ಕಲಬುರಗಿ; ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮಾರ್ಚ 11ರಿಂದ ಮಾರ್ಚ 22ರ ವರೆಗೆ ಹಮ್ಮಿಕೊಂಡ ಗದುಗಿನ ಪಂಚಾಕ್ಷರಿ ಗವಾಯಿಗಳ ಪುರಾಣ ಮುಕ್ತಾಯ ಸಮಾರಂಭದಲ್ಲಿ ಶ್ರೀ ಷಟಸ್ಥಲ ಬ್ರಹ್ಮಿ ಶ್ರೀ ಶಾಂತಸೋಮನಾಥ ಶಿವಾಚಾರ್ಯರಿಗೆ “ಟೇಂಗಳಿ ಅಂಡಗಿ ಪ್ರತಿಷ್ಠಾನ” ವತಿಯಿಂದ ಕನ್ನಡಾಂಬೆ ತಾಯಿ ಭುವನೇಶ್ವರಿ ಭಾವಚಿತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ನಿರಂತರ 11ದಿನಗಳ ಕಾಲ ಸಾಯಂಕಾಲ ಪುರಾಣ ಪ್ರವಚನ ನೇಗಿಲಯೋಗಿಗಳಿಗೆ ಸನ್ಮಾನ ಜೊತೆಗೆ ಮಕ್ಕಳಿಗೆ ಪ್ರೇರಣಾದಾಯಕವಾಗಿ ವಚನ ಪಠಣ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಅನೇಕ ಮಕ್ಕಳಿಗೆ ಲಿಂಗೈಕ್ಯ ಶಿವಶರಣಪ್ಪ ಅಂಡಗಿ ಅವರ ಸ್ಮರಣಾರ್ಥ ಕನ್ನಡದ ಅಂಕಿಗಳಿಂದ ಮುದ್ರಿಸಿರುವ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2024ನೇ ಸಾಲಿನ ದಿನದರ್ಶಿಕೆ ಕೊಟ್ಟು ಮಕ್ಕಳಿಗೆ ಶ್ರೀಗಳಿಂದ ಆಶಿರ್ವದಿಸಲಾಯಿತು. ಏಳೂರು ಸೀಮೆಯ ತಾಯಿ ದುರ್ಗಾದೇವಿ ಹಾಗು ಶ್ರೀ ಭೀಮೇಶ್ವರ ಸ್ಮರಣೆಯಲ್ಲಿ ಮುತ್ತೈದೆ ತಾಯಂದರಿಗೆ ಉಡಿ ತುಂಬುವ ಕಾರ್ಯಕ್ರಮ, ಜನಜಾಗೃತಿ ಪಾದಯಾತ್ರೆ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಶಾಂತೇಶ್ವರ ಮಠದ ಪೂಜ್ಯಶ್ರೀಗಳ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಿದವು.
ವಿರೇಶ ಶಾಸ್ತ್ರಿಗಳು ಮಲಕೂಡ ಪುರಾಣ ಪ್ರವಚನ ನಡೆಸಿಕೊಟ್ಟರು, ಶಿವಕುಮಾರ ಪಾಟೀಲ ಬೆಟ್ಟಜೇವರ್ಗಿ ಸಂಗೀತ ಸೇವೆ, ಮೌನೇಶ ವಿಶ್ವಕರ್ಮ ತಬಲಾ ಸೇವೆ ನೀಡಿದರು. ವಿಶ್ವನಾಥ ಬಾಳದೆ ಹಾಗು ಉಮೇಶ ತುಪ್ಪದ ಅವರಿಂದ ಜನಪದ ಹಾಗು ತತ್ವಪದಗಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಸನ್ಮಾನ ಸಮಾರಂಭದಲ್ಲಿ ”ಟೇಂಗಳಿ ಅಂಡಗಿ ಪ್ರತಿಷ್ಠಾನ”ದ ಅಧ್ಯಕ್ಷ ಶಿವರಾಜ ಅಂಡಗಿ, ಹಿರಿಯರಾದ ಶರಣಪ್ಪ , ಚಂದ್ರಶೇಖರ ಮಂಗದ, ವಿಜಯಕುಮಾರ ತುಪ್ಪದ, ಭೀಮಾಶಂಕರ ಅಂಕಲಗಿ, ಎಂ.ಎನ್.ಸುಗಂಧಿ, ಡಾ. ವಿವೇಕಾನಂದ ಬುಳ್ಳಾ, ವಿಶ್ವನಾಥ ತೊಟ್ನಳ್ಳಿ, ಗುಂಡಪ್ಪ ಪಟೇದ, ರಾಜು ಪಟೇದ, ನಾಗರಾಜ ಮಹಾಗಾಂವ, ಬಸವರಾಜ ಘಂಟಿ, ಬಸವರಾಜ ಬೈರಿ, ಸಂಗಮೇಶ ತುಪ್ಪದ, ಉದಯಕುಮಾರ ಪಟ್ಟೇದ, ಸಿದ್ಧಣ್ಣ ಹೊಸಹಳ್ಳಿ, ಸಂಗನಬಸಪ್ಪ ಬೊಧನಮಠ, ರೇವಶೆಟ್ಟಿ ತುಪ್ಪದ, ಪವಿತ್ರಾ ಪಾಟೀಲ, ಉಮಾದೇವಿ ಚೇಂಗಟಿ, ನಾಗರಾಜ ಪಟ್ಟೇದ, ವಿಶ್ವನಾಥ ಬಾಳದೆ, ನಾಗಾರಾಜ ಹೆಬ್ಬಾಳ, ಹಾಗೂ ಗ್ರಾಮದ ನೂರಾರು ಪುರುಷರು, ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಲಬುರಗಿ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್ ನಾಗಶ್ರೀ ಅವರ ನೇತೃತ್ವದಲ್ಲಿ ಗುಲ್ಬರ್ಗ ನ್ಯಾಯವಾದಿಗಳ ಸಂಘದಲ್ಲಿ ಇಂದು ಬಸವ…
ಕಲಬುರಗಿ: ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆ ವತಿಯಿಂದ ಮಹಿಳಾ ವಸತಿ ನಿಲಯದಲ್ಲಿ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮನ…
ಕಲಬುರಗಿ: ನಗರದಲ್ಲಿ ಆಜಾತ ಶತ್ರು, ಮಾಜಿ ಸಚಿವರು, ಮಾದಿಗ ಸಮಾಜದ ಹಿರಿಯ ಮುಂಖಡರಾದ ದಿ. ಕೆ. ಬಿ. ಶಾಣ್ಣಪಾ ಅವರ…
ಚಿತ್ತಾಪುರ: ಅಣ್ಣಾ ಬಸವಣ್ಣನವರು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು. ಪಟ್ಟಣದ ಕಾಂಗ್ರೆಸ್…
ಕಲಬುರಗಿ: ನಗರದ ಹಿರಾಪುರ ಬಡಾವಣೆಯಲ್ಲಿ ಶುಕ್ರವಾರ ವಿಶ್ವಗುರು ಸಾಂಸ್ಕೃತಿಕ ನಾಯಕ ಬಸವಣ್ಣನವರ 891ನೇ ಜಯಂತಿ ಪ್ರಯುಕ್ತವಾಗಿ ಅಖಿಲ ಕರ್ನಾಟಕ ಹೆಳವ…
ಕಲಬುರಗಿ: 891ನೇ ಬಸವ ಜಯಂತಿ ನಿಮಿತ್ತವಾಗಿ ದಿವ್ಯಾಂಗರ ಕಲ್ಯಾಣಕ್ಕಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆಯಾದ ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲದ…