ಬಿಸಿ ಬಿಸಿ ಸುದ್ದಿ

ಜನಾಂದೋಲನ ರೂಪ ಪಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾ: ಹಬ್ಬದ ಸಡಗರ

ಕಲಬುರಗಿ: ಸಂವಿಧಾನ ಅಂಗೀಕಾರಗೊಂಡು 75 ವರ್ಷ ಪೂರ್ಣಗೊಂಡ ನಿಮಿತ್ಯ ಸಂವಿಧಾನದ ಮಹತ್ವ ಮತ್ತು ಅದರ ಮೂಲ ಆಶಯಗಳನ್ನು ಜನರಿಗೆ ತಿಳಿಸಲು ಕಳೆದ ಜನವರಿ 26 ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಚಾಲನೆ ಪಡೆದ ಸಂವಿಧಾನ ಜಾಗೃತಿ ಜಾಥಾವು ಜಿಲ್ಲೆಯಲ್ಲಿ ಅರಿವಿನ ಜನಾಂದೋಲನ ರೂಪ ಪಡೆಯುತ್ತಿದ್ದು, ಜಾತಿ ಬೇಧವಿಲ್ಲದೆ ಜನರು ಸ್ವಯಂ ಪ್ರೇರಿತರಾಗಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಹಳ್ಳಿಯಲ್ಲಿ ಸಂವಿಧಾನ ಹಬ್ಬದ ಸಡಗರ ಮನೆ ಮಾಡಿದೆ.

ಜಿಲ್ಲೆಯಲ್ಲಿ ಎರಡು ಸ್ತಬ್ದಚಿತ್ರ ವಾಹನಗಳು ಪ್ರತಿನಿತ್ಯ ಪ್ರತ್ಯೇಕ ಮಾರ್ಗದಲ್ಲಿ ನಾಲ್ಕೈದು ಗ್ರಾಮಗಳಲ್ಲಿ ಸಂಚರಿಸಿ ಸಂವಿಧಾನದ ಮಹತ್ವ ಕುರಿತು ಅರಿವು ಮೂಡಿಸುತ್ತಿದೆ. ಪ್ರತಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮ, ತಜ್ಞರಿಂದ ಉಪನ್ಯಾಸ ಆಯೋಜಿಸಲಾಗುತ್ತಿದೆ. ವಿಶೇಷವಾಗಿ ಚಿಕ್ಕ ಮಕ್ಕಳಿಂದಲೆ ಸಭಿಕರಿಗೆ ಸಂವಿಧಾನ ಪೀಠಿಕೆ ಬೋಧಿಸಲಾಗುತ್ತಿದೆ. ಅಂಬೇಡ್ಕರ್ ಜೀವನ ಕುರಿತು ನಾಟಕ ಪ್ರದರ್ಶನವಾಗುತ್ತಿವೆ. ಸಂವಿಧಾನ ಕುರಿತು ರಸಪ್ರಶ್ನೆ, ಪ್ರಬಂಧ, ಭಾಷಣ ಸ್ಪರ್ಧೆ ವಿಭಾಗದಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆ, ಸಂವಿಧಾನ ಓದು ಪುಸ್ತಕ ಹಾಗೂ ಮೂಲಭೂತ ಕರ್ತವ್ಯಗಳ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರ ನಾಯಕರ ವೇಷ ಧರಿಸಿದ ಮಕ್ಕಳು, ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಯುವಕರು, ಸ್ಥಳೀಯ ಜನಪ್ರತಿನಿಧಿಗಳು ಹೀಗೆ ಎಲ್ಲರು ಸಕ್ರೀಯವಾಗಿ ಭಾಗವಹಿಸುತ್ತಿದ್ದಾರೆ.

ಸರ್ವರ ಬಾಳಿಗೆ ಬೆಳಕಾಗಿರುವ ಭಾರತದ ಭಾಗ್ಯ ವಿಧಾತ ಡಾ.ಬಿ.ಆರ್.ಅಂಬೇಡ್ಕರ ಅವರನ್ನು ಹೊತ್ತ ಬಂದ ಸ್ತಬ್ದಚಿತ್ರ ವಾಹನಕ್ಕೆ ಗ್ರಾಮದಲ್ಲಿ ಮಹಿಳೆಯರು ಪೂಜ್ಯನೀಯ ಭಾವದಿಂದ ಕಾಣುತ್ತಿದ್ದಾರೆ. ಸರ್ವರಿಗೂ ಸ್ವಾಭಿಮಾನದ ಬದುಕು ನೀಡಿದ ಮಹಾನ್ ಮಾನವತಾವಾದಿಗೆ ಆರತಿ ಬೆಳಗಿ ಸ್ವಾಗತಿಸುತ್ತಿದ್ದಾರೆ. ಅಲ್ಲಲ್ಲಿ ಸಂವಿಧಾನ ಶಿಲ್ಪಿಗೆ ಹಾಲಿನ ಅಭಿಷೇಕ ಮಾಡಿಯೂ ಭಕ್ತಿ ಭಾವ ಅರ್ಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ದೇವರ ಜಾತ್ರೆ, ಪಲ್ಲಕಿ ಮೆರವಣಿಗೆ ಸಂದರ್ಭದಲ್ಲಿ ನೀರೆರೆಯುವುದನ್ನು ನೋಡಿದ್ದೇವೆ, ಆದರೆ ಇಂದಿಲ್ಲಿ ಗ್ರಾಮಕ್ಕೆ ಆಗಮಿಸಿದ ಜಾಥಾಕ್ಕೂ ಮಹಿಳೆಯರು ನೀರೆರೆದು ಶ್ರೇಷ್ಠ ವಿದ್ವಾಂಸನಿಗೆ ನಮನ ಸಲ್ಲಿಸುತ್ತಿದ್ದನ್ನು ನೋಡಿದರೆ ಖುದ್ದು ಅಂಬೇಡ್ಕರ ಅವರನ್ನೆ ಕಂಡ ಸಂತಸ ಅವರ ಮುಖದಲ್ಲಿ ಕಾಣುತ್ತಿದೆ.

ಕಲಬುರಗಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಎಲ್ಲಾ ಭಾಗೀದಾರರ ಇಲಾಖೆಗಳು ಸಾಂಘಿಕ ಪ್ರಯತ್ನದಿಂದ ಕಾರ್ಯಕ್ರಮ ಸಂಘಟಿಸಿ ಜಿಲ್ಲೆಯ ಜನರಿಗೆ ಸಂವಿಧಾನದ ಪ್ರಸ್ತಾವನೆ, ಬಸವಣ್ಣನವರ ಸಮಾನತೆ ಸಂದೇಶ, ಭಾತೃತ್ವ ಭಾವನೆ ಬಿತ್ತುವ ಕೆಲಸ ಮಾಡುತ್ತಿದೆ. ಸಂವಿಧಾನದ ಮೂಲ ಆಶಯ ಪ್ರತಿಯೊಬ್ಬರಿಗೆ ತಲುಪಬೇಕೆಂಬುದು ಸರ್ಕಾರದ ಮೂಲ ಉದ್ದೇಶವನ್ನು ಜಿಲ್ಲೆಯಲ್ಲಿ ಅಕ್ಷರಸ ಜಾರಿಗೆ ತರಲಾಗುತ್ತಿದೆ.

169 ಗ್ರಾಮದಲ್ಲಿ ಸಂಚಾರ: ಜನವರಿ 26 ರಿಂದ ಫೆಬ್ರವರಿ 23ರ ವರೆಗೆ ಒಟ್ಟು 271 ಗ್ರಾಮದಲ್ಲಿ ಸಂಚಾರದ ಗುರಿ ಹೊಂದಿದ್ದು, ಫೆಬ್ರವರಿ 13ರ ವರೆಗೆ 169 ಗ್ರಾಮದಲ್ಲಿ ಜಾಗೃತಿ ಜಾಥಾ ಸಂಚರಿಸಿದೆ. ಇನ್ನು 102 ಗ್ರಾಮದಲ್ಲಿ ಸಂಚರಿಸಿ ಕೊನೆಯದಾಗಿ ಫೆಬ್ರವರಿ 25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾವೇಶಕ್ಕೆ ಸ್ತಬ್ದಚಿತ್ರಗಳು ಪ್ರಯಾಣಿಸಲಿವೆ.

ಸ್ತಬ್ಧಚಿತ್ರದಲ್ಲಿ ಏನೇನು?: ಸಂವಿಧಾನ ಜಾಗೃತಿ ಜಾಥಾ ಸ್ತಬ್ಧಚಿತ್ರಗಳು ಭಾರತದ ಸಂವಿಧಾನ ಪೀಠಿಕೆ ವಾಚನ, ನ್ಯಾಯ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಕಲ್ಪನೆ, ಬಸವಣ್ಣನವರ ವಚನಗಳು ಮತ್ತು ಭಾರತ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ, ಜಿಲ್ಲೆಯ ಐತಿಹಾಸಿಕ ಸ್ಥಳ, ಕಲೆ, ಸಂಸ್ಕøತಿ ಬಿಂಬಿಸುವುದರ ಜೊತೆಗೆ ಸಾಹಿತ್ಯ ದಿಗ್ಗಜರ ಪರಿಚಯ ಮಾಡಿಕೊಡಲಾಗುತ್ತಿದೆ. ಸುಂದರವಾದ ಸಂವಿಧಾನ ಶಿಲ್ಪಿಯ ಪ್ರತಿಮೆ ಸಹ ಇದರಲ್ಲಿ ಅಳವಡಿಸಿದೆ.

ಜಾಥಾಕ್ಕೆ ಭರ್ಜರಿ ಸ್ವಾಗತ, ಸಾಂಸ್ಕೃತಿಕ ಮೆರಗು: ಪ್ರತಿ ಗ್ರಾಮದಲ್ಲಿ ಜಾಥಾಕ್ಕೆ ಡೊಳ್ಳು, ಹಲಗೆ, ತಮಟೆ ಬಾರಿಸುವ ಮೂಲಕ, ಬೈಕ್ ರ್ಯಾಲಿ, ಸೈಕಲ್ ಜಾಥಾ ಮೂಲಕ ಭರ್ಜರಿ ಸ್ವಾಗತ ನೀಡಲಾಗುತ್ತಿದೆ. ಜೆ.ಸಿ.ಬಿ. ದಿಂದ ಜಾಥಾ ವಾಹನದ ಮೇಲೆ ಪುಷ್ಪ ಮಳೆ ಸುರಿಸಲಾಗುತ್ತಿದೆ. ತಡ ರಾತ್ರಿ ಬರುವ ಜಾಥಾಕ್ಕೆ ಕ್ಯಾಂಡಲ್ ಮಾರ್ಚ್‍ದೊಂದಿಗೆ ಬರಮಾಡಿಕೊಳ್ಳಲಾಗುತ್ತಿದೆ. ಶಾಲಾ ಮಕ್ಕಳ ಕೋಲಾಟ, ಲೇಜಿಮ್ ನೃತ್ಯ, ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಗ್ರಾಮೀಣ ಕಲೆ ಪ್ರದರ್ಶನಕ್ಕೂ ಜಾಥಾ ಮೆರವಣಿಗೆ ವೇದಿಕೆಯಾಗಿ ಮಾರ್ಪಟ್ಟಿದಲ್ಲದೆ ಇದು ಜಾಥಾಕ್ಕೆ ಸಾಂಸ್ಕೃತಿಕ ಮೆರಗು ನೀಡಿದೆ.

ರಂಗೋಲಿಯಲ್ಲಿ ಅರಳಿದ ಅಂಬೇಡ್ಕರ: ಸಂವಿಧಾನ ಜಾಗೃತಿ ಅಂಗವಾಗಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ಕಳೆದ ಫೆ.11 ರಂದು ಕಲಬುರಗಿ ನಗರದಲ್ಲಿ ವಾಕ್‍ಥಾನ್ ಆಯೋಜಿಸಲಾಗಿತ್ತು. ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಇದಕ್ಕೆ ಚಾಲನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಅವರಣ ಮತ್ತು ಕಾರಿಡಾರ್‍ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಕಲಾ ಶಿಕ್ಷಕರಿಂದ ಮೂಡಿಬಂದ ಬಣ್ಣ-ಬಣ್ಣದ ರಂಗೋಲಿಯಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ ಮತ್ತು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅರಳಿದವು. ಇದು ನೋಡುಗರನ್ನು ಆಕರ್ಷಿಸಲು ಯಶಸ್ವಿಯಾಯಿತು.

ಕಲಾವಿದರಿಂದ ಜಾಗೃತಿ: ಕಲಬುರಗಿ ನಗರದಲ್ಲಿ ಮಹಾನಗರ ಪಾಲಿಕೆಯಿಂದ ವಿಶೇಷವಾಗಿ ವಿನ್ಯಾಸ ಮಾಡಿದ ಟ್ಯಾಬ್ಲೊ ವಾಹನ ಜೊತೆಗೆ ಬೀದಿ ನಾಟಕ ಕಲಾವಿದರು ಸಂಚರಿಸಿ ಸಂವಿಧಾನ ಮತ್ತು ಅದರ ಮೂಲಾಶಯ, ಹಕ್ಕು, ಕರ್ತವ್ಯ ಕುರಿತು ಸಾರ್ವಜನಿಕರಲ್ಲಿ ಬೀದಿ ನಾಟಕ, ಸಂಗೀತದ ಮೂಲಕ ಅರಿವು ಮೂಡಿಸುತ್ತಿದ್ದಾರೆ.

ಒಟ್ಟಾರೆಯಾಗಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಪ್ರಜಾ ತಂತ್ರ ವ್ಯವಸ್ಥೆ ಹೊಂದಿರುವ ನಮ್ಮ ಶ್ರೇಷ್ಠ ಸಂವಿಧಾನದ ಮಹತ್ವ ಕುರಿತು ಪ್ರತಿ ಪ್ರಜೆಗೆ ಮನದಟ್ಟು ಮಾಡಲು ಹೊರಟಿರುವ ಸಂವಿಧಾನ ಜಾಗೃತಿ ಜಾಥಾ ಅಭಿಯಾನ ಯಶಸ್ವಿಯತ್ತ ಪಯಣ ಮುಂದುವರೆಸಿದೆ.

emedialine

Recent Posts

ಡೆಂಗ್ಯೂ ,ಝಿಕಾ, ಚಿಕನ್ ಗುನ್ಯಾ ತಡೆಗಟ್ಟಲು ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

  ಕಲಬುರಗಿ : "ಜಿಲ್ಲೆಯಲ್ಲಿ ಡೆಂಗಿ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝಿಕಾ ವೈರಾಣು ಸೋಂಕು, ಚಿಕನ್ ಗುನ್ಯಾ…

22 mins ago

ರಾಮ್ ರಾವ್ ಮಹಾರಾಜರ ಆದರ್ಶ ಮೈಗೂಡಿಸಿಕೊಳ್ಳಿ

ಚಿತ್ತಾಪುರ: ವಿಶ್ವ ರತ್ನ ನಡೆದಾಡುವ ಭಗವಂತ ಬಂಜಾರ ಸಮಾಜದ ಧರ್ಮಗುರುಗಳಾದ ಡಾ,ರಾಮ್ ರಾವ್ ಮಹಾರಾಜರು ಒಬ್ಬ ಮಹಾನ್ ಸರಳ ಸಜ್ಜನಿಕೆಯ…

27 mins ago

ಕಲಾವಿದ ಕಲ್ಪನೆಗಳ ಅಭಿವ್ಯಕ್ತಿಯೇ ಚಿತ್ರಕಲೆ: ಸಂತೋಷ್ ಹೆಗಡೆ

ಬೆಂಗಳೂರು:ಕಲಾವಿದನ ಕಲ್ಪನೆ ಮತ್ತು ಭಾವನೆಗಳ ಅಭಿವ್ಯಕ್ತಿಯೆ ಚಿತ್ರಕಲೆ,ಹಾಗೂ ಸಾಮಾನ್ಯವಾಗಿ ಒಬ್ಬ ಕಲಾವಿದ ಕಲೆಯಲ್ಲಿ ತೊಡಗಿಕೊಳ್ಳುವುದರಿಂದ ಅವರ ಯೋಚನೆ ಮತ್ತು ಭಾವನೆಗಳು…

2 hours ago

ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವುದು ಶ್ಲಾಘನೀಯ

ಕಲಬುರಗಿ: ನಗರದ ಕಲಾಮಂಡಳದಲ್ಲಿ ಜಾÐನದೀಪ ನೃತ್ಯ ಕಲಾಸಂಸ್ಥೆ ರಿ ವತಿಯಿಂದ ಸಾಂಸ್ಕ್ರತಿಕ ಕಲಾಮಹೋತ್ಸ ಮತ್ತು ಎಸ್.ಎಸ್.ಎಲ್.ಸಿ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ…

4 hours ago

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ನಾಗರಾಜ ಭಂಕಲಗಿ ಅವಿರೋಧ ಆಯ್ಕೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ: ಪಟ್ಟಣದ ಶರಣ ಬಸವೇಶ್ವರರ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಚಿತ್ತಾಪುರ ತಾಲೂಕು ಘಟಕದ…

5 hours ago

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

19 hours ago