ಟೇಂಗಳಿ ಶ್ರೀಗಳಿಗೆ ಗೌರವ ಸನ್ಮಾನ; ಗದುಗಿನ ಪಂಚಾಕ್ಷರಿ ಗವಾಯಿಗಳ ಪುರಾಣ ಮುಕ್ತಾಯ 

0
162

ಕಲಬುರಗಿ; ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದ ಶಾಂತೇಶ್ವರ ಹಿರೇಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತೋತ್ಸವ ನಿಮಿತ್ಯ ಮಾರ್ಚ 11ರಿಂದ ಮಾರ್ಚ 22ರ ವರೆಗೆ ಹಮ್ಮಿಕೊಂಡ ಗದುಗಿನ ಪಂಚಾಕ್ಷರಿ ಗವಾಯಿಗಳ ಪುರಾಣ ಮುಕ್ತಾಯ ಸಮಾರಂಭದಲ್ಲಿ ಶ್ರೀ ಷಟಸ್ಥಲ ಬ್ರಹ್ಮಿ ಶ್ರೀ ಶಾಂತಸೋಮನಾಥ ಶಿವಾಚಾರ್ಯರಿಗೆ “ಟೇಂಗಳಿ ಅಂಡಗಿ ಪ್ರತಿಷ್ಠಾನ” ವತಿಯಿಂದ ಕನ್ನಡಾಂಬೆ ತಾಯಿ ಭುವನೇಶ್ವರಿ ಭಾವಚಿತ್ರ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ನಿರಂತರ 11ದಿನಗಳ ಕಾಲ ಸಾಯಂಕಾಲ ಪುರಾಣ ಪ್ರವಚನ ನೇಗಿಲಯೋಗಿಗಳಿಗೆ ಸನ್ಮಾನ ಜೊತೆಗೆ ಮಕ್ಕಳಿಗೆ ಪ್ರೇರಣಾದಾಯಕವಾಗಿ ವಚನ ಪಠಣ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಅನೇಕ ಮಕ್ಕಳಿಗೆ ಲಿಂಗೈಕ್ಯ ಶಿವಶರಣಪ್ಪ ಅಂಡಗಿ ಅವರ ಸ್ಮರಣಾರ್ಥ ಕನ್ನಡದ ಅಂಕಿಗಳಿಂದ ಮುದ್ರಿಸಿರುವ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 2024ನೇ ಸಾಲಿನ ದಿನದರ್ಶಿಕೆ ಕೊಟ್ಟು ಮಕ್ಕಳಿಗೆ ಶ್ರೀಗಳಿಂದ ಆಶಿರ್ವದಿಸಲಾಯಿತು. ಏಳೂರು ಸೀಮೆಯ ತಾಯಿ ದುರ್ಗಾದೇವಿ ಹಾಗು ಶ್ರೀ ಭೀಮೇಶ್ವರ ಸ್ಮರಣೆಯಲ್ಲಿ ಮುತ್ತೈದೆ ತಾಯಂದರಿಗೆ ಉಡಿ ತುಂಬುವ ಕಾರ್ಯಕ್ರಮ, ಜನಜಾಗೃತಿ ಪಾದಯಾತ್ರೆ ಹೀಗೆ ಹತ್ತು ಹಲವಾರು ಕಾರ್ಯಕ್ರಮ ಶಾಂತೇಶ್ವರ ಮಠದ ಪೂಜ್ಯಶ್ರೀಗಳ ಸಾನಿಧ್ಯದಲ್ಲಿ ವಿಜೃಂಭಣೆಯಿಂದ ಜರುಗಿದವು.

Contact Your\'s Advertisement; 9902492681

ವಿರೇಶ ಶಾಸ್ತ್ರಿಗಳು ಮಲಕೂಡ ಪುರಾಣ ಪ್ರವಚನ ನಡೆಸಿಕೊಟ್ಟರು, ಶಿವಕುಮಾರ ಪಾಟೀಲ ಬೆಟ್ಟಜೇವರ್ಗಿ ಸಂಗೀತ ಸೇವೆ, ಮೌನೇಶ ವಿಶ್ವಕರ್ಮ ತಬಲಾ ಸೇವೆ ನೀಡಿದರು. ವಿಶ್ವನಾಥ ಬಾಳದೆ ಹಾಗು ಉಮೇಶ ತುಪ್ಪದ ಅವರಿಂದ ಜನಪದ ಹಾಗು ತತ್ವಪದಗಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸನ್ಮಾನ ಸಮಾರಂಭದಲ್ಲಿ ”ಟೇಂಗಳಿ ಅಂಡಗಿ ಪ್ರತಿಷ್ಠಾನ”ದ ಅಧ್ಯಕ್ಷ ಶಿವರಾಜ ಅಂಡಗಿ, ಹಿರಿಯರಾದ ಶರಣಪ್ಪ , ಚಂದ್ರಶೇಖರ ಮಂಗದ, ವಿಜಯಕುಮಾರ ತುಪ್ಪದ, ಭೀಮಾಶಂಕರ ಅಂಕಲಗಿ, ಎಂ.ಎನ್.ಸುಗಂಧಿ, ಡಾ. ವಿವೇಕಾನಂದ ಬುಳ್ಳಾ, ವಿಶ್ವನಾಥ ತೊಟ್ನಳ್ಳಿ, ಗುಂಡಪ್ಪ ಪಟೇದ, ರಾಜು ಪಟೇದ, ನಾಗರಾಜ ಮಹಾಗಾಂವ, ಬಸವರಾಜ ಘಂಟಿ, ಬಸವರಾಜ ಬೈರಿ, ಸಂಗಮೇಶ ತುಪ್ಪದ, ಉದಯಕುಮಾರ ಪಟ್ಟೇದ, ಸಿದ್ಧಣ್ಣ ಹೊಸಹಳ್ಳಿ, ಸಂಗನಬಸಪ್ಪ ಬೊಧನಮಠ, ರೇವಶೆಟ್ಟಿ ತುಪ್ಪದ, ಪವಿತ್ರಾ ಪಾಟೀಲ, ಉಮಾದೇವಿ ಚೇಂಗಟಿ, ನಾಗರಾಜ ಪಟ್ಟೇದ, ವಿಶ್ವನಾಥ ಬಾಳದೆ, ನಾಗಾರಾಜ ಹೆಬ್ಬಾಳ, ಹಾಗೂ ಗ್ರಾಮದ ನೂರಾರು ಪುರುಷರು, ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here