ಕಸಾಪದಿಂದ ರವಿ ಕಿರಣ ಕೃತಿ ಜನಾರ್ಪಣೆ: ಶಾಲಾ ಮಕ್ಕಳಿಗೆ ರವಿ ಕಿರಣ ಬೆಳಕಾಗಲಿ | ಪತ್ರಕರ್ತ ವಾದಿರಾಜ

ಕಲಬುರಗಿ: ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುತ್ತಿರುವ ವ್ಯವಸ್ಥೆಯಲ್ಲಿ ನೀತಿ ಮೌಲ್ಯಗಳು ಅವಶ್ಯವಾಗಿವೆ. ಈ ದಿಸೆಯಲ್ಲಿ ನಮ್ಮ ಶಾಲಾ ಮಕ್ಕಳಿಗೆ ಸುಭಾಷಿತ, ನುಡಿ ಮುತ್ತುಗಳು ಅರ್ಥೈಸುವ ಕಾರ್ಯ ಮಾಡಬೇಕಾಗಿದೆ ಎಂದು ಹಿರಿಯ ಪತ್ರಕರ್ತ ವಾದಿರಾಜ ವ್ಯಾಸಮುದ್ರ ಹೇಳಿದರು.

ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ರವೀಂದ್ರಕುಮಾರ ಭಂಟನಳ್ಳಿ ಅವರ ಸಂಗ್ರಹಿತ `ರವಿ ಕಿರಣ’ ಎಂಬ ಶುಭಾಷಿತಗಳನ್ನೊಳಗೊಂಡಿರುವ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ಮಕ್ಕಳೋಉ ಮೊಬೈಲ್ ಸಂಸ್ಕøತಿಗೆ ಒಗ್ಗಿರುವದರಿಂದ ನೀತಿ ಮಾತುಗಳು ದೂರಾಗಿವೆ. ಹೀಗಾಗಿ ಶಾಲೆಯಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆಗಳ ಜತೆಗೆ ರವಿಕಿರಣ ಕೃತಿಯ ಸುಭಾಷಿತಗಳು ಕೂಡ ಓದಿಸಬೇಕಾಗಿದೆ. ಆಗ ಮಕ್ಕಳಲ್ಲಿ ಶಿಸ್ತು, ಪ್ರಮಾಣಿಕತೆ, ಸ್ವಾಭಿಮಾನ ಬೆಳೆಯಬಹುದು. ಅವರು ಮುಂದೆ ನಾಡಿನ ಉತ್ತಮ ಪ್ರಜೆಗಳಾಗಿ ಬದುಕಬಹುದಾಗಿದೆ. ಮತ್ತು ರವಿ ಕಿರಣ ಕೃತಿ ಎಲ್ಲರೂ ಓದಲೆಬೇಕಾದ ಪುಸ್ತಕವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜಕ್ಕೆ ಒಳಿತು ಮಾಡುವ ಮನಸ್ಸು ಎಲ್ಲರಲ್ಲಿ ಬರಬೇಕಾದರೆ, ರವಿ ಕಿರಣದಂಥ ಕೃತಿಗಳು ಹೆಚ್ಚು ಹೆಚ್ಚಾಗಿ ಪ್ರಕಟವಾಗಬೇಕು. ಹಗುರ ಜೀವನ ಹಗುರ ಮನಸ್ಸು ಹೊಂದಿದ ಬದುಕು ನಮ್ಮದಾಗಬೇಕು. ಕನ್ನಡ ಸಾರಸ್ವತ ಲೋಕಕ್ಕೆ ಈ ರವಿ ಕಿರಣ ಪುಸ್ತಕ ಎಲ್ಲರ ಜೀವನ ಶುದ್ಧಿಗೊಳಿಸುವಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು.

ಮಾಜಿ ಬಾಹ್ಯಕಾಶ ವಿಜ್ಞಾನಿ ಪ್ರೊ. ಬಿ.ಎ.ಪಾಟೀಲ ಮಹಾಗಾಂವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ಮನೆ ಸುಶಿಕ್ಷಿತವಾಗಿರಬೇಕು. ಮನಸ್ಸು ಶುದ್ಧಗೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಹಿರಿಯರ ಅನುಭಾವದ ಮಾತುಗಳು ಕೇಳಬೇಕು ಮತ್ತು ಅವುಗಳಂತೆ ಬದುಕಿದರೆ ನಮ್ಮ ಸಮಾಜದ ಪರಿವರ್ತನೆ ಆಗಬಲ್ಲದು ಎಂದರು.

ಸಾಹಿತ್ಯ ಪ್ರೇರಕ ಜಗದೀಶ ಮರಪಳ್ಳಿ, ಕೃತಿ ಸಂಪಾದಕ ರವೀಂದ್ರಕುಮಾರ ಭಂಟನಳ್ಳಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಸಿದ್ಧಲಿಂಗ ಜಿ ಬಾಳಿ, ಶರಣರಾಜ್ ಚಪ್ಪರಬಂದಿ, ಧರ್ಮರಾಜ ಜವಳಿ ಮಾತನಾಡಿದರು.
ಪ್ರಮುಖರಾದ ಶಕುಂತಲಾ ಪಾಟೀಲ ನಾಗಪ್ಪ ಎಂ ಸಜ್ಜನ್ ಯಡ್ರಾಮಿ, ರಾಜೇಂದ್ರ ಮಾಡಬೂಳ, ಕವಿರಾಜ ಪಾಟೀಲ, ಶರಣಬಸಪ್ಪ ಬೆಳಕೇರಿ, ಬಸವರಾಜ ಧೂಳಾಗುಂಡಿ, ಶಿಲ್ಪಾ ಜೋಶಿ, ಜ್ಯೋತಿ ಕೋಟನೂರ, ಎಸ್ ಕೆ ಬಿರಾದಾರ, ಪ್ರಭುಲಿಂಗ ಮೂಲಗೆ, ಸಂತೋಷ ಕುಡಳ್ಳಿ, ಬಸವರಾಜ ಪುಣ್ಯಶೆಟ್ಟಿ, ಕಲ್ಯಾಣಪ್ಪ ಬಿರಾದಾರ, ಕಲ್ಯಾಣಕುಮಾರ ಶೀಲವಂತ, ಶಾಮತಲಿಮಗ ಪಾಟೀಲ ಕೋಳಕೂರ, ಶ್ರೀಕಾಂತ ಪಾಟೀಲ ತಿಳಗೂಳ, ಎಂ. ಜೆ ಪಾಟೀಲ, ಶಿವಶರಣ ಹಡಪದ, ಎಚ್ ಎಸ್ ಬರಗಾಲಿ, ರೇವಣಸಿದ್ದಪ್ಪ ಜೀವಣಗಿ, ಬಾಬುರಾವ ಪಾಟೀಲ, ವಿನೋದಕುಮಾರ ಜೇನವೇರಿ, ಕವಿತಾ ಮಾಲಿಪಾಟೀಲ ಮಂದೇವಾಲ, ವಿದ್ಯಾಸಾಗರ ದೇಶಮುಖ, ನಾಗೇಂದ್ರಪ್ಪ ಮಾಡ್ಯಾಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದ ಪ್ರಮುಖರಾದ ಸೋಮಶೇಖರ ಮಾಲಿಪಾಟೀಲ ತೇಗಲತಿಪ್ಪಿ, ವಿಜಯಕುಮಾರ ಚೇಂಗಟಿ ಹೊಸಳ್ಳಿ, ಸಂಜೀವಕುಮಾರ ಡೊಂಗರಗಾಂವ, ವಾಣಿ ಗಂಗಾಧರ ಹಿರೇಮಠ, ವಿಜಯಲಕ್ಷ್ಮೀ ಗೊಬ್ಬೂರಕರ್ ಅವರನ್ನು ಸತ್ಕರಿಸಲಾಯಿತು.

emedialine

Recent Posts

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

3 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

7 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

8 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

10 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

21 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420