ಕಲಬುರಗಿ: ಇದೇ ದಿ.12 ರಂದು ಜರುಗಿದ ಪಿಎಚ್.ಡಿ ಪ್ರವೇಶಾತಿಯ ಅರ್ಥಶಾಸ್ತ್ರ ಸೇರಿದಂತೆ ಕೆಲವು ವಿಷಯಗಳಲ್ಲಿ, ಕೆಲವು ಪರೀಕ್ಷಾ ಕೊಠಡಿಯಲ್ಲಿ ಪರೀಕ್ಷಾರ್ಥಿಗಳು ಮೋಬೈಲ್ ಬಳಸಿ ಉತ್ತರಗಳನ್ನು ಕೇಳಿ ಬರೆದಿರುವುದು, ಗೂಗಲ್ನಲ್ಲಿ ಹುಡುಕಿ, ಪರಸ್ಪರ ಚರ್ಚೆ ಮಾಡಿ ಉತ್ತರಿಸಿರುವುದು, ಪ್ರಾಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಹೇಳಿಕೆ ಮತ್ತು ಪತ್ರಿಕೆಗಳ ಮೂಲಕ ಎಲ್ಲರಿಗೂ ತಿಳಿದ ವಿಷಯವಾಗಿದೆ. ಇದರಿಂದ ಬಡ, ಪ್ರತಿಭಾವಂತ ವಿದ್ಯಾಥಿಗಳಿಗೆ ಅನ್ಯಾಯವಾಗಿದ್ದು, ಅತ್ಯಂತ ಬಂದೋಬಸ್ತ್ನಲ್ಲಿ ಶೀಘ್ರದಲ್ಲಿ ಪುನಃ ಪರೀಕ್ಷೆ ಏರ್ಪಡಿಸುವ ಮೂಲಕ ಪ್ರಾಮಾಣಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಹೋರಾಟಗಾರ, ಸಮಾಜ ಸೇವಕ ಡಾ.ಪ್ರಕಾಶ ಹಾಗರಗಿ ಮನವಿ ಮಾಡಿದ್ದಾರೆ.
ಅವರು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯೊಂದಿಗೆ ಶುಕ್ರವಾರ ಕುಲಪತಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕೊಠಡಿಯಲ್ಲಿ ಪರೀಕ್ಷೆ ಮುಗಿಯುವ ತನಕ ಮೋಬೈಲ್ನಲ್ಲಿ ಉತ್ತರಗಳನ್ನು ಕೇಳಿ ಬರೆಯುತ್ತಿದ್ದ ಪಕ್ಕದ ವಿದ್ಯಾಥಿಯೊಬ್ಬ ಪ್ರಶ್ನಿಸಿದಕ್ಕೆ ’ಹೊರಗಡೆ ನೀನು ಬಾ, ನಿನ್ನ ನೋಡಿಕೊಳ್ಳುವೆ’ ಎಂದು ಜೀವ ಬೆದರಿಕೆ ಹಾಕಿರುವುದು ಅವ್ಯವಹಾರ, ದುರ್ನಡತೆ, ಅಶಿಸ್ತು, ಪರೀಕ್ಷಾ ಪಾವಿತ್ರ್ಯತೆಯ ಉಲ್ಲಂಘನೆಯಾಗಿದ್ದು, ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಂಡು, ಪುನಃ ಪರೀಕ್ಷೆ ನಡೆಸುವ ಮೂಲಕ ನಿಷ್ಠಾವಂತರ ಆಯ್ಕೆ ಮಾಡಬೇಕೆಂದು ಕೋರಿದ್ದಾರೆ.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಪ್ರಭಾರಿ ಕುಲಪತಿ ಪ್ರೊ.ಪರಿಮಳ ಅಂಬೇಕರ್, ಈ ವಿಷಯದ ಬಗ್ಗೆ ನಾನೂ ಕೂಡಾ ಪತ್ರಿಕೆಗಳಲ್ಲಿನ ವರದಿಯನ್ನು ಗಮನಿಸಿದ್ದೇನೆ. ಪ್ರಾಮಾಣಿಕ ಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ, ವಿಷಯ ಸಂಬಂಧಿಕರ ಜೊತೆಗೆ ಶೀರ್ಘದಲ್ಲಿ ಚರ್ಚಿಸಿ, ಪರಿಶೀಲಿಸಿ, ಸೂಕ್ತವಾದ ಮುಂದಿನ ಕ್ರಮ ಕೈಗೊಳ್ಳುತ್ತೇನೆಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಪಿಎಚ್.ಡಿ ಪರೀಕ್ಷೆ ಬರೆದ ಹಲವರಿದ್ದರು.
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…
ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…