ಬಿಸಿ ಬಿಸಿ ಸುದ್ದಿ

“ಅಂತರಂಗ ಶುದ್ಧ ವಿಲ್ಲದವರ ಸಂಗವು ಸಿಂಗಿ ಕಾಲ ಕೂಟ ವಿಷವು ಕೂಡಲಸಂಗಯ್ಯ”

ಸಾರಸಜ್ಜನರ ಸಂಗವ ಮಾಡೋದು ದೂರ ದುರ್ಜನರ ಸಂಗ ಬೇಡವಯ್ಯ ಆವಾ ಹಾವಾದಡೆನು ವಿಷ ಒಂದೆ , ಅಂಥವರ ಸಂಗ ಬೇಡವಯ್ಯ ಅಂತರಂಗ ಶುದ್ಧ ವಿಲ್ಲದವರ ಸಂಗವು ಸಿಂಗಿ ಕಾಲ ಕೂಟ ವಿಷವು ಕೂಡಲಸಂಗಯ್ಯ

ಅಯ್ಯೋ! ಇತ್ತೀಚಿನ ದಿನಗಳಲ್ಲಿ ಈ ವಚನ ನನಗೆ ತುಂಬಾ ಧೈರ್ಯ ತುಂಬುತ್ತಿದೆ, ಯಾಕೆಂದರೆ ಅಂತಹ ಸನ್ನಿವೇಶಗಳನ್ನು ನಾನು ಮತ್ತೆ ಮತ್ತೆ ಎದುರು ನೋಡುತ್ತಿದ್ದೇನೆ.

ವಿಶ್ವಗುರು ಬಸವಣ್ಣನವರು ವಿಶ್ವದ ಬೆಳಕು, ಅವರ ತತ್ವ ಆದರ್ಶಗಳು ಎಲ್ಲಾ ರೀತಿಯ ಅಜ್ಞಾನ ಅಂಧಕಾರವನ್ನು ಹೊಡೆದೋಡಿಸುವ ಶಕ್ತಿ ಪಡೆದಿದೆ. ಅಂತಹ ಬೆಳಕನ್ನು ಪಡೆದರು ಇಂದು ನಾವೆಲ್ಲ ಕತ್ತಲೆಯ ಕಡೆಗೆ ಓಡುತ್ತಿದ್ದೇವೆ.

ಯಾಕೆಂದರೆ ಬಸವಣ್ಣನವರ ಆಚರಣೆ ಮಾಡುತ್ತಲೇ ಬಾಯಿಯಿಂದ ಹೊಲಸು ಮಾತುಗಳು, ಇನ್ನೊಬ್ಬರ ಬಗ್ಗೆ ದಯವಿಲ್ಲದ ಮನೋಭಾವನೆ, ಕಳಕಳಿ ಇಲ್ಲದ ಉತ್ಕೃಷ್ಟ ಯೋಚನೆ , ಇಂಥವರನ್ನು ನೋಡಿ ಮನನೊಂದಿದೆ.

ಸಜ್ಜನರ ಸಹವಾಸ ಮಾಡುವ ದುರ್ಜನರಿಂದ ದೂರವಿರುವ ಅಗತ್ಯ ಅಂದು ಮಾತ್ರವಲ್ಲ ಇಂದು ಹೆಚ್ಚಾಗಿದೆ, ಅಂತರಂಗ ಬಹಿರಂಗ ಶುದ್ಧ ವಿರುವ ಶರಣರು ಸಿಗುವುದು ತುಂಬಾ ವಿರಳ,

ಅಂತರಂಗವು ಶುದ್ಧ ವಿಲ್ಲ ಬಹಿರಂಗವು ಶುದ್ದ ವಿಲ್ಲ ಮೇಲೆ ಬಸಪ್ಪ ಒಳಗೆ ವಿಷಪ್ಪ ಎನ್ನುವ ಸ್ಥಿತಿ ಇಂದಿನದಾಗಿದೆ.

ಅಂದು ಬಸವಣ್ಣನವರು ಬಿಟ್ಟು ಹೋಗಿರುವ ತತ್ವಗಳನ್ನು ಮೊದಲು ಅಧ್ಯಯನ ಮಾಡಬೇಕು ಅಧ್ಯಯನ ಮಾಡಿದ್ದನ್ನು ಅರ್ಥ ಮಾಡಿಕೊಂಡು ಆಚರಣೆಯಲ್ಲಿ ತರುವ ಪ್ರಮಾಣಿಕ ಪ್ರಯತ್ನ ಮಾಡಬೇಕು, ಆದರೆ ಅದು ಯಾವುದು ಮಾಡದೆ

*ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿ* ಅಂತ ಹೇಳುವಂಥವರೇ ದ್ವೇಷ ಅಸೂಹೆಗಳನ್ನ ತುಂಬಿಕೊಂಡು ದಯವನ್ನು ಮರೆತಿದ್ದಾರೆ.

ವಿಶ್ವಗುರು ಬಸವಣ್ಣನವರು ಮೇಲ್ಜಾತಿಯಲ್ಲಿ ಹುಟ್ಟಿದ್ದರು, ಮೇಲು ಎನ್ನುವ ಅಹಂಕಾರ ಅವರಿಗೆ ಯಾವತ್ತಿಗೂ ಇರಲಿಲ್ಲ,

ಜಾತಿಯ ನಿರಶನ ಮಾಡಿಕೊಂಡು ಎಲ್ಲರೂ ಜೊತೆ ಒಂದಾಗಿ ಬಾಳಿದರು ಹೊಲೆಗಂಡಲ್ಲದೆ ಪಿಂಡದ ನೇಲೆಗ್ರಾಯಶ ಇಲ್ಲ ಎಂದು ಹೇಳುತ್ತಿದ್ದರು, ಎಲ್ಲರ ಹುಟ್ಟಿನ ಗುಣ ಒಂದೇ ರೀತಿಯಾಗಿರುವ ಮನುಷ್ಯ , ಮನುಷ್ಯರಲ್ಲಿ ಜಾತಿಭೇದ ಅಹಂಕಾರ ದ್ವೇಷ ಅಸೂಹೆಗಳನ್ನು ತುಂಬಿಕೊಂಡು ಈ ದಿನ ತುಳುಕಾಡುತ್ತಿದ್ದಾನೆ. ಎಂತಹ ವಿಪರ್ಯಾಸ ಅಲ್ಲವೇ???

-ಮೇನಕಾ ಪಾಟೀಲ್

emedialine

Recent Posts

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

1 hour ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

1 hour ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

1 hour ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

2 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

5 hours ago

ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಸಂಸ್ಕಾರ ಶಿಬಿರದ ಸಮರೂಪ 21ಕ್ಕೆ

ಕಲಬುರಗಿ : ತಾಲೂಕಿನ ಹೊನ್ನಕಿರಣಗಿ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ 41 ದಿನಗಳ ಪರ್ಯಂತರ ಜರುಗಿಬಂದ 17ನೇ ವರ್ಷದ…

8 hours ago