ಕಲಬುರಗಿ: ಹಲವರ ಮೇಲೆ ಈಡಿ ಧಾಳಿ ನಡೆಸಿ ಅವರಿಗೆ ಬೆದರಿಕೆ ಹಾಕಿ ಪಕ್ಷಕ್ಕೆ ಚುನಾವಣೆ ಬಾಂಡ್ ಖರೀದಿಸಿದ್ದಾರೆ. ಜೊತೆಗೆ ಎಲೆಟ್ರೋಲ್ ಬಾಂಡ್ ಪಡೆದು ದೊಡ್ಡ ಪ್ರಮಾಣದ ಪ್ರಾಜೆಕಟ್ ಗಳನ್ನು ನೀಡುವ ಮೂಲಕ ಮೋದಿ ಅವರು ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಆರೋಪಿಸಿದರು.
ಕಲಬುರಗಿ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲೆಟ್ರೋಲ್ ಬಾಂಡ್ ಹಗರಣ ದೇಶದ ಅತಿದೊಡ್ಡ ಹಗರಣವಾಗಿದ್ದು, ಶನಿವಾರ ಎನ್ ವಿ ಮೈದಾನದಲ್ಲಿ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ಮಾಡುವ ಪಕ್ಷವಾಗಿದೆ ಎಂದು ದುರಿದ್ದು ಹಾಸ್ಯಸ್ಪದ ಹೇಳಿಕೆಯಾಗಿದೆ ಎಂದರು.
ಕಾಂಗ್ರೆಸ್ ಮತ್ತು ಅದರ ಫ್ಯಾಮಿಲಿಗಳು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ ಎಂದು ಹೇಳಿರುವ ಮೋದಿ ಅವರು ಹಿಂದಿನ ಬಿಜೆಪಿ ಸರಕಾರದ ಅಧಿಕಾರದಲ್ಲಿ 40% ಕಮಿಷನ್ ದಂಧೆ ನಡೆಸಿರುವುದು ಮೋದಿ ಅವರು ಮರೆತಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದ ಬಡಜನರಿಗೆ ಗ್ಯಾರಂಟಿ ರೂಪದಲ್ಲಿ ಬಡವರ ದುಡ್ಡನ್ನು ಮರಳಿ ಬಡವರಿಗೆ ನೀಡುವ ಕೆಲಸ ಮಾಡುತ್ತಿದರೇ ಅದನ್ನು ಭ್ರಷ್ಟಾಚಾರ ಎಂದು ಹೇಳುತ್ತಿದ್ದಾರೆ. ಮೋದಿ ಅವರು ಅದಾನಿ ಮತ್ತು ಅಂಬಾನಿದಂತಹ ಫ್ಯಾಮಿಲಿಗಳೊಂದಿಗೆ ನಿಂತಿದ್ದಾರೆ ಕೀಡಿಕಾರಿದರು.
ಬಿಜೆಪಿಯಿಂದ ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ: ಕಳೇದ ಲೋಕಸಭೆಯಲ್ಲಿ ರಾಜ್ಯದಿಂದ 25 ಎಂಪಿಗಳನ್ನು ಗೆದ್ದಿದರು. ಆದರೂ ಮೋದಿ ಅವರು ರಾಜ್ಯಕ್ಕೆ ಕೊಟ್ಟಿದ್ದು ಶೂನ್ಯ. ಈ ಬಾರಿ ಕಲಬುರಗಿಯಿಂದಲ್ಲೇ ಲೋಕಸಭೆ ಚುನಾವಣೆ ಪ್ರಾಚಾರಕ್ಕೆ ಚಾಲನೆ ನೀಡಿರುವ ಮೋದಿ ಅವರು ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ್ಕೆ ಅವರ ಕುಡುಗೆ ಏನು ಎಂಬುದು ಹೇಳಬೇಕಿತ್ತು. 11 ವರ್ಷದ ಆಡಳಿತ ನಡೆಸಿರುವ ಬಿಜೆಪಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದು ಉತ್ತಮವಾದ ಸಂಸ್ಥೆ ತೆರೆಯಲು ಸಾಧ್ಯವಾಗಿಲ್ಲ. ಒಂದು ಅಭಿವೃದ್ಧಿ ಕೆಲಸಕ್ಕೆ ಶಿಲಾನ್ಯಾಸ ಮಾಡಲು ಸಾಧ್ಯವಾಗಿಲ್ಲ. ಕನಿಷ್ಠ ಪಕ್ಷ ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿ ಜಿಲ್ಲೆಯ ಒಬ್ಬರನ್ನು ಸಚಿವರಾಗಿ ಮಾಡಲಿಲ್ಲ. ಬಿಜೆಪಿಯವರಿಗೆ ಈ ಭಾಗದ ಜನರನ್ನು ಕಂಡರೆ ಅಗಲ್ಲ. ಅಸುಹೆ ಪಡುತ್ತಾರೆ ಎಂದು ದುರಿದರು.
ಬಿಜೆಪಿಯಿಂದ ಕಲಬುರಗಿಗೆ ಮಲತಾಯಿ ಧೋರಣೆ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ಬಗ್ಗೆ ಬಿಜೆಪಿ ಮತ್ತು ನರೇಂದ್ರ ಮೋದಿಗೆ ಸಾಕಷ್ಟು ಅಸುಹೆ ಇದೆ. ಐದು ವರ್ಷ ಲೋಕಸಭಾ ಸದಸ್ಯರಾಗಿರುವ ಡಾ. ಉಮೇಶ್ ಜಾಧವ್ ಹೊಸ ಅಭ್ಯರ್ಥಿಯಂತೆ ಕಾರ್ಯಕ್ರಮದಲ್ಲಿ ಜನರಿಗೆ ಪರಿಚಯಿಸಿಕೊಟ್ಟಿದ್ದು ಒಳೆಯದಾಯಿತು. ಏಕೆಂದರೆ ಅವರ ಸಾಧನೆ ಶೂನ್ಯಾಗಿರುವುದರಿಂದ ಪರಿಚಯಿಸುವ ಅಗತ್ಯವಿತು ಎಂದರು.
ಜಾಧವ್ ಅವರು ಐದು ವರ್ಷಗಳ ವರೆಗೆ ಈ ಭಾಗದ ಸಮಸ್ಯೆಯನ್ನು ಸಂಬಂಧ ಪಟ್ಟ ಇಲಾಖೆಯ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಮನವಿ ಕೋಡುವುದರಲ್ಲಿ ಕಳೆದಿದ್ದಾರೆ. ಜನಪ್ರತಿನಿಧಿಯಾಗಿ ಜನರ ಕೆಲಸ ಮಾಡಿಸಿಕೊಡುವುದು ಅವರ ದಾಯಿತ್ವವಾಗಿದೆ. ಅದನ್ನು ಅವರು ಮಾಡಿಲ್ಲ ಎಂದರು.
ಮೋದಿ ಪತ್ರಿಕಾಗೋಷ್ಠಿ ಏಕೆ ಮಾಡಿಲ್ಲ: ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಿಯಾದವರು ಪತ್ರಿಕಾ ಗೋಷ್ಠಿಗಳು ಮಾಡುವುದು ಸಂಪ್ರದಾಯ. ಆದರೆ 10 ವರ್ಷಗಳು ಕಳೆದರು ಮೋದಿ ಅವರಿಂದ ಒಂದೇ ಒಂದು ಪತ್ರಿಕಾ ಗೋಷ್ಠಿ ಅಗಿಲ್ಲ. ಈ ಬಗ್ಗೆ ಮಾಧ್ಯಮಗಳು ಪ್ರಶ್ನೆನೇ ಮಾಡಲ್ಲ. ವಿರೋಧ ಪಕ್ಷಗಳಿಗೆ ಮಾತ್ರ ಪ್ರಶ್ನೆಸುವುದು ಮಾಧ್ಯಮಗಳ ಕೆಲಸವಾಗಿದೆ. ಮಾಧ್ಯಮ ಸಂವಿಧಾನದ ನಾಲ್ಕನೇ ಅಂಗ ಎಂದು ಹೇಳಲಾಗುತ್ತಿದೆ. ಮೋದಿ ಅವರು ಡಿಕ್ಟೆಟರ್ ಶೀಪ್ ನಡೆಸುತ್ತಿದ್ದಾರೆ. ಅವರಿಗೆ ಪ್ರಶ್ನೆ ಮಾಡುವಂತಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಮೋದಿ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗದೇವ್ ಗುತ್ತೇದಾರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಸುಭಾಷ ರಾಠೋಡ್ ಸೇರಿದಂತೆ ಹಲವರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…