ಕಲಬುರಗಿ: ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವಪರ ಸಂಘಟನೆಗಳು ಹಾಗೂ ಕಾಯಕ ಶರಣರ ಒಕ್ಕೂಟಗಳ ಸಹಯೋಗದಲ್ಲಿ ಇಂದು ಆನಂದ ನಗರದ ಬಸವ ಮಂಟಪದಲ್ಲಿ ಮೊದಲ ಮಹಿಳಾ ಕವಿಯಿತ್ರಿ ಶರಣೆ ಅಕ್ಕಮಹಾದೇವಿ ಹಾಗು ಶರಣ ಹರಳಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಬದಲ್ಲಿ ನಿಲಮ್ಮತಾಯಿ ನೆಲೋಗಿಯವರು ಮಾತನಾಡಿ “ಅಕ್ಕಮಹಾದೇವಿಯವರು ಮಹಾನ ವೈರಗ್ಯನಿಧಿಯಾಗಿದ್ದರು. ಅವರು ತಮ್ಮ ಆಧ್ಯಾತ್ಮಿಕ ಸಾಧನೆಗಾಗಿ ಅರಮನೆಯನ್ನು ತ್ಯಜೀಸಿ ಕಲ್ಯಾಣಕ್ಕೆ ಬಂದರು. ಕಲ್ಯಾಣದ ಶರಣ ಚಳುವಳಿಯಲ್ಲಿ ಭಾಗವಹಿಸಿ ವಚನಗಳನ್ನು ಬರೆಯುವ ಮೂಲಕ 12ನೇ ಶತಮಾನದ ಸಾಮಾಜಿಕ ಕ್ರಾಂತಿಗೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅವರು ಎಲ್ಲಾ ಮಹಿಳೆಯರಿಗೆ ಆದರ್ಶಪ್ರೀಯರಾಗಿದ್ದಾರೆ” ಎಂದು ಹೇಳಿದರು.
ಶರಣೆ ಶೀಲಾ ಹತ್ತಿ ಕೂಡ ಮಾತನಾಡಿ “ಶರಣ ಹರಳಯ್ಯ ದಂಪತಿಗಳು ಕಾಯಕ ಜೀವಿಗಳಾಗಿದ್ದು. ಬಸವಣ್ಣನವರ ಅಪ್ಪಟ ಪ್ರೇಮಿಗಳಾಗಿದ್ದರು. ಗುರು ಬಸವಣ್ಣನವರಿಗೆ ತಮ್ಮ ತೊಡೆಯ ಚರ್ಮದಿಂದ ಪಾದರಕ್ಷೆ ಮಾಡಿ ತಮ್ಮ ಪ್ರೀತಿ ಮೇರಿದಿದ್ದನ್ನು ನಾವು ನೋಡಬಹುದು. ಅವರ ಆ ಪಾದರಕ್ಷೆಗಳು ಇಂದಿಗೂ ಸೆಡಂ ತಾಲೂಕಿನ ಬಿಜನಳ್ಳಿಯಲ್ಲಿರುವುದನ್ನು ನಾವು ಕಾಣಬಹುದಾಗಿದೆ. ಶರಣ ಹರಳಯ್ಯ ಮತ್ತು ಶರಣ ಮದುವಯ್ಯಗಳ ಶರಣ ಕುಟುಂಬಗಳ ನಡುವಿನ ಮದುವೆ ಕಲ್ಯಾಣ ಕ್ರಾಂತಿಗೆ ಕಾರಣವಾಗಿರುವುದನ್ನು ನಾವು ತಿಳಿದಿದ್ದೇವೆ” ಎಂದು ಹೇಳಿದರು.
ಇದೆ ಸಂದರ್ಭದಲ್ಲಿಶರಣೆ ಶಾರದ ಓಗಿ ಮತ್ತು ಶರಣೆ ಸಾವಿತ್ರಿ ಪಾಲ್ಕೆ ವಚನಗಾಯನ ಮಾಡಿದರು. ಶರಣ ಆರ್ ಜಿ ಶಟಗಾರ ಕಾರ್ಯಕ್ರಮ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ಕಲಬುರಗಿಯ ಅಧ್ಯಕ್ಷರಾದ ಪ್ರಭುಲಿಂಗ ಮಹಾಗಾಂವಕರ್, ಸಂಗಮೇಶ ಗುಬ್ಬೆವಾಡ, ಶಿವಕುಮಾರ ಬಿದರಿ, ಮಹಾಂತೇಶ ಕಲಬುರಗಿ, ಶಶಿಕಾಂತ ಪಸಾರ, ಶಿದ್ರಾಮಪ್ಪ ಲದ್ದೆ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಹಾಗು ರಾಷ್ಟ್ರೀಯ ಬಸವ ದಳದ ಪದಾದಿಕಾರಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.
ಕಲಬುರಗಿ : ಪದವಿ ಹಂತದ ವಿದ್ಯಾರ್ಥಿಗಳ ವಿಷಯಗಳಲ್ಲಿನ ಆಸಕ್ತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ಉತ್ತಮ ಸಂವಹನದೊಂದಿಗೆ ಗುಣಮಟ್ಟದ ಕೌಶಲ್ಯ…
ಕಲಬುರಗಿ: ಬುದ್ಧ, ಬಸವ, ಅಂಬೇಡ್ಕರ್ ಜಯಂತಿಯನ್ನು ಕೇವಲ ಮೆರವಣಿಗೆಗೆ ಸೀಮಿತಗೊಳಿಸದೆ, ಅವರ ಬದುಕು ಬೋಧನೆಯನ್ನು ಅನುಸರಿಸಬೇಕು ಎಂದು ಕನ್ನಡ ಅಭಿವೃದ್ಧಿ…
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ಸಿದ್ದಪ್ಪ ಹೊಸಮನಿ ಅವರು " ಡಾ. ಕೆ. ಆರ್.…
ಕಲಬುರಗಿ; ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಕ್ಷೇತ್ರದ ವ್ಯಾಪ್ತಿಗೆ…
ಸುರಪುರ: ನಗರದಲ್ಲಿ ವಾಸವಿ ಜಯಂತಿ ಆಚರಣೆ ಅಂಗವಾಗಿ ಅದ್ಧೂರಿ ಮೆರವಣಿಗೆ ನಡೆಸಲಾಗಿದೆ.ಮೊದಲಿಗೆ ನಗರದ ಹಳೆ ಬಸ್ ನಿಲ್ದಾಣದ ಬಳಿಯಲ್ಲಿನ ಕನ್ನಿಕಾ…
ಸುರಪುರ: ತಾಲೂಕಿನಲ್ಲಿ ಮುಂಗಾರು ಆರಂಭಗೊಂಡು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದರಿಂದ ಕೃಷಿ ಬೀಜ ಗೊಬ್ಬರ ಮಾರಾಟ ಅಂಗಡಿಗಳಿಗೆ ತಾಲೂಕು ಸಹಾಯಕ ಕೃಷಿ…