ಬಿಸಿ ಬಿಸಿ ಸುದ್ದಿ

ಕೋಳ್ಕೂರ್‌ ಕುವರಿ ಶ್ರೇಯಾಂಕ್‌ ಪಾಟೀಲ್‌ ಕ್ರಿಕೆಟ್‌ ಕ್ರೀಡೆಯಲ್ಲಿನ ಸಾಧನೆಗೆ ಶಾಸಕ ಡಾ. ಅಜಯ್‌ ಸಿಂಗ್‌ ಸಂತಸ

  • ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ಜೇವರ್ಗಿ ಕೀರ್ತಿ ಪತಾಕೆ ಹಾರಿಸಲಿ ಎಂದು ಶ್ರೇಯಾಂಕಳಿಗೆ ಶುಭ ಹಾರೈಕೆ

ಕಲಬುರಗಿ; ಜಿಲ್ಲೆಯ ತಮ್ಮ ಮತಕ್ಷೇತ್ರವಾಗಿರುವ ಜೇವರ್ಗಿಯ ಕೋಳಕೂರು ಮೂಲದ ಶ್ರೇಯಂಕ್‌ ಪಾಟೀಲ್‌ ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡುತ್ತಿರುವ ಸಾಧನೆ ಬಗ್ಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಸಂತಸ ವ್ಯಕ್ತಪಡಿಸಿದ್ದಾರೆ.

ಕೋಳಕೂರಿನ ಹಿರಿಯ ಮುಖಂಡರಾದಂತಹ ಹಾಗೂ ವಕೀಲರಾದಂತಹ ಅಮೃತಗೌಡ ಪಾಟೀಲರ ಮೊಮ್ಮಗಳಾದ ಶ್ರೇಯಾಂಕಳ ಸಾಧನೆ ಅಪ್ರತಿಮವಾಗಿದೆ. ಇವರು ಆರ್‌ಸಿಬಿ ತಂಡದಲ್ಲಿ ಉತ್ತಮ ಆಟ ಪ್ರದರ್ಶನ ಮಾಡುತ್ತ ದೇಶಕ್ಕೇ ಕೀರ್ತಿ ತಂದಿದ್ದಾರೆ.

ಆರ್‌ಸಿಬಿ ಬೆಂಗಳೂರು ತಂಡ ಹಾಗೂ ಐಪಿಎಲ್‌ನಲ್ಲಿಯೂ ಮತ್ತು ದೇಶದ ಮಹಿಳಾ ಕ್ರಿಕೆಟ್‌ ತಂಡದಲ್ಲಿಯೂ ಶ್ರೇಯಾಂಕ್‌ ಪಾಟೀಲ್‌ ಉತ್ತಮ ಪ್ರದರ್ಶನ ನೀಡುತ್ತ ದೇಶದ ಗಮನ ಸೆಳೆಯುತ್ತಿರೋದು ಖುಷಿಯ ಸಂಗತಿಯಾಗಿದೆ.

ಶ್ರೇಯಾಂಕ್‌ ಪಾಟೀಲರ ಈ ಸಾದನೆ ಜೇವರ್ಗಿ ಜನತೆಗೆ ಅಷ್ಟೇ ಅಲ್ಲ, ಇಡೀ ರಾಜ್ಯಕ್ಕೇ, ಇಡೀದೇಶಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಶ್ರೇಯಾಂಕ್‌ ಅವರ ತಂದೆ ರಾಜೇಶ ಪಾಟೀಲ್‌, ಸಹೋದರ ಆದರ್ಶ ಪಾಟೀಲ್‌ ಇವರೆಲ್ಲರೂ ಕ್ರಿಕೆಟ್‌ ಆಟಗಾರರಾಗಿದ್ದಾರೆ. ಬಹಳ ವರ್ಷದಿಂದ ಬೆಂಗಳೂರಲ್ಲಿದ್ದರೂ ಕೋಳಕೂರು ಮರೆತಿಲ್ಲ, ಹಾಗೇ ತಮ್ಮ ನಂಟು ಮುಂದುವರಿಸಿರೋದು ಖುಷಿಯ ಸಂಗತಿಯಾಗಿದೆ.

ಕೋಳಕೂರ್‌ ಪಾಟೀಲರ ಕುಟುಂಬದ ಕ್ರಿಕೆಟ್‌ ಪ್ರೇಮ ಮೆಚ್ಚುವಂತಹದ್ದಾಗಿದೆ. ಬರುವ ದಿನಗಳಲ್ಲಿ ಶ್ರೇಯಾಂಕ್‌ಳ ಸಾದನೆ ಮುಗಿಲೆತ್ತರಕ್ಕೇರಲಿ, ಜೇವರ್ಗಿಯ ಕೀರ್ತಿ, ಜೊತೆಗೇ ರಾಜ್ಯ, ದೇಶದ ಕೀರ್ತಿಯೂ ಜಗದಗಲ, ಮುಗಿಲಗಲ ಪಸರಿಸುವಂತಾಗಲಿ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್‌ ಸಿಂಗ್‌ ಶುಭ ಹಾರೈಸಿದ್ದಾರೆ.

emedialine

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

34 mins ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

40 mins ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

43 mins ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

48 mins ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

51 mins ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

58 mins ago