ಬಿಸಿ ಬಿಸಿ ಸುದ್ದಿ

ಬುದ್ಧರ ಸಂದೇಶವನ್ನು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಳ್ಳಿ

ಸುರಪುರ:ಮಹಾತ್ಮ ಗೌತಮ್ ಬುದ್ಧರ ಸಂದೇಶವನ್ನು ಎಲ್ಲರು ಬದುಕಿನಲ್ಲಿ ಅಳವಡಿಸಿಕೊಂಡು ಬದುಕು ಹಸನಾಗಿಸಿಕೊಳ್ಳಬೇಕು ಎಂದು ನಾಗರತ್ನ ಬಂತೇಜಿ ತಿಳಿಸಿದರು.

ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಗೌತಮ್ ಬುದ್ಧರ 2568ನೇ ಬುದ್ಧ ಜಯಂತಿ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ,ಪ್ರತಿಯೊಬ್ಬರಿಗೂ ಧ್ಯಾನ ಮುಖ್ಯವಾಗಿದೆ. ಮಹಾತ್ಮ ಗೌತಮ್ ಬುದ್ಧರು ಧಮ್ಮದ ಮೂಲಕ ಎಲ್ಲರಿಗೂ ಶಾಂತಿ ಸಂದೇಶ ನೀಡಿದ್ದಾರೆ,ಜಗತ್ತಿನ ಎಲ್ಲ ರಾಷ್ಟ್ರಗಳು ಇಂದು ಮಹಾತ್ಮ ಗೌತಮ್ ಬುದ್ಧರನ್ನು ಸ್ಮರಿಸುತ್ತಾರೆ,ಅಲ್ಲದೆ ಬೌದ್ಧ ಧರ್ಮಿಯರಾದ ಎಲ್ಲರು ಬುದ್ಧನ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಆ ಕುಟುಂಬದಲ್ಲಿ ಸಂತೋಷ ಇರಲಿದೆ ಎಂದರು.

2568 ನೇ ವೈಶಾಖ ಮಾಸ ಹುಣ್ಣಿಮೆ ಬುದ್ಧ ಪೂರ್ಣಿಮೆ ಸಿದ್ಧಾರ್ಥ ಬುದ್ಧನ ಜಯಂತ್ಯೋತ್ಸವದ ಸಂದರ್ಭದಲ್ಲಿ ಬೌದ್ಧ ಅನುಯಾಯಿಗಳ ಕುಟುಂಬಗಳ ಸಮ್ಮುಖದಲ್ಲಿ ಟ್ರಸ್ಟ್ ವತಿಯಿಂದ ಬುದ್ದ ಪೂರ್ಣಿಮ ಪ್ರಯುಕ್ತ ವಿಶೇಷವಾಗಿ ನೇರವೆರಿಸಲಾಯಿತು.

ಇದೇ ಸಂದರ್ಭದಲ್ಲಿ ಬೌದ್ಧ ಉಪಾಸಕ ಆದಪ್ಪ ಹೊಸ್ಮನಿ,ತಕ್ಷಶಿಲಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಂಬಿಕಾ ಡಾ.ಮುಕುಂದ ಯಾನಗುಂಟಿ,ಡಾ.ಪ್ರಕಾಶ ಬಡಿಗೇರ ಮಾತನಾಡಿದರು.ಮಾಳಪ್ಪ ಕಿರದಳ್ಳಿ ಕುಟುಂಬ ದಿಂದ ಭೋಜನದಾನ ನೆರವೇರಿಸಿದರು.

ಕಾರ್ಯಾಕ್ರಮದಲ್ಲಿ ಬಾಗವಹಿಸಿದವರು ಮಾನಪ್ಪ ಕರಡಕಲ್, ಭೀಮರಾಯ ಸಿಂದಗೇರಿ, ವೆಂಕಟೇಶ್ವರ್ ಸುರಪುರ, ಡಾ.ಪ್ರಕಾಶ ಬಡಿಗೇರ ಸಿಂದಗಿ, ಹಣಮಂತ ಬಾಂಬೆಕರ್, ಹಣಮಂತ ಭದ್ರಾವತಿ, ಶಿವಶಂಕರ್ ಹೊಸಮನಿ, ಮಂಜು ಹೊಸಮನಿ, ಚಂದಪ್ಪ ಪಂಚಮ್ ಚನ್ನಬಸವ ಚಲವಾದಿ, ಶರಣು ತಳವಾರಗೇರಾ, ಪರಶು ಹಸನಾಪುರ, ಶರಣು ಹಸನಾಪುರ, ಪ್ರಕಾಶ ಮುಷ್ಠಳ್ಳಿ, ನಾಗರಾಜ್ ಬೇವಿನಾಳ, ಅವಿನಾಶ ಹೊಸಮನಿ, ಬಸವರಾಜ್ ದೊಡ್ಡಮನಿ, ಹಣಮತ ತೇಲ್ಕರ್, ಮಂಜುಳಾ ಸುರಪುರ, ಶಿಲ್ಪಾ ಹುಲಿಮನಿ, ಭಿಮಬಾಯಿ ಕಲ್ಲದೇವನಹಳ್ಳಿ,ಬಸಮ್ಮ ಹುಲಿಮನಿ, ಶಿವಮೊಗ್ಗೆಮ್ಮ ಹೊಸಮನಿ, ಸುನಿತಾ ಕಿರದಳ್ಳಿ, ನಾಗರತ್ನಾ ಹೊಸಮನಿ, ಶಿವಲೀಲಾ ದೇವಿಕೆರಿ, ಕವಿತಾ ಬಡಿಗೇರ್, ಯಲ್ಲಮ್ಮ ತೇಲ್ಕರ್, ಇತರೇ ಮಹಿಳೆಯರು ಮಕ್ಕಳು ಅನೇಕರು ಬಾಗವಹಿಸಿದ್ದರು.

emedialine

Recent Posts

ವಾಡಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಅವರಿಗೆ ಸನ್ಮಾನ

ವಾಡಿ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯ ಉಪಾಧ್ಯಕ್ಷರು,ಮಾಜಿ ಶಿಕ್ಷಣ ಸಚಿವರು ಹಾಗು ಕೊಳ್ಳೇಗಾಲದ ಮಾಜಿ ಶಾಸಕರಾದ…

7 hours ago

ಕಲಬುರಗಿ ಡಿ.ಸಿ. ವಿರುದ್ಧ ಸುಳ್ಳು ಆರೋಪ: ಕಾನೂನು ಕ್ರಮಕ್ಕೆ‌ ಒತ್ತಾಯಿಸಿದ ಭೀಮ್ ಅರ್ಮಿ ಮನವಿ

ಕಲಬುರಗಿ: ದಕ್ಷ ಮಹಿಳಾ ಅಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರ ವಿರುದ್ಧ ಇತ್ತೀಚೆಗೆ ಕೆಲವರು ಇಲ್ಲಸಲ್ಲದ ಆರೋಪ…

9 hours ago

ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರ: ಪ್ರೀತಿ ಹೊನ್ನಗುಡಿ

ಬೆಂಗಳೂರು: ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈಗ ಗ್ರಾಹಕರಿಗೆ ಅಕ್ಷರಶಃ ಬೆಲೆಯೇರಿಕೆಯ ವಿಷವುಣಿಸುತ್ತಿದೆ. ಹಾಲು ಉತ್ಪಾದಕರಿಗೆ…

9 hours ago

ಬಗರ್ ಹುಕುಂ ಅರ್ಜಿ ಕೂಡಲೆ ಇತ್ಯರ್ಥಪಡಿಸಿ; ತಹಶೀಲ್ದಾರರಿಗೆ ಬಿ.ಫೌಜಿಯಾ ತರನ್ನುಮ್ ಸೂಚನೆ

ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಸಾಗುವಳಿಯನ್ನು ಸಕ್ರಮಗೊಳಿಸುವ ನಮೂನೆ 50, 53 ಹಾಗೂ 57 ಬಗರ್ ಹುಕುಂ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ…

10 hours ago

ಮಹಿಳೆಯರು ಶಿಕ್ಷಿತರಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ; ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಕರೆ

ಗೊಬ್ಬೂರನಲ್ಲಿ ಮಹಿಳಾ ಅರೋಗ್ಯ ತಪಾಸಣಾ‌ ಶಿಬಿರ ಉದ್ಘಾಟನೆ ಕಲಬುರಗಿ; ಮಹಿಳೆಯರು ಶಿಕ್ಷಿತರಾಗಿ ತಮ್ಮ ಹಕ್ಕುಗಳ ಪಡೆಯಬೇಕು. ಜೊತೆಗೆ ಪರುಷ ಪ್ರಧಾನವಾದ…

10 hours ago

ಬಲಿಷ್ಠ ರಾಷ್ಟ್ರ ಕಟ್ಟಲು ಗುಣಮಟ್ಟದ ಶಿಕ್ಷಣ ಅಗತ್ಯ; ಸರಡಗಿ ಶ್ರೀಗಳು

ಕಲಬುರಗಿ; ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಬಲಿಷ್ಠ ರಾಷ್ಟ್ರ ಕಟ್ಟಲು ಸಹಕಾರಿಗುತ್ತದೆ ಎಂದು ಶ್ರೀನಿವಾಸ ಸರಡಗಿ ಪೂಜ್ಯರಾದ ಡಾ. ರೇವಣಸಿದ್ದ ಶಿವಾಚಾರ್ಯರು…

11 hours ago