BRIDGETOWN, BARBADOS - AUGUST 29: Shreyanka Patil of Guyana Amazon Warriors during a portrait session at Radisson Aquatica Resort in Bridgetown, Barbados on August 29, 2023. (Photo by Randy Brooks - CPL T20/CPL T20 via Getty Images)
ಕಲಬುರಗಿ; ಜಿಲ್ಲೆಯ ತಮ್ಮ ಮತಕ್ಷೇತ್ರವಾಗಿರುವ ಜೇವರ್ಗಿಯ ಕೋಳಕೂರು ಮೂಲದ ಶ್ರೇಯಂಕ್ ಪಾಟೀಲ್ ಇವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾಡುತ್ತಿರುವ ಸಾಧನೆ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೋಳಕೂರಿನ ಹಿರಿಯ ಮುಖಂಡರಾದಂತಹ ಹಾಗೂ ವಕೀಲರಾದಂತಹ ಅಮೃತಗೌಡ ಪಾಟೀಲರ ಮೊಮ್ಮಗಳಾದ ಶ್ರೇಯಾಂಕಳ ಸಾಧನೆ ಅಪ್ರತಿಮವಾಗಿದೆ. ಇವರು ಆರ್ಸಿಬಿ ತಂಡದಲ್ಲಿ ಉತ್ತಮ ಆಟ ಪ್ರದರ್ಶನ ಮಾಡುತ್ತ ದೇಶಕ್ಕೇ ಕೀರ್ತಿ ತಂದಿದ್ದಾರೆ.
ಆರ್ಸಿಬಿ ಬೆಂಗಳೂರು ತಂಡ ಹಾಗೂ ಐಪಿಎಲ್ನಲ್ಲಿಯೂ ಮತ್ತು ದೇಶದ ಮಹಿಳಾ ಕ್ರಿಕೆಟ್ ತಂಡದಲ್ಲಿಯೂ ಶ್ರೇಯಾಂಕ್ ಪಾಟೀಲ್ ಉತ್ತಮ ಪ್ರದರ್ಶನ ನೀಡುತ್ತ ದೇಶದ ಗಮನ ಸೆಳೆಯುತ್ತಿರೋದು ಖುಷಿಯ ಸಂಗತಿಯಾಗಿದೆ.
ಶ್ರೇಯಾಂಕ್ ಪಾಟೀಲರ ಈ ಸಾದನೆ ಜೇವರ್ಗಿ ಜನತೆಗೆ ಅಷ್ಟೇ ಅಲ್ಲ, ಇಡೀ ರಾಜ್ಯಕ್ಕೇ, ಇಡೀದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಶ್ರೇಯಾಂಕ್ ಅವರ ತಂದೆ ರಾಜೇಶ ಪಾಟೀಲ್, ಸಹೋದರ ಆದರ್ಶ ಪಾಟೀಲ್ ಇವರೆಲ್ಲರೂ ಕ್ರಿಕೆಟ್ ಆಟಗಾರರಾಗಿದ್ದಾರೆ. ಬಹಳ ವರ್ಷದಿಂದ ಬೆಂಗಳೂರಲ್ಲಿದ್ದರೂ ಕೋಳಕೂರು ಮರೆತಿಲ್ಲ, ಹಾಗೇ ತಮ್ಮ ನಂಟು ಮುಂದುವರಿಸಿರೋದು ಖುಷಿಯ ಸಂಗತಿಯಾಗಿದೆ.
ಕೋಳಕೂರ್ ಪಾಟೀಲರ ಕುಟುಂಬದ ಕ್ರಿಕೆಟ್ ಪ್ರೇಮ ಮೆಚ್ಚುವಂತಹದ್ದಾಗಿದೆ. ಬರುವ ದಿನಗಳಲ್ಲಿ ಶ್ರೇಯಾಂಕ್ಳ ಸಾದನೆ ಮುಗಿಲೆತ್ತರಕ್ಕೇರಲಿ, ಜೇವರ್ಗಿಯ ಕೀರ್ತಿ, ಜೊತೆಗೇ ರಾಜ್ಯ, ದೇಶದ ಕೀರ್ತಿಯೂ ಜಗದಗಲ, ಮುಗಿಲಗಲ ಪಸರಿಸುವಂತಾಗಲಿ ಎಂದು ಕೆಕೆಆರ್ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಶುಭ ಹಾರೈಸಿದ್ದಾರೆ.
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…
ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…
ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…
ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…
ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…
ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…