ಹಳಕರ್ಟಿ ರಾಜಶೇಖರ ಶ್ರೀಗಳ ಪಟ್ಟಾಧೀಕಾರ 19 ರಂದು

ವಾಡಿ: ಪಟ್ಟಣ ಸಮೀಪದ ಸುಕ್ಷೇತ್ರ ಹಳಕರ್ಟಿಯ ಶ್ರೀಸಿದ್ದೇಶ್ವರ ಧ್ಯಾನಧಾಮದ ಪೂಜ್ಯ ಶ್ರೀರಾಜಶೇಖರ ಸ್ವಾಮೀಜಿ ಅವರ ಪಟ್ಟಾಧೀಕಾರ ಮಹೋತ್ಸವ ಏ.೧೯ ರಂದು ಏರ್ಪಡಿಸಲಾಗಿದ್ದು, ಏ.೯ ರಿಂದ ಹನ್ನೊಂದು ದಿನಗಳ ಕಾಲ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.

ಬುಧವಾರ ಸಿದ್ದೇಶ್ವರ ಧ್ಯಾನಧಾಮದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ತಾಯಿ ತುಳಜಾಪುರ ಅಂಬಾಭವಾನಿಯ ಭಕ್ತರಾಗಿ ಎರಡು ಸಲ ನಿರ್ವಿಕಲ್ಪ ಸಮಾದಿ ಯಾಗ ಕೈಗೊಂಡಿರುವ ಮಹಾತಪಸ್ವಿ ಶ್ರೀರಾಜಶೇಖರ ಸ್ವಾಮೀಜಿ ಅವರು ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ.

ರಂಭಾಪುರಿ ಜಗದ್ಗುರು ಶ್ರೀಪ್ರಸನ್ನ ರೇಣುಕಾ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಪಾವನ ಸಾನಿಧ್ಯದಲ್ಲಿ ಏ.೧೯ ರಂದು ಪಟ್ಟಾಧೀಕಾರ ಮಹೋತ್ಸವ ನಡೆಯಲಿದ್ದು, ಇದಕ್ಕೂ ಮೊದಲು ಏ.೧೮ ರಂದು ಸಂಜೆ ೫:೦೦ ಗಂಟೆಗೆ ಜಗದ್ಗುರುಗಳು ಅಡ್ಡಪಲ್ಲಕಿ ಉತ್ಸವದ ಮೂಲಕ ಪುರಪ್ರವೇಶ ಮಾಡಲಿದ್ದಾರೆ.

ಅಂಬಾಭವಾನಿ ಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನದ ಶಿಖರಕ್ಕೆ ಕಳಸಾರೋಹಣ, ಪೂಜ್ಯರ ತುಲಾಭಾರ ನೆರವೇರಲಿದೆ. ಪೂಜ್ಯರ ಪಟ್ಟಾಧೀಕಾರ ಮಹೋತ್ಸವದಲ್ಲಿ ಜಿಲ್ಲೆಯ ಸಾವಿರಾರು ಜನ ಭಕ್ತರು ಪಾಲ್ಗೊಳ್ಳುವರು. ಏ.೯ ರಿಂದ ೧೯ರ ವರೆಗೆ ಹಳಕರ್ಟಿ ಧ್ಯಾನಧಾಮದಲ್ಲಿ ಪುರಾಣ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದು ವಿವರಿಸಿದರು.

ಪೂಜ್ಯ ಶ್ರೀ ರಾಜಶೇಖರ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ದೇವಸ್ಥಾನ ಪರಿಸರದಲ್ಲಿ ದೇವಿಯ ಪೂಜೆ ಮಾಡಿಕೊಂಡು ಬರುವ ಮೂಲಕ ಇದನ್ನು ಸಿದ್ದೇಶ್ವರ ಧ್ಯಾನಧಾಮ ಎಂದು ಪರಿವರ್ತಿಸಿದ್ದೇವೆ. ಇನ್ನುಮುಂದೆ ಈ ಧ್ಯಾನಧಾಮವು ರಂಭಾಪುರಿ ಪೀಠದ ವ್ಯಾಪ್ತಿಗೆ ಸೇರುತ್ತಿದೆ. ಪರಿಣಾಮ ಧ್ಯಾನಧಾಮವು ರಂಭಾಪುರಿ ಪೀಠದ ಶಾಖಾ ಮಠವಾಗಿ ಬದಲಾಗಲಿದೆ. ಪಟ್ಟಾಧೀಕಾರ ಮಹೋತ್ಸವದ ಬಳಿಕ ಶ್ರೀಮಠವು ಮತ್ತಷ್ಟು ಧಾರ್ಮಿಕ ಕಾರ್ಯಗಳ ಸೇವೆಯಲ್ಲಿ ತೊಡಗಲಿದೆ. ಭಕ್ತರೇ ನನಗೆ ಆಸ್ತಿ. ಭಕ್ತರ ಭಾವನೆಗಳಿಗೆ ಪೂರಕವಾಗಿ ಮತ್ತು ಅವರ ಕಷ್ಟ ಸುಃಖಗಳಲ್ಲಿ ಭಾಗಿಯಾಗಿ ಶ್ರೀಮಠವನ್ನು ಉನ್ನತ ಮಟ್ಟಕ್ಕೇರಿಸುವ ಛಲವಿದೆ. ಭಕ್ತರು ನನ್ನ ಜತೆಗಿದ್ದರೆ ಸಾಕು ಅದೇ ನನಗೆ ಶಕ್ತಿ ಎಂದರು.

ಬೆನಕನಹಳ್ಳಿ ಶ್ರೀಕೇದಾರಲಿಂಗ ಸ್ವಾಮೀಜಿ, ವೀರಶೈವ ಲಿಂಗಾಯತ ಸಮಾಜದ ವಾಡಿ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರ, ಮುಖಂಡರಾದ ನೀಲಕಂಠಪ್ಪ ಸಾಹು ಸಂಗಶೆಟ್ಟಿ, ಪ್ರಕಾಶ ಚಂದನಕೇರಿ, ಸಿದ್ದು ಮುಗುಟಿ, ಮಲ್ಲಿಕಾರ್ಜುನ ಕಟ್ಟಿಮನಿ, ನಿಂಗಣ್ಣ ಇರಗೊಂಡ, ವೀರೇಶ ಕೊಟಗಿ, ಮಹ್ಮದ್ ಸಲೀಮ್, ಭಾಗಣ್ಣ ಹೊನಗುಂಟಿ, ಶರಣು ಹಿಟ್ಟಿನ್, ಸಿದ್ದು ಭಾವಿಕಟ್ಟಿ, ಮೈಲಾರಿ ಸುಣಗಾರ, ಪ್ರೇಮ ರಾಠೋಡ, ರವಿ ನಾಯಕ, ವಿಜಯ ನಾಲವಾರ ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

43 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420