ಕಲಬುರಗಿ: ಸಪ್ತ ನೇಕಾರ ಸೇವಾ ಕೇಂದ್ರದಲ್ಲಿ ಸದ್ಗುರು ಶ್ರೀದಾಸಿಮಯ್ಯ ಕಾನೂನು ಸಂಸ್ಥೆ ಅಡಿಯಲ್ಲಿ ಮಾದನ ಹಿಪ್ಪರಗಾದ ಆರಾಧ್ಯ ದೈವ ಶ್ರೀ ಶರಣ ಶಿವಲಿಂಗೇಶ್ವರ ಮಹಾರಥೋತ್ಸವ ನಿಮಿತ್ತ ಶರಣೋತ್ಸವ ಕಾರ್ಯಕ್ರಮ ಜರುಗಿತು.
119 ನೇ ಜಾತ್ರಾ ಮಹೋತ್ಸವ ಸಂಜೆ 6 ಗಂಟಗೆ ಜರುಗಲಿದೆ ಎಂದು ತಿಳಿಸಿದರು, ಮೊದಲಿಗೆ, ಕಾನೂನು ಸಂಸ್ಥೆಯ ತಾತ್ಕಾಲಿಕ ಸಂಚಾಲಕ ಜೇ. ವಿನೋದ ಕುಮಾರ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ, ಶರಣ ಶಿವಲಿಂಗೇಶ್ವರ ಪರಮಭಕ್ತರು ಹಾಗೂ ಶ್ರೀ ಚೌಡೇಶ್ವರಿ ಹಣಕಾಸು ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಜೇವೂರ್ ಶಾಂತಮಲಪ್ಪ ಮತ್ತು ಚನ್ನಮಲ್ಲಪ್ಪ ಆಗಮಿಸಿ ಮಾತನಾಡಿ ಶರಣ ಮಹಿಮೆ ಅರಿತು ಕೊಂಡು ಬಾಳಿದರೆ ಜೀವನ ಪಾವನ ವಾಗುತದೆ ಎಂದರು.
ಹಿಂದಿನ ಕಾಲದಲ್ಲಿ ಕರೋನಾ ದಂತೆ ಫೇಲ್ಗ ಬರುತ್ತಿತ್ತು, ಆಗ ಪೂಜೆ ಯಲ್ಲಿ ನಿರತ ಶರಣರ ಪೂಜೆ ಫಲದಿಂದ ಆ ಊರಿಗೆ ಮಹಾಮಾರಿ ರೋಗ ಬರದಂತೆ ತಡೆದು ಪವಾಡ ಮೆರೆದಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಷ್ಟಗಿ ಶಿವಲಿಂಗಪ್ಪಾ ನವರು ಸಂಜೆ ಮಹಾ ಮಹೋತ್ಸವ ಜರಗುತದೆ ಎಲ್ಲರೂ ಆಗಮಿಸಿ ದರ್ಶನ ಪಡೆದು ಪುನೀತ ರಾಗಲು ಕೋರಿದರು. ಕೊನೆಯಲ್ಲಿ ಸತೀಶ ಜಮಖಂಡಿ ಯವರು ವಂದಿಸಿದರು. ಕಾರ್ಯಕ್ರಮದಲ್ಲಿ ಗೀತಾಂಜಲಿ ಮೈನಾಳೆ, ಸುಜಾತಾ ಅಕ್ಕಾ, ಡಾ. ಬಸವರಾಜ ಚನ್ನಾ, ಮ್ಯಾಳಗಿ ಚಂದ್ರಶೇಖರ್, ನಿತ್ಯಾನಂದ ಭಂಡಿ, ಗುರುನಾಥ ಆರೂಢ, ವಿಜಯಕುಮಾರ ತ್ರೀವೇದಿ, ರಾಜಗೋಪಾಲ ಭಂಡಾರಿ ಇತರರು ಉಪಸ್ಥಿತರಿದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…