗಳನ್ನು ಪ್ರಾತ್ಯಕ್ಷಿತೆ ಹಾಗೂ ವಸ್ತುಗಳ ಪ್ರದರ್ಶನ ಮನಸೂರೆಗೊಂಡಿತು.
ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…
ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…
ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…
ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…
ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…
ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…